My Blog List

Saturday, March 29, 2008

ಸಾಲ ಶಿಕ್ಷಣ Loan Education

Union Government of India is considering to provide 'Loan Education' to all children. According to report under this scheme all children in the country would be given the education on how to open bank account, how to use credit card and how to get loan! Do you think this is the need of the hour? What our children need? Whether they need loan education or education on savings? We should think this matter in the backdrop of farmer suicides who are under 'debt trap'

ಬೇಕಾದ್ದು 'ಸಾಲ' ಶಿಕ್ಷಣವೋ?

'ಉಳಿತಾಯ' ಶಿಕ್ಷಣವೋ?

ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ' ಎಂಬುದಾಗಿ ಸರ್ವಜ್ಞ ತನ್ನ ವಚನಗಳಲ್ಲಿ ಹೇಳಿದ್ದು ನಮಗೆ ಮರೆತು ಹೋಗುತ್ತಿದೆಯೇ?


ನೆತ್ರಕೆರೆ ಉದಯಶಂಕರ

ದೇಶದ ಎಲ್ಲಾ ಮಕ್ಕಳಿಗೆ ಸದ್ಯದಲ್ಲೇ ಸಾಲ ಪಡೆಯುವ ವಿಧಾನ ಕಲಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂಬ ವರದಿಯೊಂದು ಬಂದಿದೆ. ದೇಶದ ಎಲ್ಲ ಶಾಲಾ ಮಕ್ಕಳೂ ಬ್ಯಾಂಕ್ ಖಾತೆ ತೆರೆಯುವುದು, ಕ್ರೆಡಿಟ್ ಕಾರ್ಡ್ ಬಳಸುವುದು, ಹಾಗೂ ಸಾಲ ಪಡೆಯುವ ವಿಧಾನವನ್ನು ಕಲಿಯಲಿದ್ದು ಇಂತಹ ವಿಷಯಗಳ ಬಗ್ಗೆ ಪಠ್ಯಕ್ರಮ ಆರಂಭಿಸುವ ಬಗ್ಗೆ ಪರಿಶೀಲನೆ ನಡೆದಿದೆ.

ಕೇಂದ್ರ ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿ (ಬಂಡವಾಳ ಮಾರುಕಟ್ಟೆ) ಕೆ.ಪಿ. ಕೃಷ್ಣನ್ ಅವರ ಪ್ರಕಾರ ಕೇಂದ್ರ ಹಣಕಾಸು ಸಚಿವಾಲಯವು ಈ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮ ಆರಂಭಿಸಲು ಮಾನವ ಸಂಪನ್ಮೂಲ ಇಲಾಖೆಯ ಜೊತೆ ಸಮಾಲೋಚನೆ ನಡೆಸುತ್ತಿದೆ.

ಆದಷ್ಟು ಬೇಗ ಶಾಲಾ ಶಿಕ್ಷಣ ಪಠ್ಯಗಳಲ್ಲಿ ಆರ್ಥಿಕ ಶಿಕ್ಷಣ ವಿಧಾನವನ್ನು ಸೇರಿಸುವಂತೆ ಎನ್ ಸಿಇಆರ್ ಟಿಗೆ ಹಣಕಾಸು ಸಚಿವಾಲಯ ಸೂಚಿಸಿದೆ. ದೇಶೀಯ ಬಂಡವಾಳ ಹೂಡಿಕೆದಾರರು ಹಣಕಾಸು ಶಿಕ್ಷಣದ ಕೊರತೆಯಿಂದ ಮಾರುಕಟ್ಟೆಯಲ್ಲಿ ಸಂಕಷ್ಟ ಎದುರಿಸುತ್ತಿರುವುದು ಸರ್ಕಾರದ ಈ ನಿಲುವಿಗೆ ಕಾರಣ ಎಂಬುದು ಅವರ ಸಮರ್ಥನೆ.

'ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ' ಎಂಬುದಾಗಿ ಸರ್ವಜ್ಞ ತನ್ನ ವಚನಗಳಲ್ಲಿ ಹೇಳಿದ್ದು ನಮಗೆ ಮರೆತು ಹೋಗುತ್ತಿದೆಯೇ?

ಸಾಲ ಎಂದರೆ ಸಾಕು ಹರದಾರಿ ಓಡುತ್ತಿದ್ದ ಕಾಲ ಮುಗಿದು ಹೋಗಿದೆ. ಬ್ಯಾಂಕುಗಳು ಕೈಕಾಲು ಹಿಡಿದು ಸಾಲ ನೀಡಲು ಪೈಪೋಟಿ ನಡೆಸುತ್ತಿವೆ. ಸಾಲ ಸಿಕ್ಕಿದರೆ ಸಾಕು ಹಿರಿಹಿರಿ ಹಿಗ್ಗುವ ಕಾಲ ಬಂದು ಬಿಟ್ಟಿದೆ.

ನಮ್ಮ ಸರ್ಕಾರಗಳಂತೂ ಸಾಲ ಸಿಗುವ ಯಾವುದೇ ಅವಕಾಶ ಇದ್ದರೂ ಬಿಡದೆ ಸಾಲ ಪಡೆಯಲು ದುಂಬಾಲು ಬೀಳುತ್ತಿದೆ.

ಎಲ್ಲದರ ಪರಿಣಾಮ ಎಂದರೆ ಇಂದು ದೇಶದಲ್ಲಿ ಹುಟ್ಟುವ ಪ್ರತಿ ಮಗುವಿನ ತಲೆಯ ಮೇಲೂ ಸಹಸ್ರಾರು ರೂಪಾಯಿಗಳ ಸಾಲದ ಹೊರೆ ಇದೆ!

ಇದೆಲ್ಲದರ ಮಧ್ಯೆ ಈಗ ಶಾಲಾ ಹಂತದಲ್ಲೇ ಮಕ್ಕಳಿಗೆ 'ಸಾಲ ಪಡೆವ ಶಿಕ್ಷಣ' ನೀಡಲು ಸರ್ಕಾರ ಮುಂದಾಗಿದೆ! ಇದರಿಂದಾಗಿ ನಾವು ಪ್ರಗತಿಯ ಹೆಸರಿನಲ್ಲಿ ಮುಂದಕ್ಕೆ ಅಡಿ ಇಡುತ್ತಿದ್ದೇವೆಯೋ ಅಥವಾ ದಿನದಿಂದ ದಿನಕ್ಕೆ ಹಿಂದಕ್ಕೆ ಅಡಿ ಇಡುತ್ತಿದ್ದೇವೆಯೋ ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುವಂತಾಗಿದೆ.

ಆರ್ಥಿಕತೆ ಸದೃಢಗೊಳ್ಳುವುದು ಜನರಲ್ಲಿ ಉತ್ಪಾದಕತೆ ಹಾಗೂ ಉಳಿತಾಯದ ಮನೋವೃತ್ತಿ ಬಲಗೊಳ್ಳುವುದರಿಂದ ಹೊರತು ಸಾಲ ಪಡೆಯುವ ಮನೋವೃತ್ತಿ ಹೆಚ್ಚುವುದರಿಂದಲ್ಲ.

ನಮ್ಮ ದೇಶದಲ್ಲಿ ಇರುವುದು ಶೇಕಡಾ 70ಕ್ಕಿಂತಲೂ ಹೆಚ್ಚು ಕೃಷಿಕರು. ಆದರೆ ಸ್ವಾತಂತ್ರ್ಯ ಲಭಿಸಿದ ಕಳೆದ 60 ವರ್ಷಗಳಲ್ಲಿ ನಾವು ಕೃಷಿ ಉತ್ಪಾದಕತೆ ಹೆಚ್ಚಳ, ಕೃಷಿ ವೆಚ್ಚ ತಗ್ಗಿಸುವ ವಿಚಾರದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಆಸಕ್ತಿ ತೆಗೆದುಕೊಂಡಿಲ್ಲ.

ಕೃಷಿಗೆ ಬೇಕಾಗುವ ಒಳಸುರಿಗೆ ಮಾಡುತ್ತಿರುವ ವೆಚ್ಚ ತಗ್ಗಿಸುವ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೊಳವೆಬಾವಿಗಳನ್ನು ಕೊರೆಸುವ ಬದಲು ಮಳೆ ನೀರು ಇಂಗಿಸಿ ಭೂಮಿಯೊಳಗಿನ ಜಲಮಟ್ಟ ವೃದ್ಧಿಸುವ ದಾರಿ ಹೇಳಿಕೊಟ್ಟಿದ್ದಲ್ಲಿ, ಕೃಷಿಯ ಉತ್ಪನ್ನಗಳಿಂದ ಉಪ ಉತ್ಪನ್ನ, ಸಿದ್ಧವಸ್ತುಗಳನ್ನು ನಿರ್ಮಿಸುವ ಕೌಶಲ ಕಲಿಸಿಕೊಟ್ಟಿದ್ದಲ್ಲಿ ದೇಶದ ಅನ್ನದಾತರು ಸಹಸ್ರಾರು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ದೇಶದಲ್ಲಿ ನಿರ್ಮಾಣ ಆಗುತ್ತಿರಲಿಲ್ಲ.

ನಮ್ಮ ಯುವಕರು ಹಳ್ಳಿಗಳಿಂದ ಉದ್ಯೋಗ ಅರಸುತ್ತಾ ನಗರಗಳಿಗೆ ಆಂಡಲೆಯಬೇಕಾದ ಸ್ಥಿತಿ ಬರುತ್ತಿರಲಿಲ್ಲ.

'ಸಾಲ ಪಡೆಯುವುದಕ್ಕೆ ಮಹತ್ವ' ಕೊಟ್ಟಿರುವ ನಮ್ಮ ಸರ್ಕಾರ ಈಗ ಬ್ಯಾಂಕುಗಳ ಮೂಲಕ ಸಾಲದ ಹೊರೆ ಹೊರಿಸಿ ಮಕ್ಕಳಿಗೆ ಒದಗಿಸುತ್ತಿರುವ ಶಿಕ್ಷಣವನ್ನು ಪಡೆಯುವ ಇಂದಿನ ಮಕ್ಕಳು ಕೂಡಾ ದೇಶದ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರವನ್ನು ಬಲಪಡಿಸುವ ಶಿಕ್ಷಣವನ್ನೇನೂ ಪಡೆಯುತ್ತಿಲ್ಲ.

ಪಡೆದ ಬೆರಳೆಣಿಕೆ ಮಂದಿಯೂ ನಗರಗಳಿಗೆ ಎಡತಾಕುವ ಮನೋವೃತ್ತಿ ಬೆಳೆಸಿಕೊಳ್ಳುತ್ತಾರೆ ಹೊರತು ಹಳ್ಳಿಗಳ ಅಭಿವೃದ್ಧಿಯತ್ತ ಅಥವಾ ದೇಶಕ್ಕೆ ಅನ್ನ ಒದಗಿಸುವ ಕೃಷಿಯ ಅಭಿವೃದ್ದಿಯತ್ತ ಅಲ್ಲ.

ನಮ್ಮ ಮಕ್ಕಳಿಗೆ 'ಆರ್ಥಿಕ ಶಿಕ್ಷಣ' ಖಂಡಿತ ಬೇಕು. ಆದರೆ, ಅದರ ಹೆಸರಿನಲ್ಲಿ ಸಾಲ ಮಾಡಲು ಕಲಿಸುವ ಶಿಕ್ಷಣ ಅಲ್ಲ. ಬ್ಯಾಂಕು ಖಾತೆ ತೆರೆಯುವ ಶಿಕ್ಷಣ ಬೇಕು, ಆದರೆ ಅಲ್ಲಿ ಉಳಿತಾಯ ಮಾಡುವುದು ಹೇಗೆ ಎಂಬ ಶಿಕ್ಷಣ ಅಗತ್ಯ.

ಮೊದಲು ಉಳಿತಾಯ ಮಾಡುವುದನ್ನು ಕಲಿತು ಆ ಉಳಿತಾಯದಿಂದಲೇ ಸಣ್ಣ ಮಟ್ಟದ ಸಾಲ ಪಡೆಯುತ್ತಾ ಆರ್ಥಿಕವಾಗಿ ಸಬಲವಾಗುವ ಶಿಕ್ಷಣವನ್ನು ದೇಶದಾದ್ಯಂತ ಸ್ವ ಸಹಾಯ ಸಂಘಗಳು ನಮ್ಮ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಕಲಿಸಿಕೊಟ್ಟು ಅವರು ಪ್ರಗತಿ ಪಥದಲ್ಲಿ ಮುನ್ನಡೆಯುವಂತೆ ಮಾಡುತ್ತಿವೆ.

ಮಕ್ಕಳಿಗೂ ಇಂತಹ ಶಿಕ್ಷಣದ ಜೊತೆಗೆ ತಾವು ಬೆಳೆದ ಅಥವಾ ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಪಡೆಯುವ ಕೌಶಲ್ಯವನ್ನೂ ಶಾಲೆಯಲ್ಲಿ ಹೇಳಿಕೊಟ್ಟದ್ದೇ ಆದರೆ ದೇಶೀಯ ಬಂಡವಾಳಗಾರರಿಗೆ ಬೇಕಾಗುವ ಬಂಡವಾಳವನ್ನು ಉಳಿತಾಯದ ಮೂಲಕವೇ ಒದಗಿಸಿಕೊಡುವಲ್ಲಿ ಮುಂದಿನ ಮುಂದಿನ ಜನಾಂಗ ಎಂದಿಗೂ ಹಿಂದೆ ಬೀಳದು ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

ನಮ್ಮ ತಲೆ ಮೇಲೆ 12,585ರೂ. ಸಾಲವಿದೆ !

ದೇಶದ ಪ್ರತಿ ಕೃಷಿಕ ಕುಟುಂಬದ ಮೇಲೆ ಇರುವ ಸಾಲದ ಸರಾಸರಿ ಪ್ರಮಾಣ 12,585 ರೂಪಾಯಿ.

ಕೇಂದ್ರ ಕೃಷಿ ಖಾತೆ ರಾಜ್ಯ ಮಂತ್ರಿ ಕಾಂತಿಲಾಲ ಭುರಿಯಾ ಇತ್ತೀಚೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ಒದಗಿಸಿದರು. ಆಂಧ್ರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಕೃಷಿಕ ಕುಟುಂಬಗಳ ತಲಾ ಆದಾಯಕ್ಕಿಂತ ಸಾಲದ ಸರಾಸರಿಯೇ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಆದರೆ ಕೃಷಿಕರ ಸಾಲದ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಮುಕ್ತವಾಗಿ ಸಾಂಸ್ಥಿಕ ಸಾಲ ದೊರಕುತ್ತಿರುವುದೇ ಕಾರಣ ಎಂಬ ಆರೋಪಗಳನ್ನು ಅವರು ನಿರಾಕರಿಸಿದರು.

89.45 ದಶಲಕ್ಷ ಕೃಷಿಕ ಕುಟುಂಬಗಳ ಪೈಕಿ 43.42 ದಶಲಕ್ಷ ಕೃಷಿಕ ಕುಟುಂಬಗಳು ಸಾಲದ ಹೊರೆ ಹೊತ್ತುಕೊಂಡಿವೆ. ಸಾಲ ಹೊತ್ತ ಕೃಷಿಕರ ಪೈಕಿ ಶೇಕಡಾ 54ರಷ್ಟು ದಶಲಕ್ಷ ಕೃಷಿಕ ಕುಟುಂಬಗಳು ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆದಿದ್ದು ಶೇಕಡಾ 46 ಕುಟುಂಬಗಳು ಬ್ಯಾಂಕ್, ಸಹಕಾರ ಸಂಸ್ಥೆಗಳು ಮತ್ತು ಸರ್ಕಾರದಿಂದ ಅಧಿಕೃತವಾಗಿ ಸಾಲ ಪಡೆದಿವೆ.

(ಕೃಪೆ: ಭಾರತೀಯ ಕೃಷಿ ವೈಭವ)

Friday, March 28, 2008

ಬಂದಿತು ಮಳೆ..! Rain Hevoc

Here is a small poem written by Anup Krishna Bhat Nethrakere on rain and its havoc. People blame rain for its havoc but forget what disturb they did to its path! This poem tried to explain it. Please enjoy it.

ಬಂದಿತು ಮಳೆ..!

ಅನುಪಕೃಷ್ಣ ಭಟ್ ನೆತ್ರಕೆರೆ

ಬಂದಿತು ಮಳೆಯು
ತುಂಬಿತು ಮೋರಿಯು
ಒಡೆಯಿತು ಕಟ್ಟೆಯು ರಭಸದಲಿ
ಜನರ ಕೋಪವು ಉಕ್ಕಿ ಹರಿಯಿತು
ಪಾಪದ ಆ ಮಳೆ ರಾಯನಲಿ..!

ಮನೆಯೊಳಗೆಲ್ಲ ಕೊಳೆಯು ಬಂದಿತು,
ಕಸ-ಕಡ್ಡಿ, ಹಾವು ಚೇಳುಗಳು!
ಗ್ರಾನೈಟ್ ನೆಲದಲಿ ಜರಭರ ಜಾರುತ
ಮುರಿದವು ಹಲವರ ಕೈಕಾಲುಗಳು!

ಟಿ.ವಿ, ಕಂಪ್ಯೂಟರ್ ಹಾಳಾಗಿ ಹೋಯಿತು
ಕಷ್ಟದ ಜೊತೆಗೇ ಬಲುನಷ್ಟ..!
ಜನರ ಚಿಂತೆ ನೆತ್ತಿಗೆ ಏರಿ
ಬಿದ್ದವು ಚಿಣ್ಣರಿಗೇಟುಗಳು.!
ಜೊತೆಗೇ ಬೈಗುಳ ಸರಮಾಲೆಗಳು..!

ಒಂದೇ ಮಳೆಗೆ ತತ್ತರಿಸಿದರು
ನಮ್ಮ ನಾಡಿನ ಜನರೆಲ್ಲ..
ಗಡ ಗಡ ನಡುಗುತ, ಶಾಪವ ಹಾಕುತ
ಜರೆದರು.. 'ಇದು ಮಳೆಯಲ್ಲ'..!
ಅಬ್ಬಾಬ್ಬಾ ಇದು ಮಳೆಯಲ್ಲ!!

ಇಷ್ಟೆಲ್ಲಾದರೂ ಸ್ವಾರ್ಥ ಬುದ್ಧಿಯ
ಜನರಿಗೆ ಅರಿವು ಬರಲಿಲ್ಲ,
ಕೆರೆ ಸೈಟಿನಲಿ ಮನೆಯನು ಕಟ್ಟುವ
ವ್ಯಾಮೋಹವನು ಬಿಡಲಿಲ್ಲ.!
ಮೋರಿಯ ಒಳಗೆ ಕಸವನು ತುಂಬುವ
ಹುಚ್ಚಾಟಕೆ ಕೊನೆ ಮೊದಲಿಲ್ಲ..!

ಈ ಹುಚ್ಚಾಟವು ಮುಂದುವರೆದರೆ
ಭೂಮಿಗೆ ಖಂಡಿತ ಅಪಾಯವು
ಇದನ್ನು ಅರಿತು ಬಾಳಿರಿ ಚಿಣ್ಣರೆ
ನೀರಿಗೆ ನೀಡುತ ದಾರಿಯನು.
ಮಳೆ ನೀರಿಗೆ ನೀಡುತ ದಾರಿಯನು..!

Wednesday, March 26, 2008

It is not Farmer Frindly budget..!

Union Budget presented by Fiance Minister P. Chidambaram is definitely not farmer friendly budget. It's loan waiver package would not solve the farmer's permanent problems like non availability of fair price to his crops, electricity, store house and cheaper fertilisers. It neither gave any guidance to reduce cultivation expenses by adopting conventional fertilisers like Cow Dung nor gave directions to set up processing units for value addition to farmer's products which will help them to gain self confidence.

