Sunday, August 31, 2008

Mobile Dance..! ಜಂಗಮ ನೃತ್ಯ..!

Mobile Dance..!

One fine morning, mobile set on the dining table started to dance. Madhu Bhat Purlupady, SSLC student of Viveka Balamandira Yalahanka, Bangalore and Anup Krishna Bhat Nethrakere, 2nd PUC student of Diana Pre University College, Jakkur, Bangalore thought of creating video on this mobile dance and here is their video creation.
They have also created a blog:
http://www.madhubhat.blogspot.com/







ಜಂಗಮ ನೃತ್ಯ..!

ಒಂದು ಸುಂದರ ಬೆಳಗಿನ ವೇಳೆಯಲ್ಲಿ ಊಟದ ಮೇಜಿನ ಮೇಲಿದ್ದ ಜಂಗಮ ರಿಂಗಣಿಸುತ್ತಿದ್ದಂತೆಯೇ ಕುಣಿಯತೊಡಗಿತು. ಬೆಂಗಳೂರು ಯಲಹಂಕದ ವಿವೇಕ ಬಾಲಮಂದಿರದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಧು ಭಟ್ ಪೂರ್ಲುಪಾಡಿ ಮತ್ತು ಬೆಂಗಳೂರು ಜಕ್ಕೂರಿನ ಡಯಾನಾ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನುಪ ಕೃಷ್ಣ ಭಟ್ ನೆತ್ರಕೆರೆ 'ಮಂಡೆ'ಯಲ್ಲಿ 'ಜಂಗಮ ನೃತ್ಯ' ವಿಡಿಯೋ ತಯಾರಿಯ ಕನಸು ಮೊಳಕೆ ಒಡೆಯಿತು. ಅದರ ಫಲಿತಾಂಶವೇ ಈ ಪುಟ್ಟ ವಿಡಿಯೋ 'ಜಂಗಮ ನೃತ್ಯ' ಇಲ್ಲವೇ 'ಮೊಬೈಲ್ ಡ್ಯಾನ್ಸ್'..

ಇಂದಿನ ಇತಿಹಾಸ History Today ಆಗಸ್ಟ್ 31

ಇಂದಿನ ಇತಿಹಾಸ

ಆಗಸ್ಟ್ 31

ರಾಮೇಶ್ವರದ ಬಳಿ ಸಮುದ್ರದಲ್ಲಿನ ಐತಿಹಾಸಿಕ ರಾಮರ್ ಸೇತುವೆಯನ್ನು (ರಾಮಸೇತು) ಒಡೆಯದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಕಡಲುಗಾಲುವೆ ನಿರ್ಮಾಣಕ್ಕಾಗಿ ಭಾರತ ಹಾಗೂ ಶ್ರೀಲಂಕಾ ಮಧ್ಯೆ ಸಮುದ್ರದ ಪಾಕ್ ಮತ್ತು ಮನ್ನಾರ್ ಜಲಸಂಧಿಯಲ್ಲಿ ಹೂಳೆತ್ತುವ ಕೆಲಸಕ್ಕೆ ಕೋರ್ಟ್ ಕೆಲವು ನಿರ್ಬಂಧ ಹೇರಿತು. ಇದರೊಂದಿಗೆ ಸೇತುಸಮುದ್ರಂ ಕಾಲುವೆ ಯೋಜನೆ ವಿವಾದ ಹೊಸ ತಿರುವು ಪಡೆದುಕೊಂಡಿತು.