ಚಿದು ಬಜೆಟ್: ರೈತಮಿತ್ರ ಅಲ್ಲ...!

ವಾಸ್ತವವಾಗಿ ಕೃಷಿ ರಂಗಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಮುಂಗಡಪತ್ರವು ಮುಟ್ಟಿ ಕೂಡಾ ನೋಡಿಲ್ಲ. ಮೂಲ ಸವಲತ್ತು ಒದಗಿಸುವ ಬಗೆಗೆ ಅಥವಾ ರೈತರ ಆದಾಯ ಏರಿಕೆಗೆ ಅಗತ್ಯವಾದ ಕ್ರಮ, ಇಲ್ಲವೇ ಕೃಷಿ ವೆಚ್ಚ ತಗ್ಗಿಸುವ ಬಗ್ಗೆ ಚಿಂತಿಸಿಯೂ ಇಲ್ಲ.

ನೆತ್ರಕೆರೆ ಉದಯಶಂಕರ

ಪ್ರಸ್ತುತ ಸಾಲಿನ ಮುಂಗಡಪತ್ರವು ರೈತ ಮಿತ್ರ ಎಂದು ಕಾಂಗ್ರೆಸ್ಸಿಗರು ಕುಣಿದಾಡುವಾಗ ಅವರ ಉತ್ಸಾಹಕ್ಕೆ ಮುಂಬರುವ ಚುನಾವಣೆ, ಈ ಬಜೆಟ್ ಚುನಾವಣೆಯಲ್ಲಿ ಪಕ್ಷದ ಭವಿಷ್ಯವನ್ನು ಉಜ್ವಲಗೊಳಿಸಬಹುದು ಎಂಬ ಲೆಕ್ಕಾಚಾರ ಕಾರಣ ಎಂಬುದನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು.

ಆದರೆ ವಿಚಾರವಂತರಿಗೆ ಅರ್ಥವಾಗದ ವಿಚಾರ ಏನು ಎಂದರೆ ಖ್ಯಾತ ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ಅವರು ಕೂಡಾ ಸಣ್ಣ ಮತ್ತು ಮಧ್ಯಮ ದರ್ಜೆಯ ರೈತರಿಗಾಗಿ ಘೋಷಿಸಿರುವ 60,000 ಕೋಟಿ ರೂಪಾಯಿಗಳ ಬೃಹತ್ ಸಾಲ ಮನ್ನಾ ಕೊಡುಗೆಯು ರೈತರನ್ನು ಆರ್ಥಿಕವಾಗಿ ಸುಸ್ಥಿರ ಕೃಷಿಯ ಹಾದಿಗೆ ಮರಳಿಸಬಲ್ಲುದು ಎಂದು ಬೆನ್ನು ತಟ್ಟಿರುವುದು.

ಸ್ವಾಮಿನಾಥನ್ ಅವರಂತಹ ಭಾರತೀಯ ಕೃಷಿ ಸಂಶೋಧನಾ ರಂಗದ ಭೀಷ್ಮ ಪಿತಾಮಹರನ್ನು ಈ ವಿಚಾರವಾಗಿ ಪ್ರಶ್ನಿಸುವುದು ಅಷ್ಟೊಂದು ಸಮರ್ಪಕ ಎನಿಸಲಾರದೇನೋ? ಆದರೆ ಅವರು ಎಂದಾದರೂ ಎರಡು ಹೆಕ್ಟೇರ್ ಹಿಡುವಳಿಯಿಂದ ಬರುವ ಆದಾಯದಲ್ಲಿ ತಮ್ಮ ಕುಟುಂಬವನ್ನು ಪೋಷಿಸಿದ್ದಾರೆಯೇ ಎಂಬ ಬಗ್ಗೆ ಹಲವರಿಗೆ ಗುಮಾನಿ ಇದೆ.

ಸಣ್ಣ ಮತ್ತು ಮಧ್ಯಮ ದರ್ಜೆಯ ರೈತ ಇಂದು ಎದುರಿಸುತ್ತಿರುವ ಮೂಲಭೂತ ಸಮಸ್ಯೆ ಏನೆಂದರೆ ಹೂಡಿಕೆಗೆ ಬರುತ್ತಿರುವ ನಕಾರಾತ್ಮಕ ಪ್ರತಿಫಲ. ಚಿದಂಬರಂ ಅವರು ಈ ಸಲದ ಮಟ್ಟಿಗೆ ರೈತರನ್ನು ಸಾಲದ ಕೂಪದಿಂದ ರಕ್ಷಿಸಬಹುದು. ಆದರೆ ಮುಂದಿನ ವರ್ಷ, ಅದರ ನಂತರದ ವರ್ಷಗಳ ಗತಿ ಏನಾಗುತ್ತದೆ?

ಎಲ್ಲಾದರೂ ಎರಡು ವರ್ಷ ಒಳ್ಳೆಯ ಮಳೆ ಸುರಿದು, ಉತ್ತಮ ಫಸಲು ಬಂದು ಒಂದಷ್ಟು ಉಳಿತಾಯ ಆಗಿದ್ದರೆ ಅದನ್ನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಲು ಒಂದೇ ಒಂದು ವರ್ಷದ ಬರಗಾಲ ಸಾಕು.

ಇಂತಹ ಸಂದರ್ಭಗಳಲ್ಲಿ ರೈತರನ್ನು ಕಾಪಾಡಲು ಸರ್ಕಾರ 'ಕಾಯಂ ಬರ ಪರಿಹಾರ ನಿಧಿ'ಯನ್ನು ಸ್ಥಾಪಿಸುತ್ತದೆಯೇ?

ಹೊಟ್ಟೆಪಾಡಿನ ಕೃಷಿ: ಕಳೆದ ಕೆಲವು ದಶಕಗಳಲ್ಲಿ ಕೃಷಿ ಉತ್ಪನ್ನ ದರ ಕುಗ್ಗುತ್ತಾ ಇದ್ದರೆ, ಈ ಸಮಸ್ಯೆಗೆ ಮೂಲಕಾರಣ ಕೃಷಿಯಲ್ಲಿ ಬಂಡವಾಳ ಹೂಡಿಕೆ ಕುಗ್ಗುತ್ತಾ ನಡೆದಿರುವುದು ಹೊರತು ಬೇರೇನಲ್ಲ. ಇದಕ್ಕೆ ಕಾರಣ: ಕಳೆದ ಕೆಲವು ದಶಕಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗಿರುವ ಜನಸಂಖ್ಯೆ ಹೆಚ್ಚಳದಿಂದ ಭೂ ಹಿಡುಗಳಿಗಳು ವಿಭಜನೆಯಾಗುತ್ತಾ ಬಂಡವಾಳ ಹೂಡಿಕೆ ಅಸಮರ್ಥನೀಯವಾಗುವಷ್ಟು ಕಿರಿದಾಗಿರುವುದು. ಜೊತೆಗೆ ಯುವ ಜನಾಂಗ ನಗರಗಳತ್ತ ಆಕರ್ಷಿತರಾಗಿರುವುದು.

ಈಗ ಹೆಚ್ಚು ಕಡಿಮೆ ನಮ್ಮಲ್ಲಿ ಬಹುತೇಕ ಉಳಿದಿರುವುದು ಹೊಟ್ಟೆ ಪಾಡಿನ ವ್ಯವಸಾಯ ಮಾತ್ರ. ಈ ವ್ಯವಸಾಯದಲ್ಲಿ ಹೆಚ್ಚುವರಿ ಬೆಳೆ ಸಾಧ್ಯವಿಲ್ಲ. ಹೀಗಾಗಿ ಅನಿರೀಕ್ಷಿತ ಬಿರುಗಾಳಿಯಂತಹ ಏಕೈಕ ಪ್ರತಿಕೂಲ ಪರಿಸ್ಥಿತಿಯಿಂದ ಸಂಭವಿಸುವ ಭಾಗಶಃ ಬೆಳೆನಾಶ ಅಥವಾ ಮಕ್ಕಳ ಮದುವೆಯಂತಹ ಸಮಾರಂಭದ ವೆಚ್ಚವು ರೈತನ ಸೂಕ್ಷ್ಮ ಆದಾಯ- ವೆಚ್ಚ ಸಮತೋಲನವನ್ನು ಬುಡಮೇಲು ಮಾಡಿ ಸಾಲದ ಮಾರ್ಗಕ್ಕೆ ತಳ್ಳಿ ಬಿಡಬಲ್ಲುದು.

ಸಣ್ಣ ರೈತನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸುವುದು ಆತ ಮಾರುಕಟ್ಟೆಗೆ ಒಯ್ದ ಉತ್ಪನ್ನಕ್ಕೆ ಲಭಿಸುವ ಕನಿಷ್ಠ ನ್ಯಾಯೋಚಿತ ಬೆಲೆ ಮಾತ್ರ.

ಆದರೆ ಇಲ್ಲಿ ಕೂಡಾ ಇಡೀ ವ್ಯವಸ್ಥೆಯೇ ರೈತನಿಗೆ ವಿರುದ್ಧವಾಗಿದೆ. ಆಹಾರ ದಾಸ್ತಾನು ಇಲ್ಲವೇ ಸಾಗಣೆ ಮೂಲಸವಲತ್ತು ಇಲ್ಲ. ಅದರಲ್ಲೂ ಬೇಗನೇ ಕೆಡುವಂತಹ ಉತ್ಪನ್ನಗಳ ದಾಸ್ತಾನು, ಸಾಗಣೆ ವ್ಯವಸ್ಥೆಯ ಸ್ಥಿತಿ ಚಿಂತಾಜನಕ. ಮಾರುಕಟ್ಟೆಗೆ ತಂದರೆ ನಿಯಂತ್ರಿತ ಸಗಟು ಮಾರುಕಟ್ಟೆಯಲ್ಲಿ ಸಿಕ್ಕಿದ ದರಕ್ಕೆ ಮಾರಿ ಕೈ ತೊಳೆದುಕೊಳ್ಳಬೇಕು.

ಕಟಾವು ಸಮಯದಲ್ಲಿ ಈ ಉತ್ಪನ್ನಗಳ ಬೆಲೆ ಪಾತಾಳಕ್ಕೆ ಕುಸಿಯುತ್ತದೆ ಏಕೆಂದರೆ ಬೇಡಿಕೆಗಿಂತ ಹೆಚ್ಚು ಉತ್ಪನ್ನ ಮಾರುಕಟ್ಟೆಗೆ ಬಂದಿರುತ್ತದೆ. ಇದು ಎಂದೋ ಒಂದು ದಿನದ ಕಥೆ ಅಲ್ಲ, ರೈತನ ಪಾಲಿನ ಪ್ರತಿ ವರ್ಷದ ಗೋಳಿನ ವ್ಯಥೆ.

ಕರ್ನಾಟಕದಲ್ಲಿ ಟೊಮೆಟೊ, ಮಹಾರಾಷ್ಟ್ರದಲ್ಲಿ ಈರುಳ್ಳಿ, ಪಂಜಾಬಿನಲ್ಲಿ ಗೋಧಿ - ಇವೆಲ್ಲ ರೈತರೊಂದಿಗೆ ಮಾರುಕಟ್ಟೆಗೆ ಬಂದು ಬೆಲೆ ಸಿಗದೆ ಪ್ರತಿವರ್ಷವೂ ರಸ್ತೆಯಲ್ಲಿ ಬಿದ್ದು ಕೊಳೆತು ಹೋಗುವುದು ಇದೇ ಕಾರಣಕ್ಕೆ.

ರೈತರಿಗೆ ಸೂಕ್ತ ದಾಸ್ತಾನು ವ್ಯವಸ್ಥೆ ಇದ್ದಿದ್ದರೆ ಆತ ತನ್ನ ಉತ್ಪನ್ನಗಳನ್ನು ನ್ಯಾಯೋಚಿತ ಬೆಲೆ ಬರುವ ತನಕ ಕೊಳೆಯದಂತೆ ದಾಸ್ತಾನು ಇಟ್ಟು ಸೂಕ್ತ ಸಮಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದ.

ಹೆಚ್ಚು ಕಡಿಮೆ ಈ ದೇಶದ ಎಲ್ಲ ಕೃಷಿ ಉತ್ಪನ್ನಗಳ ಗತಿ ಹೀಗೆಯೇ. ರೈತನಿಗೆ ಸಿಗುವುದು ಅತ್ಯಂತ ನಿಕೃಷ್ಟ ಪ್ರತಿಫಲ. ಸಗಟು ಮಾರಾಟಗಾರರು ಹಾಗೂ ಇತರ ವರ್ತಕರು ಲಾಭದ ಬಹುಪಾಲು ನುಂಗುತ್ತಾರೆ. ಕೊನೆಗೆ ಗ್ರಾಹಕ ಮೂಗಿನಲ್ಲಿ ನೀರಿಳಿಸಿಕೊಂಡು ದುಬಾರಿ ದರ ತೆರುತ್ತಾನೆ.

ಈ ವರ್ಷದ ವಿತ್ತ ಸಚಿವರ ಮುಂಗಡಪತ್ರ ನಿಜವಾಗಿಯೂ ಕೃಷಿ ಮಿತ್ರ ಬಜೆಟ್ ಆಗಿದ್ದಿದ್ದರೆ ಅದು ಕೃಷಿ ಉತ್ಪನ್ನ ದಾಸ್ತಾನು ವ್ಯವಸ್ಥೆಗೆ ದೊಡ್ಡ ಪ್ರಮಾಣದ ನಿಧಿ ಒದಗಿಸಬೇಕಾಗಿತ್ತು.

ಸವಲತ್ತುಗಳ ಕೊರತೆ: ವಾಸ್ತವವಾಗಿ ಮೂಲ ಸವಲತ್ತಿನ ಕೊರತೆ ಭಾರತೀಯ ರೈತರು ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಹಳ್ಳಿಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುವ ರಸ್ತೆಗಳು ಕಡಿಮೆ ಸಂಖ್ಯೆಯಲ್ಲಿ ಇರುವುದಷ್ಟೇ ಅಲ್ಲ, ಅವುಗಳ ಗುಣಮಟ್ಟವೂ ಅಷ್ಟೇ ನಿಕೃಷ್ಟ.

ವಿದ್ಯುದೀಕೃತ ಎಂದು ಹೇಳಿಕೊಳ್ಳಲಾಗುವ ಹಳ್ಳಿಗಳಲ್ಲಿ ಕೂಡಾ ವಿದ್ಯುತ್ ಲಭಿಸುವುದು ಕೆಲವು ತಾಸುಗಳಷ್ಟು ಮಾತ್ರ. ಆ ವಿದ್ಯುತ್ತಿನ ವೋಲ್ಟೇಜ್ ಕೂಡಾ ಎಷ್ಟು ಕಡಿಮೆ ಎಂದರೆ ಪಂಪ್ ನೀರಾವರಿ ಮಾಡುವ ರೈತರು ಸದಾ ಪಂಪ್ ಸುಟ್ಟು ಕೊಳ್ಳುವ ಭೀತಿಯಲ್ಲೇ ಗದ್ದೆ, ತೋಟಗಳಿಗೆ ನೀರು ಹಾಕಬೇಕು, ಅದೂ ರಾತ್ರಿ ವೇಳೆಯಲ್ಲಿ!

ಇವೆಲ್ಲ ಸಮಸ್ಯೆಗಳು ಒಟ್ಟಾರೆಯಾಗಿ ರೈತರ ಕಾರ್ಯದಕ್ಷತೆಯನ್ನೇ ಕುಗ್ಗಿಸುತ್ತಿವೆ. ಜೊತೆಗೆ ಕೃಷಿಯ ಸುಸ್ಥಿರತೆಯನ್ನು ಅಸ್ಥಿರತೆಯತ್ತ ತಳ್ಳಿದೆ.

ಈ ಯಾವುದೇ ಒಂದು ಸಮಸ್ಯೆ ಬಗ್ಗೆ ಕೂಡಾ 'ರೈತ ಸ್ನೇಹಿ' ಎಂದು ಹೇಳಿಕೊಳ್ಳುವ ಪ್ರಸ್ತುತ ಸಾಲಿನ ಮುಂಗಡಪತ್ರದಲ್ಲಿ ಚಕಾರ ಇಲ್ಲ.

ಕೃಷಿಗೆ ನೆರವಾಗುವುದಾಗಿ ಹೇಳಿಕೊಳ್ಳುವ ಎರಡೇ ಎರಡು ಪ್ರಸ್ತಾವಗಳು ಮುಂಗಡಪತ್ರದಲ್ಲಿ ಇವೆ. ಅವು ಯಾವುವು ಗೊತ್ತೆ?

ಒಂದು: ಎಲ್ಲ 596 ಗ್ರಾಮೀಣ ಜಿಲ್ಲೆಗಳನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವ್ಯಾಪ್ತಿಗೆ ತರಲು 16,000 ಕೋಟಿ ರೂಪಾಯಿ ಒದಗಿಸುವ ಪ್ರಸ್ತಾವ. ಈ ಯೋಜನೆಯು ಗ್ರಾಮೀಣ ಮೂಲ ಸವಲತ್ತುಗಳನ್ನು ಕಾಯಂ ನೆಲೆಯಲ್ಲಿ ಸುಧಾರಿಸಲು ಅವಕಾಶ ನೀಡಿದೆ. ಇದರನ್ವಯ ರಸ್ತೆ ನಿರ್ಮಾಣ, ಕೆರೆಗಳ ಹೂಳೆತ್ತುವುದು ಮತ್ತು ಆಳಗೊಳಿಸುವುದು, ಮಳೆ ನೀರು ಕೊಯ್ಲು ಯೋಜನೆಗಳನ್ನು ಎತ್ತಿಕೊಳ್ಳಬಹುದು.

ಎರಡನೆಯದು: ಪ್ರಸ್ತಾವಿತ ನೀರಾವರಿ ಮತ್ತು ಜಲ ಸಂಪನ್ಮೂಲ ನಿಗಮ. ನೀರಾವರಿ ಖಾತರಿ ಪ್ರದೇಶಗಳಿಗೆ ಹಣಕಾಸಿನ ನೆರವು ನೀಡಲು ಈ ನಿಗಮಕ್ಕೆ ಸಾಕಷ್ಟು ನಿಧಿ ಒದಗಿಸಲಾಗಿದೆ. ಆದರೆ ಈಗಾಗಲೇ ಈ ಉದ್ದೇಶಕ್ಕಾಗಿಯೇ ನಿರ್ದಿಷ್ಟ ಇಲಾಖೆ ಇರುವಾಗ ಪ್ರತ್ಯೇಕ ನಿಗಮ ಸ್ಥಾಪನೆಯ ಅಗತ್ಯ ಏನಿತ್ತು ಎಂಬುದು ಅರ್ಥವಾಗದಂತಹ ವಿಚಾರ. ಕೇಂದ್ರ ಮತ್ತು ರಾಜ್ಯದಲ್ಲಿ ನೀರಾವರಿ ಸಲುವಾಗಿಯೇ ಪ್ರತ್ಯೇಕ ಇಲಾಖೆಗಳು, ಸಚಿವಾಲಯಗಳನ್ನೇ ನಾವು ಹೊಂದಿರುವಾಗ ಈ ಹೊಸ ನಿಗಮದ ಅಗತ್ಯ ಬಗ್ಗೆ ಏನೆಂದು ಅರ್ಥೈಸಿಕೊಳ್ಳಬಹುದು?

ತಗ್ಗುತ್ತಿರುವ ಹೂಡಿಕೆ: ಕೃಷಿ ಕ್ಷೇತ್ರದಲ್ಲಿನ ಹೂಡಿಕೆ ಕೂಡಾ 1999-2000ನೇ ಸಾಲಿನಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇಕಡಾ 2.2ರಿಂದ 2005-06ರ ಸಾಲಿನಲ್ಲಿ ಶೇಕಡಾ 1.9ಕ್ಕೆ ಕುಸಿದಿದೆ. ಇದು ಕೃಷಿ ಬೆಳವಣಿಗೆ ದರದ ಕುಸಿತದಲ್ಲ್ಲೂ ಪ್ರತಿಫಲಿಸಿದೆ. ಅಖಿಲ ಭಾರತ ಮಟ್ಟದಲ್ಲಿ 2005-06ರಲ್ಲಿ ಕೃಷಿ ಬೆಳವಣಿಗೆ ದರ ವಾರ್ಷಿಕ ಶೇಕಡಾ 2.2ರಷ್ಟು ಕುಸಿದಿದೆ.
ಇಂತಹ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆ ವಿಸ್ತರಣೆಗೆ ಒತ್ತು ನೀಡಬೇಕಿತ್ತು. ಆದರೆ ಅಂತಹ ಯಾವುದೇ ಪ್ರಯತ್ನವನ್ನೂ ಕೈಗೊಳ್ಳಲಾಗಿಲ್ಲ.

ಹೋಗಲಿ, ರೈತರ ಕೃಷಿ ಆದಾಯ ಹೆಚ್ಚಳಕ್ಕಾಗಲೀ, ಗೋ ಆಧಾರಿತ ಸಾವಯವ ಇಲ್ಲವೇ ನೈಸರ್ಗಿಕ ಕೃಷಿಯಂತಹ ಸುಸ್ಥಿರ ಸ್ವಾವಲಂಬಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುವ, ಮಾರ್ಗದರ್ಶನ ಮಾಡುವ ಯಾವುದಾದರೂ ಕ್ರಮವಾದರೂ ಮುಂಗಡಪತ್ರದಲ್ಲಿ ಇದೆಯೇ? ಅದು ಕೂಡಾ ಇಲ್ಲ.

ನಮ್ಮ ನೀತಿ ನಿರೂಪಕರು ಕೇವಲ ರಾಜಕಾರಣವನ್ನಷ್ಟೇ ಮಾಡುವುದನ್ನು ಬಿಟ್ಟು ಒಂದಷ್ಟು ಮುತ್ಸದ್ದಿಗಳಾಗಿ ವರ್ತಿಸುವುದು ಯಾವಾಗ?

ಕೃಪೆ: ಪ್ರಜಾವಾಣಿ (ಮಾಹಿತಿ ಆಧಾರ: ಡೆಕ್ಕನ್ ಹೆರಾಲ್ಡ್)

Monday, March 24, 2008

Mysore Pak ಮೈಸೂರು ಪಾಕ್

Here is a small poem written by Anup Krishna Bhat Nethrakere. How you felt? You too can write poems or articles. PARYAYA will give scope to you and publish them here. Will you try?


ಅನುಪಕೃಷ್ಣ ಭಟ್

ನೆತ್ರಕೆರೆ



ಮೈಸೂರು ಪಾಕ್


ಅಪ್ಪ ತಂದರು ಮೈಸೂರು ಪಾಕ್
ತಿಂದೆನು ನಾನು ಸ್ಟಾಕ್ ಸ್ಟಾಕ್
ಅದರ ರುಚಿ ಇನ್ನೂ ಬೇಕು
ಆದರೆ ಆಯಿತು ಹೊಟ್ಟೆಯಲ್ಲಿ
ಸ್ಟ್ರಕ್
ತಿನ್ನದಾದೆ ಮತ್ತೊಂದು ಪ್ಯಾಕ್
ಮೈಸೂರು ಪಾಕ್.

ಆಸೆ ಆಸೆ

ಆಸೆ ಆಸೆ ನನಗೆ ಆಸೆ
ಕ್ರಿಕೆಟ್ ಆಡಲು ಬಹಳ ಆಸೆ
4 ಹೊಡೆಯಲು ಇನ್ನೂ ಆಸೆ
ವಿಕೆಟ್ ಹಾರಿದಾಗ ಆಯಿತು
ನಿರಾಸೆ.

Sunday, March 23, 2008

How to win in Consumer Court?

March 15 is World Consumers Day. This day is observed to bring awareness among consumers on their rights. PARYAYA gives you some tips how to win in Consumer Courts. Will you make use of these tips?

ಅಯ್ಯಾ ಗ್ರಾಹಕ ಗೆಲ್ಲುವ ಬಗೆ ಗೊತ್ತೇ?

ಮಾರ್ಚ್ 15. ಜಾಗತಿಕ ಗ್ರಾಹಕರ ಹಕ್ಕುಗಳ ದಿನ. ವಸ್ತು, ಸೇವೆ ಖರೀದಿಸಿ ಮೋಸಹೋಗುವ ವ್ಯಕ್ತಿಗಳಿಗೆ ತಮ್ಮ ಹಕ್ಕುಗಳ ಸಲುವಾಗಿ ಹೋರಾಡಲು ಪಣ ತೊಡಬಹುದಾದ ದಿನ. ಗ್ರಾಹಕ ನ್ಯಾಯಾಲಯಗಳ ಕದ ತಟ್ಟಲು, ಸಮರ ಗೆಲ್ಲಲು ನೀವೇನು ಮಾಡಬಹುದು? ಇಲ್ಲಿವೆ ಒಂದಷ್ಟು ಸುಳಿವುಗಳು...

ನೆತ್ರಕೆರೆ ಉದಯಶಂಕರ

ನೀವು ಟಿವಿ/ಫೋನ್/ರೇಡಿಯೊ ಅಥವಾ ಬೇರೇನಾದರೂ ವಸ್ತು ಇಲ್ಲವೇ ನಿವೇಶನ ಖರೀದಿಸುತ್ತೀರಿ. ಖರೀದಿಸುವವರೆಗೆ ನೀವು ಹೇಳಿದ್ದಕ್ಕೆಲ್ಲಾ ತಲೆಬಾಗಿ ಓಗೊಡುವ ಅಂಗಡಿಯವರು/ ಕಂಪೆನಿಯವರು ಅವರಿಗೆ ಬರಬೇಕಾದ ಹಣ ಬಂದ ಬಳಿಕ ನಿಮ್ಮ ಕಡೆಗೆ ದೃಷ್ಟಿ ಹರಿಸುವುದಿಲ್ಲ. ಟಿವಿ, ಫೋನ್ ಹಾಳಾದರೆ ದುರಸ್ತಿ ಮಾಡಿಕೊಡದೆ ಕಾಡುತ್ತಾರೆ. ನಿವೇಶನಕ್ಕೆ ಒದಗಿಸಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ ಕಿರಿ ಕಿರಿ ಉಂಟು ಮಾಡುತ್ತಾರೆ.

ನೀವು ಏನು ಮಾಡುತ್ತೀರಿ? ದೂರವಾಣಿ ಮೂಲಕ ಅವರನ್ನು ಬೈದಾಡುತ್ತೀರಿ. ನಿಮ್ಮ ಗೆಳೆಯರ ಮುಂದೆ, ಬಂಧುಗಳ ಮುಂದೆ ಅವರ ಬಗ್ಗೆ ಟೀಕಿಸುತ್ತೀರಿ. ಇನ್ನು ಮುಂದೆ ಇಂತಹ ಅಂಗಡಿ/ ಕಂಪೆನಿಯಿಂದ ಏನನ್ನೂ ಖರೀದಿಸುವುದಿಲ್ಲ ಎಂದು ಶಪಥ ಮಾಡುತ್ತೀರಿ!

ಏನು ಲಾಭವಾಯಿತು? ನಿಮಗೂ ಉಪಯೋಗ ಇಲ್ಲ, ಅವರಿಗೆ ನಷ್ಟವೂ ಇಲ್ಲ, ಏಕೆಂದರೆ ಅವರಾಗಲೇ ಇನ್ನೊಬ್ಬ ಗಿರಾಕಿಯನ್ನು ಹಿಡಿದುಕೊಂಡಿರುತ್ತಾರೆ!

ಉಡುಪಿ ಕುಂಜಿಬೆಟ್ಟು ನಿವಾಸಿ ಗಣೇಶ ಸಾಲಿಯಾನ್ ಪೆಪ್ಸಿ ಫುಡ್ ಕಂಪೆನಿಯವರಿಂದ ಆಲೂಚಿಪ್ಸ್ ಪೊಟ್ಟಣ ಖರೀದಿಸಿದರು. ಅದಕ್ಕೆ ಅವರು ಕೊಟ್ಟದ್ದು 35 ರೂಪಾಯಿ. ಅವುಗಳನ್ನು ತೆರೆದಾಗ ಚಿಪ್ಸ್ ಕಡಿಮೆ ಇದ್ದದು ಕಂಡು ಬಂತು. ಚಿಲ್ಲರೆ ಸಮಸ್ಯೆ ಎಂದು ಗಣೇಶ ಸಾಲಿಯಾನ್ ಸುಮ್ಮನಾಗಬಹುದಿತ್ತು. ಆದರೆ ಅವರು ಸುಮ್ಮನಾಗಲಿಲ್ಲ. ಸಮರಕ್ಕೆ ಇಳಿದರು. ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಅವರ ಪ್ರಯತ್ನಕ್ಕೆ ಫಲ ಸಿಕ್ಕಿತು. ರಾಜ್ಯ ಗ್ರಾಹಕ ನ್ಯಾಯಾಲಯ ಅವರಿಗೆ 50,000 ರೂಪಾಯಿ ಪರಿಹಾರ ನೀಡುವಂತೆ ಪೆಪ್ಸಿ ಫುಡ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಆದೇಶ ನೀಡಿತು.

ಬೆಂಗಳೂರಿನ ಹಿರಿಯ ಪತ್ರಕರ್ತ ಜೆ. ಶ್ರೀನಿವಾಸುಲು ಅವರ ಪತ್ನಿ ಸರೋಜಮ್ಮ ಆಂಜಿಯೋಗ್ರಾಮ್ ಪರೀಕ್ಷೆ ಸಂದರ್ಭದಲ್ಲಿ ಆದ ಅವ್ಯವಸ್ಥೆ, ವೈದ್ಯರ ನಿರ್ಲಕ್ಷ್ಯ ಪರಿಣಾಮವಾಗಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು. ಪತಿ ಶ್ರೀನಿವಾಸುಲು ಸುಮ್ಮನಾಗಲಿಲ್ಲ. ಗ್ರಾಹಕ ನ್ಯಾಯಾಲಯಕ್ಕೆ ದೌಡಾಯಿಸಿದರು. ರಾಜ್ಯ ಗ್ರಾಹಕ ನ್ಯಾಯಾಲಯವು 3 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವಂತೆ ಆಂಜಿಯೋಗ್ರಾಮ್ ಪರೀಕ್ಷೆ ನಡೆಸಿದ ವೈದ್ಯರಿಗೆ ಆಜ್ಞಾಪಿಸಿತು.

ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎನ್.ಬಿ. ಶ್ರೀಧರ್
ಅವರಿಗೆ ಚತ್ತೀಸ್ ಗಢದ ದೂರ್ಗಿನಲ್ಲಿ ರಾಷ್ಟ್ರಮಟ್ಟದ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರಜ್ಞರ ಸಮ್ಮೇಳನದಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಬೇಕಿತ್ತು. ಈ ಸಂಬಂಧ ಗಂಗಾನಗರದ ಡಿಟಿಡಿಸಿ ಕೊರಿಯರ್ ಸಂಸ್ಥೆಯ ಮೂಲಕ ಸಮ್ಮೇಳನ ಸಂಘಟಕರಿಗೆ ದಾಖಲೆಗಳ ಸಹಿತವಾಗಿ ಪತ್ರವೊಂದನ್ನು ಕಳುಹಿಸಿದರು. ಆದರೆ ಆ ಪತ್ರ ಅಲ್ಲಿಗೆ ತಲುಪಲಿಲ್ಲ. ವಿಚಾರಿಸಿದರೂ ಪತ್ರಕ್ಕೆ ಸಂಬಂಧಿಸಿದಂತೆ ಕೊರಿಯರ್ ಸಂಸ್ಥೆ ಸಮರ್ಪಕ ಮಾಹಿತಿ ನೀಡಲಿಲ್ಲ.

ಕೊರಿಯರ್ ಸಂಸ್ಥೆಯಿಂದ ಆದ ಸೇವಾಲೋಪಕ್ಕೆ ಪರಿಹಾರ ಕೋರಿ ಡಾ. ಶ್ರೀಧರ್ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು. ಅವರ ಮನವಿಗೆ ಸ್ಪಂದಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ 25,000 ರೂಪಾಯಿಗಳ ಪರಿಹಾರ ನೀಡುವಂತೆ ಕೊರಿಯರ್ ಸಂಸ್ಥೆಗೆ ಆಜ್ಞಾಪಿಸಿತು.

ಕೊರಿಯರ್ ಸಂಸ್ಥೆಯು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದಾಗ ರಾಜ್ಯ ಗ್ರಾಹಕ ನ್ಯಾಯಾಲಯವೂ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಪರಿಹಾರ ಮೊತ್ತದಲ್ಲಿ ಮಾತ್ರ ಸ್ವಲ್ಪ ರಿಯಾಯ್ತಿ ನೀಡಿತು.

ಇವೆಲ್ಲ ಕೆಲವು ಉದಾಹರಣೆಗಳು ಅಷ್ಟೆ. ಇಂತಹ ನೂರಾರು ಪ್ರಕರಣಗಳಲ್ಲಿ ನೂರಾರು ಮಂದಿ ತಮಗೆ ಅನ್ಯಾಯವಾದಾಗ, ವಂಚನೆಯಾದಾಗ, ಸೇವಾಲೋಪ ಆದಾಗ ಗ್ರಾಹಕ ನ್ಯಾಯಾಲಯಗಳ ಮೂಲಕ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು. ಗ್ರಾಹಕ ನ್ಯಾಯಾಲಯ. ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡಾ ಗ್ರಾಹಕನೇ. ರೈತನಿರಬಹುದು, ನೌಕರನಿರಬಹುದು, ವ್ಯಾಪಾರಿ ಇರಬಹುದು, ವೈದ್ಯನಿರಬಹುದು, ರೋಗಿಯೇ ಇರಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬನಿಂದ ವಸ್ತು ಖರೀದಿಸಿದಾಗ ಇಲ್ಲವೇ ಹಣ ನೀಡಿ ಸೇವೆ ಖರೀದಿಸಿದಾಗ ಗ್ರಾಹಕನಾಗುತ್ತಾನೆ. ಈ ರೀತಿ ಕೊಟ್ಟ ಹಣಕ್ಕೆ ಸೂಕ್ತ ಪ್ರತಿಫಲ, ಸೇವೆ ಲಭ್ಯವಾಗದೇ ಇದ್ದರೆ ಪರಿಹಾರ ಪಡೆಯಲು ನೀವು ಅರ್ಹರಾಗುತ್ತೀರಿ. ಅದನ್ನು ಗ್ರಾಹಕ ನ್ಯಾಯಾಲಯದ ಮೂಲಕ ಪಡೆಯುವವರ ಸಾಲಿಗೆ ನೀವೂ ಸೇರಬಲ್ಲಿರಿ. ಗ್ರಾಹಕ ಸಂರಕ್ಷಣಾ ಕಾಯ್ದೆ ಇದನ್ನು ಸಾಧ್ಯವಾಗಿಸಿದ್ದು ಇಂತಹ ಸಮರದಲ್ಲಿ ನಿಮ್ಮ ನೆರವಿಗೆ ಬರುತ್ತದೆ.

ಗ್ರಾಹಕ ಸಂರಕ್ಷಣಾ ಕಾಯ್ದೆ 1986ರಷ್ಟು ಹಿಂದೆಯೇ ಜಾರಿಯಾಗಿದ್ದರೂ, ಅದು ಹಲ್ಲಿಲ್ಲದ ಹಾವಿನಂತೆ ಇತ್ತು, ಗ್ರಾಹಕರ ಕಷ್ಟಗಳಿಗೆ ಸ್ಪಂದಿಸಿ ತೀರ್ಪುನೀಡಿದರೂ ಅವುಗಳ ಜಾರಿ ಕಷ್ಟಕರವಾಗಿತ್ತು. ತೀರ್ಪು ಜಾರಿಯ ಅಧಿಕಾರ ಗ್ರಾಹಕ ನ್ಯಾಯಾಲಯಗಳಿಗೆ ಇರಲಿಲ್ಲ.

ಆದರೆ ಈಗ ಹಾಗಲ್ಲ, 2002ರಲ್ಲಿ ಕೇಂದ್ರ ಸಕರ್ಾರ ತಂದ ತಿದ್ದುಪಡಿ 1986ರ ಈ ಕಾಯ್ದೆಗೆ ಭೀಮಬಲವನ್ನೇ ತಂದುಕೊಟ್ಟಿದೆ. ಈಗ ಗ್ರಾಹಕ ನ್ಯಾಯಾಲಯದ ತೀರ್ಪು ಪಾಲನೆ ಆಗದೇ ಇದ್ದರೆ ಪಾಲಿಸದ ವ್ಯಕ್ತಿಯನ್ನು ಜೈಲಿಗಟ್ಟುವ ಶಕ್ತಿ ಕೂಡಾ ಗ್ರಾಹಕ ನ್ಯಾಯಾಲಯಗಳಿಗೆ ಬಂದಿದೆ.

ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟರಿಗೆ ಇರುವ ಅಧಿಕಾರವನ್ನು ಈ ತಿದ್ದುಪಡಿಯು ಗ್ರಾಹಕ ನ್ಯಾಯಾಲಯಗಳ ಅಧ್ಯಕ್ಷರಿಗೆ ತಂದು ಕೊಟ್ಟಿದೆ. ಅವರು ತಮ್ಮ ಆದೇಶ ಜಾರಿಗೆ ಪೊಲೀಸ್ ನೆರವನ್ನೂ ಪಡೆದುಕೊಳ್ಳಬಹುದು. ಆದ್ದರಿಂದ ಅವುಗಳು ಈಗ ಹಿಂದಿಗಿಂತ ತುಂಬ ಪರಿಣಾಮಕಾರಿ ಎನ್ನುತ್ತಾರೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮಾಜಿ ಅಧ್ಯಕ್ಷ ಎಂ.ಎನ್. ಶಂಕರಭಟ್.

ಹಾಗಾದರೆ ಗ್ರಾಹಕ ನ್ಯಾಯಾಲಯದಿಂದ ನೀವು ಪರಿಹಾರ ಪಡೆಯುವುದು ಹೇಗೆ? ಅಲ್ಲಿಗೆ ಹೋದ ಎಲ್ಲ ಪ್ರಕರಣಗಳು ಗೆದ್ದು ಬಿಡುತ್ತವೆಯೇ? ಪ್ರಕರಣ ಗೆಲ್ಲಲು ನೀವು ಏನು ಮಾಡಬೇಕು?

ಒಂದು ಮಾತು ನೆನಪಿಟ್ಟುಕೊಳ್ಳಬೇಕು. ನ್ಯಾಯಾಲಯಕ್ಕೆ ಹೋಗುವುದು ಎಂದರೆ ಜೂಜಾಟ ಅಲ್ಲ, ಅಂದಾಜಿನಲ್ಲಿ ಗುಂಡು ಹೊಡೆಯುವ ಪ್ರವೃತ್ತಿಯಿಂದ ಪ್ರಯೋಜನ ಆಗುವುದಿಲ್ಲ.