2007: ರಾಮೇಶ್ವರದ ಬಳಿ ಸಮುದ್ರದಲ್ಲಿನ ಐತಿಹಾಸಿಕ ರಾಮರ್ ಸೇತುವೆಯನ್ನು (ರಾಮಸೇತು) ಒಡೆಯದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಕಡಲುಗಾಲುವೆ ನಿರ್ಮಾಣಕ್ಕಾಗಿ ಭಾರತ ಹಾಗೂ ಶ್ರೀಲಂಕಾ ಮಧ್ಯೆ ಸಮುದ್ರದ ಪಾಕ್ ಮತ್ತು ಮನ್ನಾರ್ ಜಲಸಂಧಿಯಲ್ಲಿ ಹೂಳೆತ್ತುವ ಕೆಲಸಕ್ಕೆ ಕೋರ್ಟ್ ಕೆಲವು ನಿರ್ಬಂಧ ಹೇರಿತು. ಇದರೊಂದಿಗೆ ಸೇತುಸಮುದ್ರಂ ಕಾಲುವೆ ಯೋಜನೆ ವಿವಾದ ಹೊಸ ತಿರುವು ಪಡೆದುಕೊಂಡಿತು. `ರಾಮಸೇತು'ಗೆ ಯಾವುದೇ ಅಪಾಯವಾಗದಂತೆ ಸೇತುಸಮುದ್ರಂ ಕಾಮಗಾರಿ ಮುಂದುವರಿಸಬಹುದು ಎಂದು ನ್ಯಾಯಮೂರ್ತಿ ಬಿ. ಎನ್. ಅಗರವಾಲ್ ನೇತೃತ್ವದ ನ್ಯಾಯಪೀಠ ಕೇಂದ್ರಕ್ಕೆ ಸೂಚಿಸಿತು. ವಿಚಾರಣೆ ವೇಳೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯಂ ಅವರು ಈ ಆದೇಶದ ಬಗ್ಗೆ ವಿವರಣೆ ಕೋರಿದಾಗ, `ರಾಮಸೇತುವಿಗೆ ಧಕ್ಕೆಯಾಗದ ರೀತಿಯಲ್ಲಿ ಹೂಳೆತ್ತುವ (ಡ್ರೆಜ್ಜಿಂಗ್) ಕೆಲಸವನ್ನು ನಡೆಸಬಹುದು. ಸೆಪ್ಟೆಂಬರ್ 14ರಂದು ನಡೆಯುವ ವಿಚಾರಣೆಯ ವೇಳೆಗೆ ಸರ್ಕಾರ ತನ್ನ ಹೇಳಿಕೆಯನ್ನು ದಾಖಲಿಸಬೇಕು' ಎಂದು ನ್ಯಾಯಪೀಠ ತಿಳಿಸಿತು. ಸೇತುಸಮುದ್ರಂ ಕಾಲುವೆ ಯೋಜನೆ ಜಾರಿ ಮಾಡುವಾಗ ಡೈನಮೈಟ್ ಸ್ಫೋಟ ಅಥವಾ ಇನ್ನಾವುದೇ ಕಾಮಗಾರಿಯಿಂದ 40 ಕಿ. ಮೀ. ಉದ್ದದ ರಾಮಸೇತುವಿಗೆ (ಆಡಮ್ ಸೇತುವೆ) ಯಾವುದೇ ರೀತಿಯ ಧಕ್ಕೆ ಉಂಟು ಮಾಡದಂತೆ ಕೇಂದ್ರ ಸರ್ಕಾರ ಮತ್ತು ಸೇತುಸಮುದ್ರಂ ಕಾರ್ಪೊರೇಷನ್ನಿಗೆ ನಿರ್ದೇಶನ ನೀಡುವಂತೆ ಕೇಂದ್ರದ ಮಾಜಿ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಅರ್ಜಿಯಲ್ಲಿ ಕೋರಿದ್ದರು. ಆಗಸ್ಟ್ 26ರಂದು ರಾಮೇಶ್ವರಕ್ಕೆ ಭೇಟಿ ನೀಡಿದ್ದಾಗ ಆರ್ ಡಿ ಎಕ್ಸ್ ತುಂಬಿ ಸ್ಫೋಟಿಸಲು ರಾಮಸೇತುಗೆ ರಂಧ್ರ ಕೊರೆಯಲಾಗುತ್ತಿತ್ತು. ಒಮ್ಮೆ ಈ ಸೇತುವೆಯನ್ನು ಹಾಳು ಮಾಡಿದರೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗುವುದರ ಜತೆಗೆ ಅಸಂಖ್ಯಾತ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸಿದಂತಾಗುತ್ತದೆ ಎಂದು ಸ್ವಾಮಿ ಅವರು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