ಸೂಕ್ತ ಸಿದ್ಧತೆ, ದಾಖಲೆ, ಸಾಕ್ಷ್ಯಾಧಾರಗಳು ನಿಮ್ಮ ಬಳಿ ಇದ್ದರೆ, ನೀವು ಗ್ರಾಹಕ ನ್ಯಾಯಾಲಯದಲ್ಲಿ ವಿಜಯ ಸಾಧಿಸಬಹುದು.

ಗ್ರಾಹಕ ನ್ಯಾಯಾಲಯಗಳು ಇತರ ಸಿವಿಲ್ ನ್ಯಾಯಾಲಯಗಳ ಹಾಗೆ ಅಲ್ಲ. ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ವರ್ಷಗಟ್ಟಲೆ ಮುಂದೂಡಿಕೆಯಾಗಬಹುದು. ವಕೀಲರೇ ವಾದಿಸಬೇಕಾದ್ದರಿಂದ ನೀವು ವೆಚ್ಚ ಮಾಡಬೇಕಾದ ಹಣವೂ ಹೆಚ್ಚು.

ಆದರೆ ಗ್ರಾಹಕ ನ್ಯಾಯಾಲಯಗಳು ರೂಪುಗೊಂಡದ್ದೇ ಜನ ಸಾಮಾನ್ಯರನ್ನು ವಂಚಕರಿಂದ, ಶೋಷಣೆಗಾರರಿಂದ ರಕ್ಷಿಸುವ ಉದ್ದೇಶದಿಂದ. ಆದ್ದರಿಂದ ಇಲ್ಲಿ ನೀವು ವಕೀಲರು ಇಲ್ಲದೇ ಇದ್ದರೂ ನೇರವಾಗಿ ಸ್ವತಃ ನ್ಯಾಯಾಲಯಕ್ಕೆ ನಿಮ್ಮ ಅಹವಾಲು ಮಂಡಿಸಬಹುದು.

ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಶುಲ್ಕ ಕೂಡಾ ಅತ್ಯಂತ ಕಡಿಮೆ.

ಹೀಗಾಗಿ ಗ್ರಾಹಕ ನ್ಯಾಯಾಲಯಗಳು ಹೆಚ್ಚು ವೆಚ್ಚದಾಯಕವಲ್ಲ. ಇಲ್ಲಿನ ವ್ಯವಹಾರಗಳೂ ಅತ್ಯಂತ ಸರಳ.
ಗ್ರಾಹಕ ನ್ಯಾಯಾಲಯದಲ್ಲಿ ಗೆಲುವು ಗಳಿಸಲು ನೀವು ಏನೇನು ಸಿದ್ಧತೆ ಮಾಡಿಕೊಳ್ಳಬೇಕು?

ಮೊತ್ತ ಮೊದಲು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ: ಗ್ರಾಹಕ ನ್ಯಾಯಾಲಯದ ಕಟ್ಟೆ ಏರುವಂತಹ ಪ್ರಕರಣ ನಿಮ್ಮ ಬಳಿ ಇದೆಯೇ?

ನ್ಯಾಯಾಲಯದ ಕಟ್ಟೆ ಏರಲು ನಿಮಗೆ ಏನಾದರೂ ನಷ್ಟ ಸಂಭವಿಸಿರಬೇಕು, ಅಥವಾ ನೀವು ಹಣಕೊಟ್ಟು ಖರೀದಿಸಿದ ವಸ್ತುವಿಗೆ ಸಂಬಂಧಿಸಿದ ಸೇವೆಯಲ್ಲಿ ಚ್ಯುತಿ ಉಂಟಾಗಿರಬೇಕು. ನಿಮಗೆ ಯಾವುದೇ ನಷ್ಟ ಆಗಿರದೇ ಇದ್ದರೆ ಅಥವಾ ಯಾವುದೇ ಸೇವಾಲೋಪ ಆಗಿರದೇ ಇದ್ದರೆ ನ್ಯಾಯಾಲಯಕ್ಕೆ ಹೋದರೂ ನಿಮಗೆ ಜಯ ಸಿಗುವುದು ಕಷ್ಟಕರ.

ನಂತರ ನೀವು ಹಾಗೂ ನಿಮ್ಮ ಎದುರಾಳಿಯ ಮಧ್ಯೆ ವ್ಯವಹಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ದಾಖಲೆಗಳು ಇವೆಯೇ ಪರೀಕ್ಷಿಸಿಕೊಳ್ಳಿ. ಆ ವ್ಯವಹಾರದಲ್ಲಿ ನಿಮಗೆ ನಷ್ಟ ಸಂಭವಿಸಿದ್ದಕ್ಕೆ, ಸೇವಾಲೋಪ ಆಗಿದ್ದಂತೆ ಸಂಬಂಧಿಸಿದಂತೆ ದಾಖಲೆ ಇದೆಯೇ ನೋಡಿಕೊಳ್ಳಿ. ನಷ್ಟವಾದಾಗ ನೀವು ಎದುರಾಳಿ ಜೊತೆಗೆ ಮುಖತಃ ಇಲ್ಲವೇ ದೂರವಾಣಿ ಮೂಲಕ ಕೂಗಾಡಿರಬಹುದು, ಬೈದಾಡಿರ ಬಹುದು. ಅದರಿಂದ ಪ್ರಯೋಜನವಿಲ್ಲ. ನಷ್ಟವಾದುದನ್ನು ಅವರ ಗಮನಕ್ಕೆ ತಂದು ಪರಿಹಾರ ಕೊಡುವಂತೆ ಆಗ್ರಹಿಸಿ ಪತ್ರ ಬರೆಯಿರಿ. ಆ ಪತ್ರದ ಪ್ರತಿ, ಜೊತೆಗೆ ಕಳುಹಿಸಿದ ದಾಖಲಾತಿಗಳನ್ನು, ಅವರಿಂದ ಉತ್ತರ ಬಂದರೆ ಆ ಉತ್ತರವನ್ನೂ ನಿಮ್ಮ ವ್ಯವಹಾರ ಸಂಬಂಧಿ ದಾಖಲೆಗಳ ಜೊತೆಗೆ ಇಟ್ಟುಕೊಳ್ಳಿ. ನ್ಯಾಯಾಲಯದಲ್ಲಿ ಹಾಜರು ಪಡಿಸಲು ಅದು ನಿಮಗೆ ಬೇಕಾಗುತ್ತದೆ.

ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು ಇದ್ದರೆ, ಅವರು ನಿಮ್ಮ ಪರವಾಗಿ ಸಾಕ್ಷ್ಯ ನುಡಿಯಬಲ್ಲರೇ ಎಂದು ಖಚಿತಪಡಿಸಿಕೊಳ್ಳಿ. ಅವರು ನಿಮ್ಮ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಬಹುದಾದ ಪ್ರಮಾಣಪತ್ರ ನಿಮ್ಮ ಪಾಲಿಗೆ ಬೋನಸ್.

ಎಲ್ಲೆಗೆ ಧಾವಿಸಬೇಕು? :
ಗ್ರಾಹಕ ನ್ಯಾಯಾಲಯಗಳಲ್ಲಿ ಮೂರು ಹಂತಗಳಿವೆ. ಜಿಲ್ಲಾ ಗ್ರಾಹಕ ನ್ಯಾಯಾಲಯಗಳು, ರಾಜ್ಯ ಗ್ರಾಹಕ ನ್ಯಾಯಾಲಯಗಳು ಮತ್ತು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ.

ಪ್ರತಿಯೊಂದು ರಾಜ್ಯದಲ್ಲೂ ಎಲ್ಲ ಜಿಲ್ಲೆಗಳಲ್ಲೂ ಗ್ರಾಹಕ ಸಂರಕ್ಷಣಾ ಕಾಯ್ದೆಗೆ ಅನುಗುಣವಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯಗಳ ರಚನೆ ಆಗಿರುತ್ತದೆ. ಈ ಜಿಲ್ಲಾ ಗ್ರಾಹಕ ನ್ಯಾಯಾಲಯಗಳು 20ಲಕ್ಷ ರೂಪಾಯಿಗಳವರೆಗಿನ ಪ್ರಕರಣಗಳನ್ನು ವಿಚಾರಣೆಗೆ ಅಂಗೀಕರಿಸಬಹುದು.

ರಾಜ್ಯ ಗ್ರಾಹಕ ನ್ಯಾಯಾಲಯಗಳು 20 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿಗಳವರೆಗಿನ ಮೊತ್ತದ ಪ್ರಕರಣಗಳ ವಿಚಾರಣೆ ನಡೆಸಬಹುದು. ಒಂದು ಕೋಟಿ ರೂಪಾಯಿಗಳಿಗಿಂತ ಅಧಿಕ ಮೊತ್ತದ ಪ್ರಕರಣಗಳ ವಿಚಾರಣಾ ವ್ಯಾಪ್ತಿ ಇರುವುದು ರಾಷ್ಟ್ರೀಯ ನ್ಯಾಯಾಲಯಗಳಿಗೆ.

ಈ ವಿಚಾರಣಾ ವಾಪ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ನೀವು ಎಲ್ಲಿ ಕದ ತಟ್ಟಬೇಕು ಎಂದು ನಿರ್ಧರಿಸಿಕೊಳ್ಳಬೇಕು.

ಯಾರ ನೆರವು ಪಡೆಯಬಹುದು?: ವಕೀಲರು, ವೈದ್ಯರು, ಕಟ್ಟಡ ನಿರ್ಮಾಣಗಾರರು, ಅಂಗಡಿಗಳು ಅಥವಾ ಬೇರಾವುದೇ ವ್ಯಕ್ತಿಗೆ ಅಥವಾ ಸಂಸ್ಥೆಗೆ ಹಣ ನೀಡಿ ಏನಾದರೂ ವಸ್ತು/ ಸೇವೆ ಖರೀದಿಸಿದ್ದು ಅಂತಹ ವಸ್ತು, ಸೇವೆ ಕಳಪೆ ಗುಣಮಟ್ಟದ್ದಾಗಿದ್ದರೆ, ಸೇವೆಯಲ್ಲಿ ಲೋಪವಾಗಿದ್ದರೆ ನೀವು ಖಚಿತವಾಗಿ ಗ್ರಾಹಕ ನ್ಯಾಯಾಲಯದ ಕದ ತಟ್ಟಬಹುದು.

ಗ್ರಾಹಕ ನ್ಯಾಯಾಲಯಗಳ ಕದ ತಟ್ಟಲು ನೀವು ನೇರವಾಗಿಯೇ ಹೋಗಬಹುದು. ಕಷ್ಟಕರ ಎಂದು ಅನಿಸಿದರೆ ವಕೀಲರ ಅಥವಾ ಗ್ರಾಹಕ ಹಿತರಕ್ಷಣೆಗಾಗಿ ಶ್ರಮಿಸುವ ಬಳಕೆದಾರರ ವೇದಿಕೆಗಳ ನೆರವು ಪಡೆಯಬಹುದು.

ಉಡುಪಿಯಲ್ಲಿ ದಿವಂಗತ ಪಿ. ನಾರಾಯಣರಾವ್ ಅವರು ಸ್ಥಾಪಿಸಿದ ಬಳಕೆದಾರರ ವೇದಿಕೆಯು ಗ್ರಾಹಕರಿಗೆ ಇಂತಹ ನೆರವು ನೀಡುತ್ತಿದೆ. ವೇದಿಕೆಯ ಸಂಚಾಲಕ ನಾರಾಯಣರಾವ್ ಅವರು ಗ್ರಾಹಕ ನ್ಯಾಯಾಲಯಗಳಲ್ಲಿ ಗ್ರಾಹಕರ ಪರವಾಗಿ ಸ್ವತಃ ಉಚಿತವಾಗಿಯೇ ವಾದ ಮಂಡಿಸುತ್ತಿದ್ದರು.

ಈಗಲೂ ಕೆ. ದಾಮೋದರ ಐತಾಳ್ ಸಂಚಾಲಕತ್ವದಲ್ಲಿ ಗ್ರಾಹಕರ ಸೇವೆ ಮುಂದುವರೆಸಿರುವ ಉಡುಪಿ ಬಳಕೆದಾರರ ವೇದಿಕೆಯು ಗ್ರಾಹಕ ನ್ಯಾಯಾಲಯಗಳಿಗೆ ಹೋಗಲು ಮಾರ್ಗದರ್ಶನ ಮಾಡಬಲ್ಲಂತಹ 'ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗಳು' (ಲೇಖಕ: ಎ.ಪಿ. ಕೊಡಂಚ), 'ಪ್ರಕೃತಿ, ಪರಿಸರ; ಗ್ರಾಹಕ' (ಲೇಖಕ: ಎಚ್. ಶಾಂತರಾಜ ಐತಾಳ್) 'ಒಡೆಯರಲ್ಲ ಸೇವಕರು', 'ಪ್ರಭುಗಳಲ್ಲ ಪ್ರಜಾಸೇವಕರು' 'ರಸ್ತೆ ಪುರಾಣ' ಇತ್ಯಾದಿ ಪುಸ್ತಕಗಳನ್ನು ಪ್ರಕಟಿಸಿದೆ.

ಈ ಪುಸ್ತಕಗಳ ಪೈಕಿ 'ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗಳು' ಪುಸ್ತಕ ಗ್ರಾಹಕ ನ್ಯಾಯಾಲಯಗಳ ಕದತಟ್ಟ ಬಯಸುವವರಿಗೆ ಉಪಯುಕ್ತ. ಈ ಪುಸ್ತಕದಲ್ಲಿ ದಾಖಲೆಗಳನ್ನು ಸಿದ್ಧ ಪಡಿಸಿಕೊಳ್ಳುವ ಬಗೆ, ವಿವಿಧ ಕಡೆಗಳಿಗೆ ಬರೆಯಬೇಕಾದ ಪತ್ರಗಳ, ಅಜರ್ಿಗಳ ಮಾದರಿ ಸೇರಿದಂತೆ ಹತ್ತಾರು ವಿವರಗಳಿವೆ.

ಶುಲ್ಕದ ಕಥೆ ಏನು?: ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಹಿಂದೆ ಯಾವುದೇ ಶುಲ್ಕ ಇರಲಿಲ್ಲ. ಆದರೆ ಈಗ ಅದು ಸಂಪೂರ್ಣ ಉಚಿತವಲ್ಲ. ಒಂದಷ್ಟು ಶುಲ್ಕ ತೆರಬೇಕಾಗುತ್ತದೆ.

ದೂರು ನೋಂದಾಯಿಸಲು ಈಗ ಜಿಲ್ಲಾ ವೇದಿಕೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಥವಾ ಅಂತ್ಯೋದಯ/ ಅಣ್ಣ ಕಾರ್ಡುಗಳನ್ನು ಹೊಂದಿರುವವರು ಕೇಳಿದ ವಸ್ತು, ಸೇವೆಯ ಮೌಲ್ಯ ಅಥವಾ ಪರಿಹಾರ ಮೌಲ್ಯ ಒಂದು ಲಕ್ಷ ರೂಪಾಯಿವರೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಈ ವರ್ಗಗಳ ಜನರನ್ನು ಹೊರತುಪಡಿಸಿದ ವ್ಯಕ್ತಿಗಳು ಒಂದು ಲಕ್ಷ ರೂಪಾಯಿಗಳವರೆಗೆ 100 ರೂಪಾಯಿ ಶುಲ್ಕ ಪಾವತಿ ಮಾಡಬೇಕು.

ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು, 5 ಲಕ್ಷ ರೂಪಾಯಿಗಳವರೆಗೆ 200 ರೂಪಾಯಿ, 5 ಲಕ್ಷಕ್ಕಿಂತ ಹೆಚ್ಚು 10 ಲಕ್ಷ ರೂಪಾಯಿಗಳವರೆಗೆ 400 ರೂಪಾಯಿ, 10 ಲಕ್ಷಕ್ಕಿಂತ ಹೆಚ್ಚು 20 ಲಕ್ಷ ರೂಪಾಯಿಗಳವರೆಗೆ 500 ರೂಪಾಯಿ ನೋಂದಣಿ ಶುಲ್ಕ ಪಾವತಿ ಮಾಡಬೇಕು.

ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ದೂರು ನೋಂದಾಯಿಸಲು 20 ಲಕ್ಷಕ್ಕಿಂತ ಹೆಚ್ಚು 50 ಲಕ್ಷ ರೂಪಾಯಿಗಳವರೆಗೆ 2000 ರೂಪಾಯಿ, 50 ಲಕ್ಷಕ್ಕಿಂತ ಹೆಚ್ಚು 1 ಕೋಟಿ ರೂಪಾಯಿವರೆಗೆ 4000 ರೂಪಾಯಿ ನೊಂದಣಿ ಶುಲ್ಕ ಪಾವತಿ ಮಾಡಬೇಕು.

ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದಲ್ಲಿ ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ದೂರಿಗೆ 5000 ರೂಪಾಯಿ ನೋಂದಣಿ ಶುಲ್ಕ ಪಾವತಿ ಮಾಡಬೇಕು. ಯಾವ ನ್ಯಾಯಾಲಯ ಉತ್ತಮ?: ನಿಮಗೆ ಸಮೀಪ ಇರುವ ಜಿಲ್ಲಾ ಗ್ರಾಹಕ ನ್ಯಾಯಾಲಯವನ್ನು ದೂರು ನೀಡಲು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಓಡಾಟಕ್ಕೆ ಅನಗತ್ಯವಾಗಿ ಹಣ ವೆಚ್ಚವಾಗುತ್ತದೆ.

ನಿಮ್ಮ ದೂರನ್ನು ಅನುಸರಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಎದುರಾಳಿಗೆ ನೋಟಿಸ್ ಜಾರಿ ಮಾಡುತ್ತದೆ. ಸಾಮಾನ್ಯವಾಗಿ ಎದುರಾಳಿಗಳು ಸ್ಪಂದಿಸಿ ತಮ್ಮ ಉತ್ತರ ಸಲ್ಲಿಸುತ್ತಾರೆ. ಕೆಲವೊಮ್ಮೆ ದೂರನ್ನೇ ನಿರ್ಲಕ್ಷಿಸುವುದೂ ಉಂಟು. ಹೀಗೆ ದೂರುಗಳನ್ನು ನಿರ್ಲಕ್ಷಿಸಿದರೆ ನೀವು ಯುದ್ಧದಲ್ಲಿ ಅರ್ಧ ಗೆದ್ದಂತೆಯೇ. ನಿಮಗೆ ಉಳಿಯವುದು ನಿಮ್ಮ ದಾಖಲೆ, ಪ್ರಮಾಣಪತ್ರ, ಸಾಕ್ಷ್ಯಗಳ ಮೂಲಕ ನಿಮಗೆ ಆದರೆ ನಷ್ಟವನ್ನು ನ್ಯಾಯಾಲಯಕ್ಕೆ ಖಚಿತಪಡಿಸುವುದು. ನಿಮಗಾದ ನಷ್ಟ, ಸೇವಾಲೋಪದ ಸಮಸ್ಯೆ ನ್ಯಾಯಾಲಯಕ್ಕೆ ಮನವರಿಕೆಯಾದರೆ ನಿಮಗೆ ಜಯ ನಿಶ್ಚಿತ.