2007: ಹನ್ನೊಂದು ವರ್ಷಗಳ ಹಿಂದೆ ಸಿವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದು ಸಾಬೀತಾಗಿರುವುದರಿಂದ ಆರೋಪಿ ಆರ್ ಜೆಡಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಗೆ ಹತ್ತು ವರ್ಷಗಳ ಕಠಿಣ ಸಜೆ ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಯಿತು. ಭಾರತೀಯ ದಂಡ ಸಂಹಿತೆಯ 307 ಕಲಂನನ್ವಯ ಶಹಾಬ್ದುದೀನ್ ಅವರನ್ನು ತಪ್ಪಿತಸ್ಥರೆಂದು ಸಿವಾನಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಜ್ಞಾನೇಶ್ವರ ಪ್ರಸಾದ್ ಶ್ರೀವಾಸ್ತವ್ ತೀರ್ಪು ನೀಡಿದರು. ಇದಲ್ಲದೆ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ 353ನೇ ಕಲಂ ಪ್ರಕಾರ ಎರಡು ವರ್ಷ ಶಿಕ್ಷೆ, 500 ರೂಪಾಯಿ ದಂಡ ಹಾಗೂ ಶಸ್ತ್ರಾಸ್ತ್ರ ಕಾಯಿದೆಯಡಿ ಏಳು ವರ್ಷ ಶಿಕ್ಷೆ ಮತ್ತು ಒಂದು ಸಾವಿರ ರೂಪಾಯಿ ದಂಡವನ್ನು ಸಹ ಶಹಾಬ್ದುದೀನ್ ಗೆ ವಿಧಿಸಲಾಯಿತು. ಶಹಾಬ್ದುದೀನ್ ಅವರ ಪೊಲೀಸ್ ಅಂಗ ರಕ್ಷಕರಾದ ಜಹಾಂಗೀರ್ ಮತ್ತು ಖಾಲಿಕ್ ಅವರನ್ನು ಸಹ ಈ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿ ಅಷ್ಟೇ ಪ್ರಮಾಣದ ಶಿಕ್ಷೆ ನೀಡಲಾಯಿತು. ಹನ್ನೊಂದು ವರ್ಷಗಳ ಹಿಂದೆ ಶಹಾಬ್ದುದೀನ್ ಅವರು ಜೀರಾದಿ ಕ್ಷೇತ್ರದ ಶಾಸಕರಾಗಿದ್ದಾಗ ಈ ಪ್ರಕರಣ ನಡೆದಿತ್ತು.

2007: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೂ ಅತ್ಯಂತ ಪ್ರಭಾವ ಬೀರುತ್ತಿರುವ ಮಹಿಳೆ ಎಂದು ಗುರುತಿಸಿದ್ದಲ್ಲದೆ ಪೆಪ್ಸಿ ಅಧ್ಯಕ್ಷೆ, ಕರ್ನಾಟಕದ ಸೊಸೆ ಇಂದ್ರಾ ನೂಯಿ ಅವರನ್ನು ವಿಶ್ವದ 10 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸೇರಿಸಲಾಯಿತು. ಅಮೆರಿಕದ `ಫೋಬ್ಸ್' ನಿಯತಕಾಲಿಕ ಪ್ರಕಟಿಸಿರುವ ಈ ಪಟ್ಟಿಯಲ್ಲಿ ಸೋನಿಯಾ 6ನೇ ಸ್ಥಾನ ಪಡೆದರು. ಕಳೆದ ವರ್ಷ ಅವರು 13ನೇ ಸ್ಥಾನದಲ್ಲಿದ್ದರು. ಸೋನಿಯಾ ಕಣಕ್ಕಿಳಿಸಿದ ಅಭ್ಯರ್ಥಿ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ಅವರ ಹೆಚ್ಚುತ್ತಿರುವ ಪ್ರಭಾವಕ್ಕೆ ಸಾಕ್ಷಿ ಎಂದು ಪತ್ರಿಕೆ ಹೇಳಿತು. ಆದರೆ 2006ರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಇಂದ್ರಾ ನೂಯಿ ಐದನೇ ಸ್ಥಾನಕ್ಕೆ ಇಳಿದರು. ಜಗತ್ತಿನ ಒಂದು ನೂರು ಪ್ರಭಾವಿ ಮಹಿಳೆಯರಿರುವ ಈ ಪಟ್ಟಿಯಲ್ಲಿ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ ಉಳಿಸಿಕೊಂಡರು.
ಇನ್ನೊಬ್ಬ ಭಾರತೀಯ ಮಹಿಳೆ ಅಮೆರಿಕದ ಜಂಬೋ ಗ್ರೂಪ್ ಅಧ್ಯಕ್ಷೆ ವಿದ್ಯಾ ಛಾಬ್ರಿಯಾ 97ನೇ ಸ್ಥಾನದಲ್ಲಿದ್ದರೆ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು `ಪ್ರಭಾವಿ ಮಹಿಳೆಯ ಹಿಂದಿರುವ ಇನ್ನೊಬ್ಬಳು ಪ್ರಭಾವಿ ಮಹಿಳೆ' ಎಂದು ಪತ್ರಿಕೆ ಹೇಳಿತು.
2006: ದಕ್ಷಿಣ ಆಫ್ರಿಕಾದ ಡರ್ಬಾನಿನ ಬಡ ಕರಿಯರ ವಸತಿ ಪ್ರದೇಶದ ಪ್ರೌಢಶಾಲೆಯೊಂದಕ್ಕೆ ಅಬ್ದುಲ್ ಕಲಾಂ ಅವರು ಕಳುಹಿಸಿರುವ 2 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಪ್ರಯೋಗಾಲಯ ಉಪಕರಣ ತಲುಪಿತು. 2004ರಲ್ಲಿ ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡಿದ್ದ ಕಾಲದಲ್ಲಿ ಕಲಾಂ ಅವರು ಉಮ್ಲಾಝಿ ಪಟ್ಟಣದ ಮೆಂಝಿ ಹೈಸ್ಕೂಲಿಗೆ ವಿಜ್ಞಾನ ಉಪಕರಣ ಒದಗಿಸುವ ಭರವಸೆ ನೀಡಿದ್ದರು. ಭಾರತೀಯ ರಾಜತಾಂತ್ರಿಕ ಅಜಯ್ ಸ್ವರೂಪ್ ಅವರು ಅಧಿಕೃತ ಸಮಾರಂಭದಲ್ಲಿ ಉಪಕರಣವನ್ನು ಶಾಲೆಯ ಪ್ರಾಂಶುಪಾಲರಾದ ಫೆಲಿಕ್ಸ್ ಶೊಲೋಲೊ ಮತ್ತು ಕ್ವಾಝುಲು-ನೇಟಾಲ್ ಪ್ರಾಂತದ ಶಿಕ್ಷಣ ಸಚಿವೆ ಇನಾ ಕ್ರೋನೆ ಅವರಿಗೆ ಹಸ್ತಾಂತರಿಸಿದರು.