ನ್ಯಾಯಾಲಯದ ತಕರಾರು ಬೇಡವೇ ಬೇಡ ಎಂದು ಎದುರಾಳಿ ಸಂಧಾನಕ್ಕೆ ಬರಲು ಸಿದ್ಧವಾಗಲೂ ಬಹುದು. ಆಗಲೂ ಎಚ್ಚರಿಕೆಯಿಂದ ಸಮರ್ಥವಾಗಿ ನಿಮ್ಮ ಪ್ರತಿಪಾದನೆ ಮುಂದಿಡಿ. ಇಂತಹ ಸಂದರ್ಭಗಳಲ್ಲಿ ಸಮರಾಂಗಣಕ್ಕೆ ನುಗ್ಗುವ ಮುನ್ನವೇ ನೀವು ಗೆಲ್ಲಬಲ್ಲಿರಿ.

ಎದುರಾಳಿ ನಿಮ್ಮ ದೂರನ್ನು ನಿರಾಕರಿಸಿ ನ್ಯಾಯಾಲಯದಲ್ಲಿ ಹೋರಾಟಕ್ಕೇ ಸಜ್ಜಾದರೆ ಆಗ ನಿಮ್ಮ ಬೆಂಬಲಕ್ಕೆ ಬರುವುದು ನೀವು ಸಿದ್ಧಪಡಿಸಿಕೊಂಡ ಮೇಲೆ ತಿಳಿಸಿದ ದಾಖಲೆಪತ್ರಗಳು, ಪ್ರಮಾಣಪತ್ರ ಮತ್ತು ಸಾಕ್ಷ್ಯಾಧಾರಗಳೇ ಎಂಬುದನ್ನು ಮರೆಯಬೇಡಿ.

ಈ ಸಿದ್ಧತೆಗಳೊಂದಿಗೆ ಗ್ರಾಹಕ ನ್ಯಾಯಾಲಯಕ್ಕೆ ನಿಮಗಾದ ನಷ್ಟ, ಸೇವಾಲೋಪದ ಬಗ್ಗೆ ಮನವರಿಕೆ ಮಾಡಲು ನೀವು ಸಮರ್ಥರಾದರೆ ನ್ಯಾಯ ಪಡೆಯುವ ನಿಟ್ಟಿನಲ್ಲಿ ಶೇಕಡಾ 75ರಷ್ಟು ನೀವು ಹೆಜ್ಜೆ ಮುಂದಿಟ್ಟಿದ್ದೀರಿ ಎಂದು ಅರ್ಥ.

ನಿಮ್ಮ ಅಹವಾಲನ್ನು ನೀವೇ ಸಮರ್ಥವಾಗಿ ಮಂಡಿಸಬಲ್ಲಿರಿ ಎಂದಾದರೆ ನ್ಯಾಯಾಲಯದಲ್ಲಿ ನೀವೇ ವಾದ ಮಂಡಿಸಬಹುದು. ಇಲ್ಲವಾದಲ್ಲಿ ನೀವು ವಕೀಲರ ನೆರವನ್ನೂ ಪಡೆಯಬಹುದು. ವಕೀಲರು ಇರಬೇಕೆಂಬ ಕಡ್ಡಾಯ ಇಲ್ಲಿ ಇಲ್ಲ.

ಹಿಂದೆ ಗ್ರಾಹಕ ನ್ಯಾಯಾಲಯಗಳಲ್ಲಿ ಪ್ರಕರಣಗಳು ವರ್ಷಗಟ್ಟಲೆ ಹೋಗುತ್ತಿದ್ದುದು ಇತ್ತು. ಆದರೆ ಈಗ ಹಾಗಿಲ್ಲ. ನೋಟಿಸ್ ಜಾರಿಯಾದ ಮೂರು ತಿಂಗಳ ಅವಧಿಯಲ್ಲಿ ಇತ್ಯರ್ಥವಾಗಬೇಕು ಎಂಬ ನಿಯಮವೇ ಇದೆ. ಹಾಗೆ ಆಗದೇ ಇದ್ದರೂ ವರ್ಷದೊಳಗೆ ಇತ್ಯರ್ಥವಾಗುವುದಂತೂ ಖಂಡಿತ. ಗ್ರಾಹಕ ಸಂರಕ್ಷಣಾ ಕಾಯ್ದೆಗೆ ತರಲಾಗಿರುವ ತಿದ್ದುಪಡಿ ನ್ಯಾಯಾಲಯಕ್ಕೆ ಅಷ್ಟರಮಟ್ಟಿನ ಬಲ
ತಂದು ಕೊಟ್ಟಿದೆ.

ಇಷ್ಟೆಲ್ಲ ಮಾಹಿತಿ ಒಂದು ಪ್ರಬಲ ಅಸ್ತ್ರವಿದ್ದಂತೆ. ಅದರ ಬಳಕೆ ಮಾಡುವುದು. ನಿಮ್ಮ- ನಮ್ಮೆಲ್ಲರಿಗೆ ಬಿಟ್ಟದ್ದು.




Thursday, March 13, 2008

Globalization: Is it 'Horse of Ashwamedha' ..?

Manohara Acharya, Senior Artist, Journalist and designer, serving 'Sudha', 'Prajavani' and 'Mayura' since several years, has tried to give new shape to Kannada fonts through his design. He says he tried to make use of new techniques availed to him through globalization which he calls 'Horse of Ashwamedha' to beautify Kannada Akshara (Kannada fonts) and the result is 'Chandada Kannada'!

ಅಶ್ವಮೇಧದ ಕುದುರೆಗೆ 'ಲಗಾಮು'..!

ಜಾಗತೀಕರಣ ಎಂಬ ಅಶ್ವಮೇಧದ ಕುದುರೆಯನ್ನು ಹಿಡಿದು ಕಟ್ಟಿಹಾಕಿ ಪಳಗಿಸಿ ಅದರ ಮೂಲಕ ತಮ್ಮ ಕನ್ನಡ ಅಕ್ಷರಕ್ಕೆ ಹೊಸ ವಿನ್ಯಾಸ ನೀಡಿ ಚಂದ ಮಾಡಲು ಮನೋಹರ ಆಚಾರ್ಯ ಯತ್ನಿಸಿದ್ದಾರೆ. ಹೌದು! ಅವರ 'ಚಂದದ ಕನ್ನಡ' ರೂಪುಗೊಂಡದ್ದು ಹೇಗೆ?

ನೆತ್ರಕೆರೆ ಉದಯಶಂಕರ

ಜಾಗತೀಕರಣ ಎಂದರೆ ಅಶ್ವಮೇಧದ ಕುದುರೆ.! ಯಾರು ಅದನ್ನು ಹಿಡಿದು ಕಟ್ಟಿ ಹಾಕಬಲ್ಲರೋ ಅವರು ಅದಕ್ಕೆ ಅಧಿಪತಿಯಾಗುತ್ತಾರೆ. ಅದನ್ನು ತಮಗೆ ಬೇಕಾದಂತೆ ಪಳಗಿಸುತ್ತಾರೆ. ಅದರಿಂದ ತಮಗೆ ಬೇಕಾದ ಲಾಭ ಪಡೆಯುತ್ತಾರೆ.

ಈ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿ ನಮಗೆ ಬೇಕಾದಂತೆ ಪಳಗಿಸುವ ವಿದ್ಯೆಯನ್ನು ನಾವು ಇಂದು ಕರಗತ ಮಾಡಿಕೊಳ್ಳಬೇಕು.

ಹಿರಿಯ ಕಲಾವಿದ, ವಿನ್ಯಾಸಕಾರ, ಪತ್ರಕರ್ತ ಮನೋಹರ ಆಚಾರ್ಯ ಅವರ ವಿಚಾರ ಲಹರಿ ಹೀಗೆ ಓಡುತ್ತಿತ್ತು.

'ಕನ್ನಡ ಅಕ್ಷರಗಳ ವಿನ್ಯಾಸಕ್ಕೆ ಸಂಬಂಧಪಟ್ಟಂತೆಯೂ ಅಷ್ಟೇ. ನಾವು ಜಾಗತೀಕರಣದ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವ ಪ್ರಯತ್ನವನ್ನೇ ಮಾಡಿಲ್ಲ. ಇಂಗ್ಲಿಷ್ ಅಕ್ಷರಗಳ ವಿನ್ಯಾಸ ನೋಡಿ.. ಅವರು ಅದನ್ನು ಪಳಗಿಸಿದ ಬಗೆ ನೋಡಿ..'

'ನಾನು ಈಗ ಇಲ್ಲಿ ಅಂತಹ ಒಂದು ಯತ್ನ ಮಾಡಿದ್ದೇನೆ. ಕನ್ನಡ ಅಕ್ಷರಗಳಿಗೆ 'ವಿನ್ಯಾಸ'ದ ಹೊಸ ರೂಪ ನೀಡಲು ಪ್ರಯತ್ನಿಸಿದ್ದೇನೆ. ಜಾಗತೀಕರಣವೆಂಬ ಕುದುರೆಯನ್ನು ಅದಕ್ಕೆ ಬಳಸಿಕೊಂಡಿದ್ದೇನೆ'

ಮಂಗಳೂರಿನಲ್ಲಿ ಮಾರ್ಚ್ 14ರಿಂದ 18ರವರೆಗೆ ನಡೆಯಲಿರುವ ತಮ್ಮ 'ಚಂದದ ಕನ್ನಡ' ಪ್ರದರ್ಶನ ಬಗ್ಗೆ ಮಾತನಾಡುತ್ತಾ ಮನೋಹರ ಆಚಾರ್ಯ ಅವರು ಕನ್ನಡ ಅಕ್ಷರಗಳಿಗೆ ನೀಡಬಹುದಾದ ಹೊಸತನದ ಸಾಧ್ಯತೆಗಳ ಕುರಿತು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ಬಗೆ ಇದು.

ನಮ್ಮ ಪತ್ರಿಕೋದ್ಯಮ ಇರಬಹುದು, ಪುಸ್ತಕೋದ್ಯಮವೇ ಇರಬಹುದು. ಇಷ್ಟವರೆಗೂ ವಿಜೃಂಭಿಸುತ್ತಾ ಬಂದದ್ದು ವಿನ್ಯಾಸ ಅಲ್ಲ. ಕೇವಲ ಅಕ್ಷರಗಳು. ಈ ಅಕ್ಷರಗಳ ಮೇಲೆ ವಿನ್ಯಾಸ ಸವಾರಿ ಮಾಡಿದರೆ ಅದರ ಸೊಬಗೇ ಬೇರೆ. ವಿನ್ಯಾಸ ಇಲ್ಲದ ಮನೆ ಹೇಗೆ ಬಡವಾಗುತ್ತದೋ ಅದೇ ರೀತಿ ವಿನ್ಯಾಸ ಇಲ್ಲದ ಅಕ್ಷರ ಕೂಡಾ.

ಆಟದ ಅಂಗಳಕ್ಕೆ ಹೋಗಿ ನೋಡಿ. ಒಲಿಂಪಿಕ್ ಪ್ರವೇಶ ಬಯಸುವ ಕ್ರೀಡಾಳು ನೇರವಾಗಿ ಒಲಿಂಪಿಕ್ ಅಂಗಣಕ್ಕೆ ಧುಮುಕಿದರೆ ಏನಾಗುತ್ತದೆ, ಅದೇ ಆತ ಒಂದಷ್ಟು ತರಬೇತಿ ಪಡೆದು ನಂತರ ಅಂಗಣ ಪ್ರವೇಶಿಸಿದರೆ ಹೇಗಿರುತ್ತದೆ?

ತರಬೇತಿಯೇ ಇಲ್ಲದೆ ಪ್ರವೇಶಿಸಿದ ಓಟಗಾರ ಮೊದಲಿಗೇ ಮುಗ್ಗರಿಸಿದರೆ, ಒಂದಷ್ಟು ಪ್ರವೇಶ ಪಡೆದವ ಮುಂದಕ್ಕೆ ಓಡಲು ಶಕ್ತನಾಗುತ್ತಾನೆ.

ಕನ್ನಡ ಅಕ್ಷರಗಳಿಗೆ ಹೀಗೆ 'ವಿನ್ಯಾಸ'ದ ತರಬೇತಿ ಬೇಕು. ಆಗ ಬರುತ್ತದೆ ಅದಕ್ಕೊಂದು ಚಂದ. ಇಲ್ಲಿ 'ಚಂದದ ಕನ್ನಡ' ಅನಾವರಣಗೊಂಡಿರುವುದೂ ಇದೇ ಚಿಂತನೆಯ ಮೂಸೆಯಲ್ಲಿ ಎನ್ನುತ್ತಾರೆ ಮನೋಹರ ಆಚಾರ್ಯ.

ಬಹಳ ವರ್ಷಗಳಿಂದ ತಮ್ಮದೇ ಚಿಂತನೆಯಲ್ಲಿ ಮುಳುಗಿ 'ಚಂದದ ಕನ್ನಡ' ಹೇಗಿರಬೇಕು ಎಂದು ಕನಸು ಕಾಣುತ್ತಾ ಅದಕ್ಕೊಂದು ರೂಪಕೊಟ್ಟ ಮನೋಹರ ಆಚಾರ್ಯ ಅವರ ಕಲ್ಪನೆಯ ಕೂಸು ಇದೀಗ ಮಂಗಳೂರಿನ ಬಲ್ಲಾಳಬಾಗಿನಲ್ಲಿ ಇರುವ ಪ್ರಸಾದ ಆರ್ಟ್ ಗ್ಯಾಲರಿಯಲ್ಲಿ ಕಣ್ಣು ಬಿಡುತ್ತಿದೆ.

ಆಳ್ವಾಸ್ ಫೌಂಡೇಷನ್ನಿನ ಡಾ. ಎಂ. ಮೋಹನ ಆಳ್ವ ಅವರು ಮಾರ್ಚ್ 14ರ ಸಂಜೆ 4.30ಕ್ಕೆ ಪ್ರದರ್ಶನವನ್ನು ಉದ್ಘಾಟಿಸಿದರೆ, ಕಲಾವಿದ ಗಣೇಶ ಸೋಮಯಾಜಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.

ಮಾರ್ಚ್ 14ರಿಂದ 18ರವರೆಗೆ ಈ 'ಚಂದದ ಕನ್ನಡ' ನೋಡಲು ತೆರೆದಿರುತ್ತದೆ.

ಹಾಂ. ಹೇಳಲು ಮರೆತದ್ದು- ದೀರ್ಘಕಾಲದಿಂದ 'ಸುಧಾ' 'ಪ್ರಜಾವಾಣಿ', 'ಮಯೂರ' ಬಳಗದಲ್ಲಿ ಸೇವೆ ಸಲ್ಲಿಸುತ್ತಿರುವ ಮನೋಹರ ಆಚಾರ್ಯ ಮೂಲತಃ ದಕ್ಷಿಣ ಕನ್ನಡದವರೇ.

ಆಚಾರ್ಯ ಅವರ ವಿನ್ಯಾಸದ ಮುಷ್ಠಿಯೊಳಗೆ ಪಳಗಿದ 'ಚಂದದ ಕನ್ನಡ'ವನ್ನು ನೋಡಲು, ನಿಮ್ಮ ಅಭಿಪ್ರಾಯವನ್ನು ನೋಂದಾಯಿಸಲು ಆರ್ಟ್ ಗ್ಯಾಲರಿಯತ್ತ ಹೆಜ್ಜೆ ಹಾಕುತ್ತಿರಲ್ಲ?

Wednesday, March 12, 2008

Professor’s 'new type' house

A university professor in Shimoga had the fore-sight to make his home nearly autonomous from various public utilities, and alongside do his part for the environment. And when his neighbours were slow to learn, he set out to educate them too.

Shree Padre

At the house-warming ceremony in this new home in Shimoga's Lal Bahadur Shastri Nagar, Dr Sreepathi presented all the guests with a specially written booklet, printed at considerable expenditure to himself, about roof water harvesting. He had decided, during construction, that he would harvest the rain falling on his roof, choosing this option first, and digging an open well only later.

And having made his choice, he decided he would teach others about it too. "Showing by practice is the best way", he says politely. The house, constructed four years ago, has a total capacity to store 30,000 litres of rain water. A 20,000-litre tank is under the dining hall. The other one, with half as much capacity, is beneath the portico. "Won't worms grow in the stored rainwater?" A lot of visitors to his home ask this question, and Sreepathi, true to his 'showing by practice' way, decided to test the water in the tank in April 2005. Despite having been stored for months since the previous monsoon, the water was still potable.

As it turned out, for Sreepathi, the choice of a harvesting system in preference to relying on the open well was prudent too in more than one way. The first problem was that the well yielded slightly saline water, and the roof-top rains were therefore much needed for cooking and drinking. Moreover, since the construction of the house, Sreepathi has been measuring the water level in his well every month, and he's been thankful not to have relied on it much. "Though I'm recharging my open well, the annual decline rate of water table around here is alarming. It was 18 feet below ground in April 2004. Two years later, it had fallen to 23.5 feet. A decline of 5.5 feet in just two seasons", he worries.

Total ecology

The house, in fact, is a total harvesting zone for rain water. Excess water from the sump is used to recharge the ground well. Even grey water, i.e. water that has been already used for washing and bathing, isn't wasted, either. A separate open pit is constructed at the back of the house to gather this; every morning, Sreepathi manually fills this water in a rose can to drench his vegetable plants. Even in summer, the plants don't require separate fresh water
The family's eco-friendly practices are much older than the house itself. For the last 12 years, they haven't taken any waste material outside their compound; instead, it's composted and used for their kitchen garden. Sreepathi uses a bicycle for his local trips, while his wife Mamatha, a college lecturer, moves on an electric-powered moped.

Whenever the sun permits, cooking in the home is done using a solar cooker. Hot water for bathing is also obtained courtesy of the sun. Indeed, so much is the home's reliance on solar power that the house is itself named Vibha, a Sanskrit word for the sun. Even during the nights, it's the sun that keeps the house lit, thanks to solar lights that store charge during the day in batteries. The house's careful design also permits natural air-flow. During summer, air flows from south west direction. To guide that air-flow inside, the north side windows are fitted with vertical projections called wind breaks. Surprisingly, there is no electric fan or light inside the home. Electricity has only two uses here - for the motor pump and for the fridge. Though municipal water is available, Vibha hasn't taken a connection.

The roof is twelve feet above the floor. The height and the hollowness of the roofing material keep the interiors cool. The terra-cotta hollow tiles have air gaps inside. These act as insulation and reduce heat transfer. Compared to concrete, the thermal conductivity of clay - from which these roofs are made - is much lower. As such, the heat transfer is lesser. A solar-powered exhaust fan connected to a PVC pipe from inside the tanka opens into the bed room on the first floor. Once it is switched on, it facilitates the cool air to come up and enter the room. "All these arrangements keep the house 2 to 3 degrees cooler than the neighboring houses", points out Sreepathi.

There are houses elsewhere in the state that have adopted only water harvesting, or solar lighting, and a few have both. But Sreepathi is yet to come across a house that has as many eco-friendly features as his Vibha.

Mental blocks
Vibha draws many visitors. Every week 2-3 people come to have a look at that 'new type house'. That makes a minimum of 500 visitors a year. "Though there are water shortages, very few people get convinced about rainwater harvesting", observes Mamatha, "One major mental block is about the potability of stored rain water. The impression is that the tap water is best. Those who construct new houses don't mind getting granite stone all the way from Rajasthan, and paying for that. Still, for them, the one-time investment for rain harvesting appears to be expensive."

Adds Sreepathi, "Even if they save 10 per cent in the expenditure on flooring, they can make a dependable arrangement for water. Rs.30,000-40,000 would provide them a good storage structure that will provide year round water."

Take Shimoga's Ashwathanagar locality, for example. Houses here don't have municipal water supply. Not a single open well here has water. The number of bore wells is increasing. Though they have Sreepathi's live example nearby, they don't mind waiting for hours in queues for the tanker water than independently tapping the rain. Recently, as a result of Sreepathi's constant encouragement, two families - that of Madhava Shastry and D S Ramakrishna - have now started utilising rain. "In the entire city, only about 35 families that are harvesting rain", tells Sreepathi with disappointment, "Except these examples, the city is far far behind in water literacy."

To fix that, the professor has been spending considerable time and efforts to popularise rain water harvesting in and around Shimoga. At Jawaharalal Nehru National College of Engineering where he works, he has floated an organisation, Chirantana Club to create awareness about sustainable living. He himself has written dramas on water conservation and had them enacted by students. In the last three years, he has held 60 awareness programmes on rain harvesting, on request by various organisations.

In 2002, a group of good-hearted citizens had started a Task Force for Rain Water Harvesting in Shimoga to offer guidance to those interested. Elsewhere in Karnataka, thanks to media coverage, thousands are interested in harvesting rain on their own, but unfortunately, there is nobody to show them how. In Shimoga, the irony is that a band of people who are ready to guide others do not find many takers.

Of late, the situation is slowly changing, perhaps as a result of increasing need for the citizens to have autonomous solutions. Sreepathi himself has guided a few families in the recent past. One outstanding project out of this is at the cultural centre Gamaka Bhavan at Hosahally, in the outskirts of the city where a 1.75 lakh litres tank is being constructed below the stage. The top of the tank would be the dais.

Shree Padre is a journalist with many years of experience in agricultural reporting. He is the author of several books, including one on rainwater harvesting, published by Altermedia. Dr Sreepathi can be contacted at (08182) 274 952, Mobile : 94480 00643, or sreepathi_lk@hotmail.com.

Photo details:
1. open well which has connection from storage tank. Excess water from tank in the rainy season goes to this well
2. Rain water filter
3. Rain water filter with storage tank( you can see the black cover of the tank) cap: 20,000 litres. (another type)
4.Used water storage tank for recycling
5.Front view of the house
(Article cour’tesy: http://www.indiatogether.org/ Photos by: Dr. Sreepathi)

Monday, March 10, 2008

She is the first woman Allopathic Doctor of India..!

March 8th was celebrated as International Woman’s Day all over the world including India. We praised and recognized many women who contributed to various fields. But we forgot one Anandi Bai who was the first woman allopathic doctor who got her medical degree certificate on 11 March 1886 in America. PARYAYA salutes this young lady doctor and her husband for their achievement.

ಭಾರತದ ಮೊತ್ತ ಮೊದಲ ಆಲೋಪಥಿ ವೈದ್ಯೆ

ಮಹಿಳೆಯರು ಮನೆಬಿಟ್ಟು ಹೊರಗೆ ಹೋಗಬಾರದು ಎಂಬ ನಂಬಿಕೆ ಬಲವಾಗಿದ್ದ ಕಾಲದಲ್ಲಿ ಮಹಿಳೆಯೊಬ್ಬಳು ಮನೆಯಿಂದ ಹೊರಬಂದು ವಿದೇಶಕ್ಕೆ ತೆರಳಿ ಅಧ್ಯಯನ ಮಾಡಿ ಭಾರತದ ಮೊತ್ತ ಮೊದಲ `ಆಲೋಪಥಿ ವೈದ್ಯೆ' ಆದ ಕಥೆ ಇದು. ಆಕೆಯ ಈ ಸಾಧನೆಗೆ ಬೆಂಬಲವಾಗಿ ಇದ್ದದ್ದು ಆಕೆಯ ಪತಿ.... ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತನ್ನೇ ತಿರುವು ಮುರುವು ಮಾಡಿದ ಘಟನೆ ಇದು...!

ನೆತ್ರಕೆರೆ ಉದಯಶಂಕರ

ನೂರ ಇಪ್ಪತ್ತೆರಡು ವರ್ಷಗಳ ಹಿಂದೆ- 1886ರ ಮಾರ್ಚ್ 11- ಭಾರತೀಯ ಮಹಿಳೆಯರ ಪಾಲಿಗೆ ಚಿರಸ್ಮರಣೀಯ ದಿನ. ಈದಿನ ಅಮೆರಿಕದ ಪೆನ್ಸಿಲ್ವೇನಿಯಾದ ಮಹಿಳಾ ವೈದ್ಯಕೀಯ ಕಾಲೇಜಿನ ಘಟಿಕೋತ್ಸವ. ಪದವಿ ಪ್ರದಾನದ ದಿನ. ಅಮೆರಿಕನ್ನರಿಗೆ ಮಹಿಳಾ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆಯುವುದರಲ್ಲಿ ಅಂತಹ ವಿಶೇಷವೇನೂ ಇರಲಿಲ್ಲ. ಆದರೆ ಭಾರತೀಯರ ಮಟ್ಟಿಗೆ ಅದು ಸಂಭ್ರಮದ ಕ್ಷಣವಾಗಿತ್ತು.

ಈದಿನ ಪಾಶ್ಚಾತ್ಯ ವೈದ್ಯಕೀಯ ಶಿಕ್ಷಣ ಓದಿದ ಭಾರತದ ಮೊತ್ತ ಮೊದಲ ಮಹಿಳೆ `ವೈದ್ಯಕೀಯ ಪದವಿ' ಪಡೆದರು. ಅರ್ಥಾತ್ ಆಕೆ ಭಾರತದ ಮೊತ್ತ ಮೊದಲ ಮಹಿಳಾ ಆಲೋಪಥಿ ವೈದ್ಯೆ ಎನಿಸಿಕೊಂಡರು..! ಈ ಸಾಧನೆ ಮಾಡಿದ ಮಹಿಳೆಯ ಹೆಸರು ಆನಂದಿಬಾಯಿ ಜೋಶಿ.

ಆನಂದಿಬಾಯಿ ಜೋಶಿ ಬದುಕಿದ್ದುದು ಕೇವಲ 22 ವರ್ಷಗಳು. 1865ರಿಂದ 1887ರವರೆಗೆ ಅಷ್ಟೆ. ಆದರೆ ಈ ಚಿಕ್ಕ ವಯಸ್ಸಿನಲ್ಲಿ ಎಲ್ಲ ಸಾಂಪ್ರದಾಯಿಕ ಅಡ್ಡಿ, ಅಡಚಣೆ, ವಿರೋಧಗಳನ್ನು ಎದುರಿಸಿ ಆಕೆ ಮಾಡಿದ ಸಾಧನೆ ಮಾತ್ರ ಭಾರತದ ಮಹಿಳಾ ವೈದ್ಯಕೀಯ ಜಗತ್ತಿನಲ್ಲಿ ಚಿರಸ್ಥಾಯಿಯಾಗಿ ನಿಲ್ಲುವಂತಹುದು.

ಅದು ಹತ್ತೊಂಬತ್ತನೆಯ ಶತಮಾನ. ಪರಂಪರಾಗತ ಕಟ್ಟುನಿಟ್ಟುಗಳಿಗೆ ಭಾರತೀಯರು, ಅದರಲ್ಲೂ ಭಾರತೀಯ ನಾರಿಯರು ಬಲವಾಗಿ ಅಂಟಿಕೊಂಡಿದ್ದ ಕಾಲ. ಮಹಾರಾಷ್ಟ್ರದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಈಕೆ ಬೆಳೆದ ಪರಿಸರ, ಸ್ವತಂತ್ರ ವಿಚಾರ ಲಹರಿ ಮೊಳೆಯಲು ಆಸ್ಪದ ಕೊಡುವಂತಹುದಾಗಿರಲಿಲ್ಲ.

ಆದರೆ ಗೋಪಾಲರಾವ್ ಜೋಶಿ ಎಂಬ ಬ್ರಾಹ್ಮಣ ವಿಧುರನೊಬ್ಬ ಆಕೆಯ ಬದುಕನ್ನು ಪ್ರವೇಶಿಸಿದ್ದು ಆಕೆಯ ಬಾಳಿಗೆ ಒಂದು ದೊಡ್ಡ ತಿರುವನ್ನೇ ನೀಡಿತು. ವಾಸ್ತವವಾಗಿ ಆ ಕಾಲದ ಚಿಂತನೆಗಳಿಗೆ ಭಿನ್ನವಾಗಿ ಚಿಂತಿಸುತ್ತಿದ್ದ ಗೋಪಾಲರಾವ್ ವಿಧವೆಯೊಬ್ಬಳನ್ನು ಮದುವೆಯಾಗುವ ವಿಚಾರ ಹೊಂದಿದ್ದ ವ್ಯಕ್ತಿ. ಬಡ ಅಂಚೆ ಗುಮಾಸ್ತನಾಗಿದ್ದ ಆತನಿಗೆ ಮರುಮದುವೆಯಾಗಲು ವಿಧವೆ ಸಿಗಲಿಲ್ಲ.

ಕಡೆಗೆ ಆತ ಮದುವೆಯಾದದ್ದು 9 ವರ್ಷ ವಯಸ್ಸಿನ ಯಮುನಾಳನ್ನು. ಮದುವೆಯ ಬಳಿಕ ಆತ ತನ್ನ ಪತ್ನಿಯನ್ನು ವಿದ್ಯಾವಂತೆಯನ್ನಾಗಿ ಮಾಡಬೇಕು ಎಂಬ ಗುರಿ ಇಟ್ಟುಕೊಂಡ.

1965ರ ಮಾರ್ಚ್ 31ರಂದು ಮುಂಬೈ ಸಮೀಪದ ಕಲ್ಯಾಣದಲ್ಲಿ ಜನಿಸಿದ್ದ ಯಮುನಾಳಿಗೆ ಮದುವೆ ಬಳಿಕ ಗೋಪಾಲರಾವ್ ಜೋಶಿ ಇಟ್ಟ ಹೆಸರು ಆನಂದಿ. ಹುಟ್ಟಿದ ಮೊದಲ ಮಗು ವಾರದಲ್ಲೇ ಸತ್ತು ಹೋದಾಗ ಜೋಶಿ ಗಟ್ಟಿ ಮನಸ್ಸು ಮಾಡಿದ. ಪತ್ನಿಯನ್ನು ಕೇವಲ ವಿದ್ಯಾವಂತೆಯನ್ನಾಗಿ ಮಾಡುವುದಷ್ಟೇ ಅಲ್ಲ, ಆಕೆಯನ್ನು ವೈದ್ಯೆಯನ್ನಾಗಿ ಮಾಡಬೇಕೆಂಬ ಸಂಕಲ್ಪ ಮಾಡಿಕೊಂಡ.

ಇದಕ್ಕಾಗಿಯೇ ಗೋಪಾಲರಾವ್ ಮುಂಬೈಗೆ ವರ್ಗಾವಣೆ ಮಾಡಿಸಿಕೊಂಡ. ಅಲ್ಲಿನ ಮಿಷನ್ ಶಾಲೆಯಲ್ಲಿ ಆಕೆಗೆ ಶಿಕ್ಷಣ ಕೊಡಿಸಿದ.

ಅಮೆರಿಕಕ್ಕೆ ಹೋದರೆ ವೈದ್ಯಕೀಯ ಶಿಕ್ಷಣಕ್ಕೆ ವಿಪುಲ ಅವಕಾಶ ಇದೆ ಎಂದೂ ಅರಿತುಕೊಂಡ. ಆದರೆ ಅಮೆರಿಕಕ್ಕೆ ಹೋಗಲು ಬೇಕಾಗುವಷ್ಟು ಹಣ ಎಲ್ಲಿಂದ ಬರಬೇಕು? ಆದರೆ ಜೋಶಿ ಧೃತಿಗೆಡಲಿಲ್ಲ. ಅಮೆರಿಕದ ವಿವಿಧ ಸಂಸ್ಥೆಗಳಿಗೆ ನೆರವು ಕೋರಿ ಪತ್ರಗಳನ್ನು ಬರೆಯತೊಡಗಿದ.

ಗೋಪಾಲರಾವ್ ಜೋಶಿ ಮತ್ತು ಮಿಸ್ಟರ್ ವೈಲ್ಡರ್ ಎಂಬವರ ಮಧ್ಯೆ ಈ ವಿಚಾರವಾಗಿ ನಡೆದ ಪತ್ರ ವ್ಯವಹಾರ `ಅಮೆರಿಕನ್ ಕ್ರಿಶ್ಚಿಯನ್ ರಿವ್ಯೂ' ಪತ್ರಿಕೆಯಲ್ಲಿ ಬೆಳಕು ಕಂಡದ್ದು ಜೋಶಿಯ ಪ್ರಯತ್ನಗಳಿಗೆ ಹೊಸ ತಿರುವು ನೀಡಿತು. ಇದನ್ನು ಓದಿದ ಅಮೆರಿಕದ ಮಹಿಳೆ ಕಾರ್ಪೆಂಟರ್ ಎಂಬಾಕೆ ಆನಂದಿಬಾಯಿಗೆ ಪತ್ರ ಬರೆದಳು. ಇಬ್ಬರಲ್ಲಿ ಗೆಳೆತನ ಬೆಳೆಯಿತು.

ಅಂತೂ ಇಂತೂ ಹಣ ಹೊಂದಿಸಿಕೊಂಡು ಆನಂದಿಯನ್ನು ನ್ಯೂಯಾರ್ಕಿಗೆ ಕಳುಹಿಸಲು ಜೋಶಿ ಸಿದ್ಧತೆ ನಡೆಸಿದ.

ಸಂಪ್ರದಾಯಸ್ಥರಿಂದ ಇದಕ್ಕೂ ವಿರೋಧ ವ್ಯಕ್ತವಾಯಿತು. ಆದರೂ ಕೆಲವು ಆಸಕ್ತರು, ಸಮಾಜ ಸುಧಾರಕರು ಜೋಶಿ ದಂಪತಿಯ ನೆರವಿಗೆ ಬಂದರು. ಆಕೆಗೆ ಬೀಳ್ಕೊಡುಗೆ ಏರ್ಪಡಿಸಿದರು.

`ನಾನು ಸರಿಯಾದ ಕೆಲಸ ಮಾಡುತ್ತ್ತಿದ್ದೇನೆ ಎಂದು ನನಗೆ ಅನ್ನಿಸುತ್ತಿದೆ. ಮಹಿಳಾ ವೈದ್ಯಳಾಗಿ ಭಾರತೀಯ ಮಹಿಳೆಯರಿಗೆ ಹೆಚ್ಚು ನೆರವಾಗಲು ಸಾಧ್ಯವಾಗುತ್ತದೆ ಎಂಬುದು ನನ್ನ ನಂಬಿಕೆ' ಎಂದು ಈ ಸಂದರ್ಭದಲ್ಲಿ ಹೇಳಿದ ಆನಂದಿಬಾಯಿ `ನಾನು ಭಾರತೀಯ ಬ್ರಾಹ್ಮಣಳಾಗಿ ವಿದೇಶಕ್ಕೆ ಹೋಗುತ್ತಿದ್ದೇನೆ. ಹಾಗೆಯೇ ಹಿಂದಿರುಗುತ್ತೇನೆ' ಎಂದೂ ಘೋಷಿಸಿದಳು.

ಅಮೆರಿಕದಲ್ಲಿ ಕಾರ್ಪೆಂಟರ್ ಕುಟುಂಬ ಜೋಶಿ ದಂಪತಿಗೆ ಅಗತ್ಯ ಮಾರ್ಗದರ್ಷನಗಳನ್ನು ಮಾಡಿತು. ಮೆಡಿಕಲ್ ಕಾಲೇಜಿನಲ್ಲಿ ಸೀಟು ಹಾಗೂ ಶಿಷ್ಯವೇತನ ಪಡೆದ ಆನಂದಿ, ಹಣಕಾಸಿನ ಚಿಂತೆಗಳನ್ನು ಬದಿಗೊತ್ತಿ ಓದಿನಲ್ಲಿ ತನ್ಮಯಳಾದಳು.

ಇಷ್ಟ್ಲೆಲದರ ಮಧ್ಯೆ ಆಕೆ ತನ್ನ ಬದುಕಿನ ರೀತಿ, ನೀತಿ ಮಾತ್ರ ಬದಲಾಯಿಸಲಿಲ್ಲ. ಶುದ್ಧ ಸಸ್ಯಾಹಾರಿಯಾಗಿ, ಎಂಟು ಮೀಟರ್ ಉದ್ದದ ಮಹಾರಾಷ್ಟ್ರದ ಸೀರೆಯನ್ನೇ ಧರಿಸುತ್ತಾ ಭಾರತೀಯ ಬ್ರಾಹ್ಮಣ ಬದುಕನ್ನೇ ಬಾಳುತ್ತಾ ವೈದ್ಯಕೀಯ ಓದಿದಳು.

1886ರ ಮಾರ್ಚಿಯಲ್ಲಿ ಆಕೆ ಅಂತಿಮ ಪರೀಕ್ಷೆ ತೆಗೆದುಕೊಂಡು ಪದವಿ ಗಿಟ್ಟಿಸಿಕೊಂಡಳು. ಭಾರತಕ್ಕೆ ಹಿಂದಿರುಗುವ ಮುನ್ನವೇ ಕೊಲ್ಹಾಪುರದ ಎಡ್ವರ್ಡ್ ಆಸ್ಪತ್ರೆಯ ಮಹಿಳಾ ವಾರ್ಡನ್ ಉಸ್ತುವಾರಿ ಹೊಣೆಗಾರಿಕೆಯೂ ಆಕೆಯ ಪಾಲಿಗೆ ಲಭಿಸಿತು.

ಗೋಪಾಲರಾವ್ ಜೋಶಿಯ ಸಂಕಲ್ಪ ಸಿದ್ಧಿಸಿತು. ಪತ್ನಿಯನ್ನು ಭಾರತದ ಪ್ರಪ್ರಥಮ ಮಹಿಳಾ ವೈದ್ಯೆಯನ್ನಾಗಿ ರೂಪಿಸಿಕೊಂಡು 1886ರ ಅಕ್ಟೋಬರಿನಲ್ಲಿ ಗೋಪಾಲ ರಾವ್ ಆಕೆಯೊಂದಿಗೆ ಭಾರತಕ್ಕೆ ವಾಪಸಾದ. ಟೀಕೆ, ಬಹಿಷ್ಕಾರಗಳ ಬದಲಾಗಿ ಭಾರತದ ಮೊತ್ತ ಮೊದಲ ವೈದ್ಯೆಗೆ ಮೆಚ್ಚುಗೆ, ಅಭಿನಂದನೆಗಳ ಮಹಾಪೂರ ಹರಿಯಿತು. ಜೋಶಿ ದಂಪತಿಯ ಇಚ್ಛಾಶಕ್ತಿ ಕೊನೆಗೂ ಗೆದ್ದಿತ್ತು.

ಆದರೆ ವಿಧಿಯ ನಿರ್ಧಾರ ಬೇರೆಯೇ ಆಗಿತ್ತು. ವೈದ್ಯಳಾಗಿ ದೀರ್ಘಕಾಲ ಸೇವೆ ಸಲ್ಲಿಸುವ ಭಾಗ್ಯ ಆಕೆಗೆ ಇರಲಿಲ್ಲ.ವಿದೇಶದಲ್ಲಿ ಸರಳ, ಸಾತ್ವಿಕ, ಸಸ್ಯಾಹಾರವನ್ನು ಒಳಗೊಂಡ ಆಹಾರ ಪದ್ಧತಿ, ವೈದ್ಯಕೀಯ ಅಧ್ಯಯನ ಕಾಲದ ಸುಸ್ತು, ಸಮುದ್ರಯಾನದ ಬಳಲಿಕೆಯನ್ನು ಆಕೆಯ ಕೃಶ ಶರೀರ ಸಹಿಸಿಕೊಳ್ಳಲಿಲ್ಲವೇನೋ? ಆರೋಗ್ಯ ಹದಗೆಟ್ಟಿತು. 1887ರ ಫೆಬ್ರುವರಿ 26ರಂದು ತನ್ನ 22ನೇ ಹುಟ್ಟು ಹಬ್ಬಕ್ಕೆ ಒಂದು ತಿಂಗಳಿಗೂ ಮೊದಲು ಡಾ. ಆನಂದಿ ಬಾಯಿ ಇಹಲೋಕ ತ್ಯಜಿಸಿದಳು.

`ನಾನು ಮಾಡಬಹುದಾಗಿದ್ದ ಎಲ್ಲವನ್ನೂ ಮಾಡಿದ್ದೇನೆ' ಎಂಬ ಶಬ್ಧಗಳು ಆಕೆಯ ಕಟ್ಟ ಕಡೆಯ ಶಬ್ಧಗಳಾಗಿ ಉಳಿದುಬಿಟ್ಟವು. (ಸಾಧಾರ)

Thursday, March 6, 2008

Wahl! What Water falls..!


Keshav Vittla, freelance photographer has clicked more than 1000 photos of waterfalls, dams, rivers and beaches apart from landscape pictures of Karnataka. His pictures of waterfalls are fantastic and fascinating. Tourism Department of Karnataka has organized an exhibition of his selected pictures related to Water in Venkatappa Art Gallery at Bangalore recently. It attracted several prominent personalities too including Anil Kumble, well-known leg spinner and Captain of Indian Cricket Team.



ಕಂಡಿರಾ 'ಅಬ್ಬಿ ಅಬ್ಬೆ'ಯ ಸೊಬಗು..?

'ಅಬ್ಬಿ'ಯ ಹರವು ವಿಸ್ತಾರಗೊಂಡು, ನೆಲದ ಮೇಲೆ ಹರಿಯುತ್ತಾ ಸಾಗಿದರೆ 'ತೋಡು', 'ಹಳ್ಳ', 'ನದಿ' ಸೃಷ್ಟಿಯಾಗುತ್ತದೆ. ಒಂದೇ ಕಡೆಯಲ್ಲಿ ವಿಶಾಲವಾಗಿ ನಿಂತರೆ 'ಕೆರೆ', 'ಜಲಾಶಯ' ಆಗುತ್ತದೆ. 'ನದಿ'ಗೆ ಮನುಷ್ಯನೇ ಅಡ್ಡಗಟ್ಟೆ ಹಾಕಿದರೆ ಅದು 'ಅಣೆಕಟ್ಟು' 'ಡ್ಯಾಂ' ಎಂಬ ಹೆಸರು ಪಡೆದುಕೊಳ್ಳುತ್ತದೆ. ಜಲಾಶಯ ಬೃಹತ್ ಗಾತ್ರದ್ದಾಗಿ ಅಲೆಗಳ ಜೊತೆಗೆ ಭೋರ್ಗರೆಯತೊಡಗಿದರೆ ಅದೇ 'ಸಮುದ್ರ' ಇಲ್ಲವೇ 'ಸಾಗರ'ವಾಗುತ್ತದೆ. ಅದೇ 'ಅಬ್ಧಿ'!

ನೆತ್ರಕೆರೆ ಉದಯಶಂಕರ

'ಅಬ್ಬೆ' ಅಂದರೆ ಅಮ್ಮ. ಜನ್ಮದಾತೆ, ಮಾತೆ, ಹೆತ್ತವಳು. ಪ್ರೀತಿ, ಒಲವಿನ ಧಾರೆ ಎರೆಯುವವಳು ಆಕೆ. ಆಕೆ ಇದ್ದರೆ ಬದುಕು, ಆಕೆ ಇಲ್ಲದೇ ಇದ್ದರೆ ಜಗತ್ತಿನ ಜೀವ ಸಂಕುಲ ಇರುತ್ತಿರಲೇ ಇಲ್ಲ!

ಧುಮುಕುವ ಜಲಧಾರೆಗೂ 'ಅಬ್ಬೆ'ಗೆ ಹತ್ತಿರದ 'ಅಬ್ಬಿ' ಎಂಬ ಹೆಸರಿದೆ. ಈ 'ಅಬ್ಬಿ'ಯನ್ನು ಕಣ್ತುಂಬಿಕೊಂಡು ನೋಡುತ್ತಿದ್ದರೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. 'ಅಬ್ಬಿ'ಯನ್ನೂ 'ಅಬ್ಬೆ' ಎಂದರೆ ತಪ್ಪಲ್ಲ, ಏಕೆಂದರೆ ಅಬ್ಬೆ ಹೆತ್ತರೆ, ಅಬ್ಬಿ ನಮ್ಮ ದಾಹ ಇಂಗಿಸುತ್ತಾ ಪೊರೆಯುತ್ತಾಳೆ!

ಪ್ರತಿಯೊಬ್ಬರ ಮನೆಯಲ್ಲಿ ಒಬ್ಬ 'ಅಬ್ಬೆ' ಇದ್ದರೆ, ಪಶ್ಚಿಮಘಟ್ಟದಲ್ಲಿ ಸುತ್ತಾಡಿ ನೋಡಿ. ನಿಮಗೆ ಹತ್ತಾರು 'ಅಬ್ಬಿ'ಯರು ಕಾಣಸಿಗುತ್ತಾರೆ. 'ಅಬ್ಬಿ', 'ಒನಕೆ ಅಬ್ಬಿ', 'ಕುದುರೆ ಅಬ್ಬಿ','ಕೋಟಿ ಅಬ್ಬಿ', 'ಅಬ್ಬಿ ಮಠ'.....ಹೀಗೆ.

ಈ ಯಾವ 'ಅಬ್ಬಿ'ಯ ಮುಂದೆ ನಿಂತರೂ ನಿಮ್ಮನ್ನು
ನೀವು ಮರೆಯುವುದು ಖಂಡಿತ.

ಈ 'ಅಬ್ಬಿ'ಯರನ್ನು 'ಜಲಪಾತ'ಗಳೆಂದೂ ನಾವು ಕರೆಯುತ್ತೇವೆ. ಇಲ್ಲಿ ಈ 'ಅಬ್ಬಿ'ಯರ ಗಾತ್ರ, ವ್ಯಾಪ್ತಿ ದೊಡ್ಡದಾಗಿರುತ್ತದೆ ಅಷ್ಟೆ.

'ಅಬ್ಬಿ'ಯ ಹರವು ವಿಸ್ತಾರಗೊಂಡು, ನೆಲದ ಮೇಲೆ ಹರಿಯುತ್ತಾ ಸಾಗಿದರೆ 'ತೋಡು', 'ಹಳ್ಳ', 'ನದಿ' ಸೃಷ್ಟಿಯಾಗುತ್ತದೆ. ಒಂದೇ ಕಡೆಯಲ್ಲಿ ವಿಶಾಲವಾಗಿ ನಿಂತರೆ 'ಕೆರೆ', 'ಜಲಾಶಯ' ಆಗುತ್ತದೆ. 'ನದಿ'ಗೆ ಮನುಷ್ಯನೇ ಅಡ್ಡಗಟ್ಟೆ ಹಾಕಿದರೆ ಅದು 'ಅಣೆಕಟ್ಟು' 'ಡ್ಯಾಂ' ಎಂಬ ಹೆಸರು ಪಡೆದುಕೊಳ್ಳುತ್ತದೆ.

ಜಲಾಶಯ ಬೃಹತ್ ಗಾತ್ರದ್ದಾಗಿ ಅಲೆಗಳ ಜೊತೆಗೆ ಭೋರ್ಗರೆಯತೊಡಗಿದರೆ ಅದೇ 'ಸಮುದ್ರ ಇಲ್ಲವೇ 'ಸಾಗರ'ವಾಗುತ್ತದೆ. ಹಾಂ! ಸಾಗರಕ್ಕೆ 'ಅಬ್ಧಿ' (ಅಬ್ಬಿಗೆ ಬಹಳ ಹತ್ತಿರದ ಶಬ್ಧ) ಎಂದೇ ಕರೆಯುತ್ತೇವಲ್ಲ!!

ಜಗತ್ತಿನ ಜೀವಸೆಲೆಯಾದ 'ಅಬ್ಬಿ'ಯ ವಿಶ್ವರೂಪ ನೋಡಿ - ಎಂತಹವರಾದರೂ ಅಚ್ಚರಿ ಪಡಲೇಬೇಕು.

ಪುಟ್ಟ 'ಒರತೆ'ಯ ರೂಪದಲ್ಲಿ ಹುಟ್ಟಿ, ವಿವಿಧ ರೂಪ ಪಡೆಯುತ್ತಾ ಸಾಗುವ ಭೂಮಿಯ ಈ ಜೀವ ದ್ರವ್ಯ 'ಜಲ'ದ ವಿವಿಧ ರೂಪಗಳನ್ನು ನೋಡಬೇಕೆಂದರೆ ನಿಸರ್ಗದ ಮಡಿಲಲ್ಲಿ ಸುತ್ತಾಡಬೇಕು. ಅವುಗಳ ಸೊಬಗನ್ನು ಕಂಡು ಆಸ್ವಾದಿಸಬೇಕು ಎಂದರೆ ನಮ್ಮ ಒಳಗಣ್ಣನ್ನು ತೆರೆಯಬೇಕು.

ಹೀಗೆ ಒಳಗಣ್ಣು ತೆರೆದಾಗ ಪ್ರಕಟವಾದ 'ಅಬ್ಬಿ'ಯ ವಿಶ್ವರೂಪ ದರ್ಶನವನ್ನು ಎಲ್ಲಾದರೂ ಒಂದೇ ಕಡೆ ನೋಡಬೇಕೆಂದು ನಿಮಗೆ ಅನ್ನಿಸಿದರೆ ಸೀದಾ ಕೇಶವ ವಿಟ್ಲ ಅವರ ಬಳಿಗೆ ಹೋಗಿ. ಅವರ ಬಳಿ ಇರುವ ಛಾಯಾಚಿತ್ರಗಳ ಆಲ್ಬಮ್ ತೆರೆದರೆ, ನೀರಿನ ವಿಶ್ವರೂಪ ದರ್ಶನವಾಗುತ್ತದೆ.

ಜಲಪಾತ ಅಂದೊಡನೆ ಜೋಗ ಜಲಪಾತ, ಗೋಕಾಕ, ಗಗನಚುಕ್ಕಿ ಭರಚುಕ್ಕಿ ಮುಂತಾದ ಕೆಲವೇ ಕೆಲವು ಜಲಧಾರೆಗಳ ಚಿತ್ರಗಳನ್ನು ಮನಸ್ಸಿಗೆ ತಂದುಕೊಳ್ಳುವ ನಮಗೆ, ಕೆರೆ, ನದಿ ಎಂದರೂ ನೆನಪಾಗುವುದು ಕೆಲವು ಪ್ರಸಿದ್ಧ ಕೆರೆಗಳು, ನದಿಗಳ ಹರಿವಿನ ಸೊಬಗು ಮಾತ್ರ.

ಕೇಶವ ವಿಟ್ಲ ಅವರ ಛಾಯಾಚಿತ್ರ ಲೋಕಕ್ಕೆ ನುಸುಳಿದರೆ... ಅಬ್ಬಿ, ಒನಕೆ ಅಬ್ಬಿ, ಕುದುರೆ ಅಬ್ಬಿ, ಕೋಟಿ ಅಬ್ಬಿ, ಅಬ್ಬಿ ಮಠ, ಮಾಣಿಕ್ಯಧಾರಾ, ಬೆಣ್ಣೆ, ಜೋಡುಪಲ, ಗೊಡಚಿನ ಮಲ್ಕಿ, ಶಿರ್ಲೆ, ಸಿರಿಮನೆ, ಅಪ್ಸರಕೊಂಡ ಮುಂತಾದ ಇನ್ನೆಷ್ಟೋ ಅರಿವಿನಲ್ಲೇ ಇರದ ಜಲಪಾತಗಳ ದರ್ಶನವಾಗುತ್ತದೆ.

ಹೊನ್ನಮ್ಮನ ಹಳ್ಳ, ಗಾಳಿಕೆರೆ (ಬಾಬಾಬುಡನ್ ಗಿರಿ), ಅಯ್ಯನಕೆರೆ, ಕವಡಿಕೆರೆ, ಕಾರ್ಗಲ್ ವಾಟರ್ ಬೆಡ್, ಹಿಡ್ಕಲ್ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ವಾಣಿವಿಲಾಸ ಸಾಗರ, ಕೃಷ್ಣರಾಜ ಸಾಗರ, ಕಾಳಿನದಿ, ನೇತ್ರಾವತಿ ನದಿ, ಮಲಪ್ರಭಾ ನದಿಗಳ ಸೌಂದರ್ಯ ಕಣ್ಣಿನ ಮುಂದೆ ಪ್ರತ್ಯಕ್ಷವಾಗುತ್ತದೆ.

ಕರ್ನಾಟಕದ ಏಕೈಕ ಕರಾವಳಿಯಾದ ಪಶ್ಚಿಮದ ಅರಬ್ಬಿ ಸಮುದ್ರ ದಂಡೆಯ ಉದ್ದಕ್ಕೂ ಇರುವ ಸುಂದರ ತಾಣಗಳಾದ ಓಂ ಬೀಚ್ ಗೋಕರ್ಣ, ಗೋಕರ್ಣ ಬೀಚ್, ಸುರತ್ಕಲ್ ಬೀಚ್, ಕುಡ್ಲೆ ಬೀಚ್, ಕಾರವಾರ ಬೀಚ್, ಉಳ್ಳಾಲ ಬೀಚ್, ಬಾಡ ಬೀಚ್ (ಕುಮಟಾ), ಪಣಂಬೂರು ಬೀಚ್, ತಿಲ್ಮತಿ ಬೀಚ್, ಮುರುಡೇಶ್ವರ ಬೀಚ್, ಸೋಮೇಶ್ವರ ಬೀಚ್, ಬೇಂಗ್ರೆ (ಮಂಗಳೂರು) ಇತ್ಯಾದಿಗಳೆಲ್ಲ ಕಣ್ಮನ ಸೆಳೆಯುತ್ತವೆ.

ಅಷ್ಟೇ ಅಲ್ಲ, ನಮ್ಮ ಚಾರಿತ್ರಿಕ ಪುಣ್ಯಕ್ಷೇತ್ರಗಳು ಕೂಡಾ ನೀರಿನ ಹಿನ್ನೆಲೆಯಲ್ಲೇ ತಮ್ಮ ಸೊಬಗನ್ನು ಅದೆಷ್ಟು ಹೆಚ್ಚಿಸಿಕೊಂಡಿವೆ ಎಂಬುದರ ಅರಿವಾಗುತ್ತದೆ. ಕೂಡಲ ಸಂಗಮ, ಭಾಗಮಂಡಲ, ಸಹಸ್ರಲಿಂಗ ಮತ್ತಿತರ ಕ್ಷೇತ್ರಗಳ ಆಕರ್ಷಣೆಯ ಹಿಂದಿನ 'ಜಲ'ದ ವಿರಾಟ್ ದರ್ಶನವಾಗುತ್ತದೆ.

ಕಂಬಳದಂತಹ ಸುಂದರ ಸಾಹಸಿ ಜಲಕ್ರೀಡೆಗಳ ಪರಿಚಯವೂ ಆಗುತ್ತದೆ.

ಕೇಶವ ವಿಟ್ಲ ಅವರ 'ಕ್ಯಾಮರಾ' ಚಳಕ ಇಷ್ಟಕ್ಕೇ ನಿಲ್ಲುವುದಿಲ್ಲ. ಕರ್ನಾಟಕದ ಸುಂದರ ನಿಸರ್ಗ ತಾಣಗಳ ಸೊಬಗಿನ ಸಾಕಾರವನ್ನೂ ಅದು ಮಾಡಿದೆ. ಇಂತಹ ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳು ಈಗ ವಿಟ್ಲ 'ಬತ್ತಳಿಕೆ'ಯಲ್ಲಿ ಇವೆ.!

24 ವರ್ಷಗಳ ಹಿಂದೆ, 1984ರಲ್ಲಿ ನಾನು ಮಂಗಳೂರಿನಲ್ಲಿ 'ಮುಂಗಾರು' ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪತ್ರಿಕೆ ಸೇರಿ ನನ್ನೊಂದಿಗೆ ಮಂಗಳೂರಿನ ಬೀದಿಗಳು, ಗಲ್ಲಿಗಳನ್ನು ಅಡ್ಡಾಡಿದ್ದ ಕೇಶವ ವಿಟ್ಲ, ನಂತರ 'ಕನ್ನಡ ಪ್ರಭ'ದಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ ತಮ್ಮ ಕ್ಯಾಮರಾದ ಒಳಗಣ್ಣಿನ ಹೊಳಪು ಹೆಚ್ಚಿಸಿಕೊಂಡವರು.

ಮುಂದೆ ಹವ್ಯಾಸಿ ಛಾಯಾಗ್ರಾಹಕರಾಗಿ 'ಉದಯವಾಣಿ' 'ರೂಪತಾರಾ'ಗಳಿಗೆ ಕಾಣಿಕೆ ಸಲ್ಲಿಸಿದ ಅವರು, ಈಗ 'ಟೆಲಿಗ್ರಾಫ್' ಪತ್ರಿಕೆಗೆ ಹವ್ಯಾಸಿ ಛಾಯಾಗ್ರಾಹಕ. ವಿಟ್ಲ ಅವರ ಛಾಯಾಚಿತ್ರ ಪ್ರಪಂಚಕ್ಕೆ ಇಣುಕಿದರೆ ಅವರು ನಿಸರ್ಗದ ಮಡಿಲನ್ನು ನೋಡುತ್ತಾ ಬೆಳೆದ ಪರಿ ಅಚ್ಚರಿ ಮೂಡಿಸುತ್ತದೆ.

ಖುಷಿಯ ಸಂಗತಿ ಎಂದರೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕೇಶವ ವಿಟ್ಲ ಅವರ ಸಾಹಸವನ್ನು ಗುರುತಿಸಿದೆ. ಬೆಂಗಳೂರಿನ ವೆಂಕಟಪ್ಪ ಕಲಾಗ್ಯಾಲರಿಯಲ್ಲಿ ಅದು ಇತ್ತೀಚೆಗೆ ವಿಟ್ಲ ಅವರ 'ಜಲ ವಿನ್ಯಾಸ'ಗಳ ಸುಂದರ ಪ್ರದರ್ಶನವನ್ನು ಏರ್ಪಡಿಸಿತ್ತು. ಭಾರತದ ಕ್ರಿಕೆಟ್ ತಂಡದ ನಾಯಕ, ವಿಶ್ವವಿಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬಳೆಯಂತಹವರೂ ಸೇರಿದಂತೆ ಸಹಸ್ರಾರು ಮಂದಿ ಈ ಪ್ರದರ್ಶನ ವೀಕ್ಷಿಸಿ ಕರ್ನಾಟಕದ ನಿಸರ್ಗ ಸೊಬಗನ್ನು ಕಣ್ತುಂಬಿಕೊಂಡರು..

ಕೇಶವ ವಿಟ್ಲ ಅವರ ನೀರಿನ ಸೊಬಗಿನ ಚಿತ್ರಗಳ ಪ್ರದರ್ಶನ ಮಾಡಿದರಷ್ಟೇ ಸಾಕೆ ಎಂಬ ಪ್ರಶ್ನೆ ನಮ್ಮನ್ನು 'ಕಾಡು'ತ್ತದೆ. ಏಕೆಂದರೆ 'ಕಾಡು'ನಾಶದಿಂದ ಇಂತಹ ಸುಂದರ ಅಬ್ಬಿ, ಜಲಪಾತಗಳು ಕಣ್ಮರೆಯಾಗುತ್ತಿವೆ. ನದಿಗಳು ಒಣಗುತ್ತಿವೆ. ಕಲುಷಿತ ನೀರು ಮಿಶ್ರಗೊಂಡು ನದಿ, ತೊರೆಗಳೂ ಸೊಬಗನ್ನು ಕಳೆದುಕೊಳ್ಳುತ್ತಿವೆ.

ಕಾಡುನಾಶಕ್ಕೆ ಅಂಕುಶ, ಜಲ ಮಾಲಿನ್ಯಕ್ಕೆ ಕಡಿವಾಣ ಹಾಕುವುದರ ಜೊತೆಗೆ ನೀರಿನ ಮೂಲವಾದ 'ಒರತೆ' ಹೆಚ್ಚುವಂತಾಗಲು ಎಲ್ಲೆಡೆಯಲ್ಲಿ ನೀರಿಂಗಿಸುವ ಭಗೀರಥ ಪ್ರಯತ್ನಕ್ಕೆ ಸಕಲರೂ ಕೈಜೋಡಿಸದೇ ಇದ್ದರೆ ಈ ಸೊಬಗನ್ನು ಮುಂದಿನ ತಲೆಮಾರಿಗೆ ಉಳಿಸಿಕೊಡುವುದು ಕಷ್ಟವಾಗಬಹುದು.

ಕೇಶವ ವಿಟ್ಲ ಅವರಿಗೆ ಅಭಿನಂದನೆ ಹೇಳುವುದರೊಂದಿಗೆ, 'ಅಬ್ಬಿ ಅಬ್ಬೆ'ಯ ರಕ್ಷಣೆಗೆ ಸಿದ್ಧರಾಗೋಣವೇ?

Wednesday, March 5, 2008

When your telephone rings till you fed up...! (Consumer Awareness)

Think, what will happen if the company, from which you purchase a telephone, advertises the same number which has been allotted to you as the 'Consumer Service Number'. You will fed up with the public calls related to telephone problems and services! Does not worry Consumer Protection Act will come to your help in such situation. PARYAYA presents an interesting case came before the Karnataka State Consumer Court Bangalore.

'ಕಿರಿಕಿರಿ'ಯಾದ ಕಂಪೆನಿಯ ಜಾಹೀರಾತು...!

ಗ್ರಾಹಕನಿಗೆ ನೀಡಿದ ದೂರವಾಣಿ ಸಂಖ್ಯೆಯನ್ನೇ 'ಗ್ರಾಹಕ ಸೇವಾ ಸಂಖ್ಯೆ' ಎಂಬುದಾಗಿ ಜಾಹೀರಾತು ನೀಡಿದ್ದು ಕಂಪೆನಿಯ ಸೇವಾಲೋಪ ಎಂದು ನ್ಯಾಯಾಲಯ ಹೇಳಿತು.

ನೆತ್ರಕೆರೆ ಉದಯಶಂಕರ

ದೂರವಾಣಿ ಕಂಪೆನಿಯೊಂದು ನಿಮಗೆ ದೂರವಾಣಿಯೊಂದನ್ನು ನೀಡುತ್ತದೆ. ಆದರೆ ನಂತರ ನಿಮಗೆ ನೀಡಿದ ದೂರವಾಣಿ ಸಂಖ್ಯೆಯನ್ನೇ 'ಗ್ರಾಹಕ ಸೇವಾ ಸಂಖ್ಯೆ' ಎಂಬುದಾಗಿ ಜಾಹೀರಾತು ನೀಡುತ್ತದೆ ಎಂದಿಟ್ಟುಕೊಳ್ಳಿ. ನಿಮಗೋ ಕರೆಗಳ ಸುರಿಮಳೆ ಆರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಆಗುವ ಕಿರಿಕಿರಿ ಸಹನಾತೀತ. ದೂರವಾಣಿ ಕಂಪೆನಿಯ ಇಂತಹ ವರ್ತನೆ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪರಿಹಾರ ಪಡೆಯಬಹುದೇ?

ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಗ್ರಾಹಕನಿಗೆ ಪರಿಹಾರ ಒದಗಿಸಿದೆ.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಮಿಷನ್ ರಸ್ತೆಯ ಜಿ. ಬ್ರಹ್ಮಕುಲಂ ಅವರ ಪುತ್ರ ಪಾವುಲ್ ಜಿ. ಬ್ರಹ್ಮಕುಲಂ. ಪ್ರತಿವಾದಿ: ಮೆ. ಸ್ಪೈಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್, ಎಂಬೆಸಿ ಚೌಕ, ಇನ್ ಫೆಂಟ್ರಿ ರಸ್ತೆ, ಬೆಂಗಳೂರು.

ಅರ್ಜಿದಾರರು 1997ರಲ್ಲಿ ಮೊಬೈಲ್ ದೂರವಾಣಿಗಾಗಿ ಅರ್ಜಿ ಸಲ್ಲಿಸಿದಾಗ ಪ್ರತಿವಾದಿ ಸ್ಪೈಸ್ ಕಂಪೆನಿಯು ಮೊಬೈಲ್ ಗೋಲ್ಡನ್ (ಸಂಖ್ಯೆ 9844054321) ಮಂಜೂರು ಮಾಡಿತು.ನಂತರ 2002ರಲ್ಲಿ ಸ್ಪೈಸ್ ಕಂಪೆನಿಯು ಜಾಹೀರಾತು ಒಂದರಲ್ಲಿ ಮೊಬೈಲ್ ಸಂಖ್ಯೆ 9844054321 'ಗ್ರಾಹಕ ಸೇವಾ ಸಂಖ್ಯೆ' ಎಂಬುದಾಗಿಯೂ, ಗ್ರಾಹಕರು ತಮ್ಮ ದೂರುಗಳ ಪರಿಹಾರಕ್ಕಾಗಿ/ ಸೇವೆಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದೂ ಪ್ರಕಟಿಸಿತು. ಈ ಜಾಹೀರಾತಿನ ಪರಿಣಾಮವಾಗಿ ಅರ್ಜಿದಾರ ಬ್ರಹ್ಮಕುಲಂ ಅವರಿಗೆ ಅಸಂಖ್ಯಾತ ದೂರವಾಣಿ ಕರೆಗಳು ಬಂದವು.

ಆ ದಿನಗಳಲ್ಲಿ ಒಳಬರುವ ಕರೆಗಳು ಉಚಿತವಾಗಿರಲಿಲ್ಲ, ಶುಲ್ಕ ವಿಧಿಸಲಾಗುತ್ತಿತ್ತು. ಹೀಗಾಗಿ ಬ್ರಹ್ಮಕುಲಂ ಅವರು 31,500 ರೂಪಾಯಿಗಳನ್ನು ಕಂಪೆನಿಗೆ ಪಾವತಿ ಮಾಡಬೇಕಾಯಿತು.

ಇದರ ವಿರುದ್ಧ ಬ್ರಹ್ಮಕುಲಂ ಅವರು ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು. ಆದರೆ ಪ್ರತಿವಾದಿ ಸ್ಪೈಸ್ ಕಂಪೆನಿ ಆರೋಪವನ್ನು ನಿರಾಕರಿಸಿತು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿತು.

ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರ ಬ್ರಹ್ಮಕುಲಂ ಅವರು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ರಮಾ ಅನಂತ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಒ. ಮಹೇಶ ಹಾಗೂ ಪ್ರತಿವಾದಿ ಪರ ವಕೀಲರಾದ ಮೆ. ಎಂ.ವಿ. ಕಿಣಿ ಅಂಡ್ ಕಂಪೆನಿಯ ಅಹವಾಲುಗಳನ್ನು ಆಲಿಸಿ ದಾಖಲೆಗಳನ್ನು ಪರಿಶೀಲಿಸಿತು.

ಪ್ರತಿವಾದಿಯು ರಾಜ್ಯ ಗ್ರಾಹಕ ನ್ಯಾಯಾಲಯದಲ್ಲೂ ಆಪಾದನೆಯನ್ನು ನಿರಾಕರಿಸಿದರು. ಅರ್ಜಿದಾರರು ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಕೆಲವು ದಾಖಲೆಗಳನ್ನು ಹಾಜರು ಪಡಿಸಿದ್ದರು. ಆ ದಾಖಲೆಗಳು ಗ್ರಾಹಕರಿಗೆ ನೀಡಲಾಗಿದ್ದ ಮೊಬೈಲ್ ದೂರವಾಣಿಯನ್ನು (ನಂಬರ್ 9844054321) ಕಂಪೆನಿಯು ಗ್ರಾಹಕ ಸೇವಾ ಸಂಖ್ಯೆ ಎಂಬುದಾಗಿ ನಮೂದಿಸಿದ್ದುದನ್ನು ರಾಜ್ಯ ಗ್ರಾಹಕ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.

ಇಂತಹ ಸಂದರ್ಭದಲ್ಲಿ ದೂರು ನೀಡಬಯಸುವವರು, ಕಂಪೆನಿಯಿಂದ ಏನಾದರೂ ಸೇವೆ ಬಯಸುವವರು ಈ ಸಂಖ್ಯೆಯನ್ನು ಸಂಪರ್ಕಿಸಬೇಕಾಗುತ್ತದೆ. ಕಂಪೆನಿಯ ಇಂತಹ ವರ್ತನೆ ದೂರುಗಳಿಗೆ ಸಂಬಂಧಿಸಿದಂತೆ 'ಸೇವಾ ನ್ಯೂನತೆ' ಆಗುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟ ರಾಜ್ಯ ಗ್ರಾಹಕ ನ್ಯಾಯಾಲಯ, ದೂರನ್ನು ವಜಾ ಮಾಡಿದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದು ಹೇಳಿತು.

ಅರ್ಜಿದಾರರಿಗೆ ಮಂಜೂರು ಮಾಡಲಾಗಿದ್ದ ದೂರವಾಣಿ ಸಂಖ್ಯೆಯನ್ನೇ 'ಗ್ರಾಹಕ ಸೇವಾ ಸಂಖ್ಯೆ' ಎಂಬುದಾಗಿ ಪ್ರತಿವಾದಿ ಸಂಸ್ಥೆಯು ಜಾಹೀರಾತು ನೀಡಿದ್ದರ ಪರಿಣಾಮವಾಗಿ ಅರ್ಜಿದಾರರು 31,500 ರೂಪಾಯಿ ನಷ್ಟ ಅನುಭವಿಸಬೇಕಾಯಿತು. ಪ್ರತಿವಾದಿಯ ತಪ್ಪಿನಿಂದ ಅರ್ಜಿದಾರರಿಗೆ ಈ ನಷ್ಟ ಸಂಭವಿಸಿದ ಕಾರಣ ಅಷ್ಟರ ಮಟ್ಟಿಗೆ ಅರ್ಜಿದಾರರಿಗೆ ಪರಿಹಾರ ಒದಗಿಸಬೇಕಾಗುತ್ತದೆ ಎಂದೂ ರಾಜ್ಯ ಗ್ರಾಹಕ ನ್ಯಾಯಾಲಯ ಹೇಳಿತು.

ತನಗೆ ಸಂಬಂಧಪಡದ ಕರೆಗಳ ಕಿರಿಕಿರಿಯಿಂದ ಅರ್ಜಿದಾರರಿಗೆ ಮಾನಸಿಕವಾಗಿಯೂ ಸಾಕಷ್ಟು ತೊಂದರೆ ಆಗಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ ನೀಡಿದ ತೀರ್ಪನ್ನು ತಳ್ಳಿಹಾಕಲಾಗಿದೆ ಎಂದು ಹೇಳಿದ ರಾಜ್ಯ ಗ್ರಾಹಕ ನ್ಯಾಯಾಲಯ ಎರಡು ತಿಂಗಳುಗಳ ಒಳಗಾಗಿ 40,000 ರೂಪಾಯಿಗಳ ಪರಿಹಾರವನ್ನು ಅರ್ಜಿದಾರರಿಗೆ ನೀಡಬೇಕು, ತಪ್ಪಿದಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ದಿನಾಂಕದಿಂದ 40,000 ರೂಪಾಯಿಗಳನ್ನು ಪಾವತಿ ಮಾಡುವವರೆಗೆ ಶೇಕಡಾ 6ರಷ್ಟು ವಾರ್ಷಿಕ ಬಡ್ಡಿಯನ್ನೂ ತೆರಬೇಕು ಎಂದು ಪ್ರತಿವಾದಿ ಸ್ಪೈಸ್ ಕಂಪೆನಿಗೆ ಆದೇಶ ನೀಡಿತು.

Tuesday, March 4, 2008

Monday, March 3, 2008

Sunday, March 2, 2008

Saturday, March 1, 2008

Sankula invites you too!

Here is an invitation received by PARYAYA from Mr. Ganadhalu Srikanta. On 2nd March 2008 Sunday one function to felicitate Mr. Nagesh Hegade, Dr. Ullas Karanta and Dr. H.R. Krishna Murthy has been organised by 'Sankula' at R.V. Teachers College, Jayanagara 1st Block, Bangalore. Shree Padre and Sanjaya Gubbi also participate in the function. This is the good time for get together.

ಆತ್ಮೀಯರೆ,

ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಪತ್ರಿಕೋದ್ಯಮ ಮೇಷ್ಟ್ರು, ಹಿತೈಷಿಗಳು, ಹಿರಿಯರಾದ ನಾಗೇಶ ಹೆಗಡೆ, ವನ್ಯಜೀವಿ ಸಂರಕ್ಷರಣೆಯಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ.ಉಲ್ಲಾಸ ಕಾರಂತ ಹಾಗೂ ಪರಿಸರ ಸಂರಕ್ಷಣೆಗಾಗಿ ದುಡಿದಿರುವ ಡಾ.ಎಚ್.ಆರ್.ಕೃಷ್ಣಮೂರ್ತಿಯವರು 60 ವಸಂತಗಳನ್ನು ಪೂರೈಸಿದ್ದಾರೆ. ಈ ಶುಭ ಸಂದರ್ಭದಲ್ಲಿ 'ಸಂಕುಲ' ತಂಡ ಅವರನ್ನು ಅಭಿನಂದಿಸಲು ತೀರ್ಮಾನಿಸಿದೆ.

ಮಾರ್ಚ್ 2, 2008ರಂದು ಭಾನುವಾರ, ಜಯನಗರ 1ನೇ ಬ್ಲಾಕ್ ನಲ್ಲಿರುವ ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಮಾಧ್ಯಮ ಕ್ಷೇತ್ರದ ಗೆಳೆಯರು, ಪರಿಸರ, ವನ್ಯಜೀವಿ ವಿಷಯದ ಬಗ್ಗೆ ಪ್ರೀತಿಯಿರುವ ಅನೇಕರು ಆ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಆ ದಿನ ಕೇವಲ ಅಭಿನಂದನಾ ಸಮಾರಂಭ ಮಾತ್ರವಲ್ಲ, 'ಪುಸ್ತಕದ ಹಬ್ಬ'ದ ದಿನವೂ ಹೌದು.

ಏಕೆಂದರೆ ಸಮಾರಂಭದಲ್ಲಿ ಈ ಮೂವರು ಮಹನೀಯರು ಬರೆದಿರುವ ಪುಸ್ತಕಗಳು ಬಿಡುಗಡೆಯಾಗುತ್ತವೆ. ಜೊತೆಗೆ ಇವರ ಬಗ್ಗೆ ವಿಷಯ ಪರಿಣತರು ಬರೆದಿರುವ ಲೇಖನಗಳ ಸಂಗ್ರಹದ ಪುಸ್ತಕ 'ಸಂಕುಲ' ಕೂಡ ಬಿಡುಗಡೆಯಾಗುತ್ತದೆ. ಇದು ಅಭಿನಂದನಾ ಗ್ರಂಥವೂ ಹೌದು. ಈ ಹೊಸ ಪುಸ್ತಕಗಳ ಜೊತೆಗೆ ನವಕರ್ನಾಟಕ, ಅಂಕಿತ, ವಸಂತ ಪ್ರಕಾಶನದ ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟವಿರುತ್ತದೆ.

ಪುಸ್ತಕದ ಹಬ್ಬದ ಜೊತೆಗೆ ಒಂದಷ್ಟು ಮಸ್ತಕವನ್ನು ಮಸೆಯುವ ಸಲುವಾಗಿ ಪುಟ್ಟದೊಂದು ವಿಚಾರ ಮಂಡನೆಯೂ ಇದೆ. ಅದು ಭವಿಷ್ಯದಲ್ಲಿ ನೆಲ-ಜಲ ಸಂರಕ್ಷಣೆಗೆ ನಾವೇನು ಮಾಡಬೇಕೆಂಬ ವಿಷಯ ಕುರಿತು ಸ್ಲೈಡ್ ಷೋ ಮತ್ತು ಉಪನ್ಯಾಸ. ಜೊತೆಗೆ ಸಂವಾದವೂ ಇದೆ.

ಖ್ಯಾತ ಜಲಪತ್ರಕರ್ತ 'ಶ್ರೀ' ಪಡ್ರೆಯವರು ಉಪನ್ಯಾಸದ ರೂವಾರಿಗಳು. ಪರಿಸರ ತಜ್ಞ ಸಂಜಯ್ ಗುಬ್ಬಿ 'ಭವಿಷ್ಯದಲ್ಲಿ ಪರಿಸರ ಸಂರಕ್ಷಣೆ' ಕುರಿತು ಮಾತನಾಡುತ್ತಾರೆ. ಇಷ್ಟೆಲ್ಲ ಗಂಭೀರ ಕಾರ್ಯಕ್ರಮಗಳ ಮಧ್ಯೆ ಪುಟ್ಟ ಮಕ್ಕಳು ಪರಿಸರ ಗೀತೆಗಳನ್ನು ಹಾಡುತ್ತಾ, ಕಾರ್ಯಕ್ರಮಕ್ಕೆ ಜೀವ ತುಂಬುತ್ತಾರೆ. ಇಂಥ ಅಪರೂಪದ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ.

ಕಾರ್ಯಕ್ರಮಕ್ಕೆ ಬರ್ತೀರಲ್ಲಾ ?

ಹಾಂ ! ಇನ್ನೊಂದು ಮುಖ್ಯವಾದ ವಿಷಯ ಹೇಳೋದೇ ಮರೆತಿದ್ದೆ. ಈ ಕಾರ್ಯಕ್ರಮದಲ್ಲಿ 'ಪಕೃತಿಯ ಸುಂದರ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಕೋಲಾರದ ಡಿ.ಜಿ.ಮಲ್ಲಿಕಾರ್ಜುನ ಮತ್ತು ಅವರ ಗೆಳೆಯ ಶಿವು ಅವರು ಆ ಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ. ಪ್ರಕೃತಿಯ ಅಪರೂಪದ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಇದೊಂದು ಸದಾವಕಾಶ. ಬನ್ನಿ ನಿಮಗಾಗಿ ಆರ್.ವಿ.ಟೀಚರ್ಸ್ ಗೇಟ್ ಬಳಿ ಕಾದಿರುತ್ತೇನೆ.

ಅಂದ ಹಾಗೆ ಈ ಪತ್ರದ ಜೊತೆ ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದೇನೆ.

ಧನ್ಯವಾದಗಳು

ವಿಶ್ವಾಸದಿಂದ

ಗಾಣಧಾಳು ಶ್ರೀಕಂಠ

CHUCHHU ಚುಚ್ಚು..

CHUCHHU ಚುಚ್ಚು..

by : Prakash Shetty
cour'tesy: Vartha Bharathi

Advertisement