2006: ಜಾಗತಿಕ ಐಟಿ ಸಂಸ್ಥೆಯಾಗಿರುವ ಇನ್ಫೋಸಿಸ್ ಟೆಕ್ನಾಲಜೀಸ್ ಒಂದು ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪೆನಿಗಳ ಸಾಲಿಗೆ ಸೇರ್ಪಡೆಗೊಂಡಿತು. ಈ ಪ್ರಮಾಣದ ಬಂಡವಾಳ ಹೊಂದಿರುವ ಎಲೈಟ್ ಕ್ಲಬ್ಬಿನಲ್ಲಿ ಈಗಾಗಲೇ ಒಎನ್ ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎನ್ ಟಿಪಿಸಿ ಸೇರ್ಪಡೆಯಾಗಿದ್ದು, ಇನ್ಫೋಸಿಸ್ ಈ ಸಾಲಿಗೆ ಸೇರಿದ ನಾಲ್ಕನೆ ಕಂಪೆನಿಯಾಯಿತು.

2006: ವಿಶ್ವದ ಮೊತ್ತ ಮೊದಲ ಸಂಗೀತಮಯ ರೊಬೋಟ್ `ಮಿಯುರೊ'ವನ್ನು ರೂಪದರ್ಶಿಯೊಬ್ಬಳು ಟೋಕಿಯೋದಲ್ಲಿ ಪ್ರದರ್ಶಿಸಿದಳು. ಮೊಟ್ಟೆ ಆಕಾರದಲ್ಲಿರುವ ಈ ರೊಬೋಟ್ ಸ್ವಯಂಚಾಲಿತವಾಗಿ ಚಲಿಸುವುದಲ್ಲದೆ ಸಂಗೀತಕ್ಕೆ ನೃತ್ಯವನ್ನೂ ಮಾಡುತ್ತದೆ.

2006: ವಿವಿಧ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಗಳಿಗಾಗಿ ನೀಡಲಾಗುವ `ಪ್ರಿಯದರ್ಶಿನಿ' ಪ್ರಶಸ್ತಿಗೆ ಇನ್ಫೋಸಿಸ್ ಟೆಕ್ನಾಲಜೀಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಮತ್ತು ಬಾಲಿವುಡ್ ತಾರೆ ಕರೀನಾ ಕಪೂರ್ ಆಯ್ಕೆಯಾದರು.

1997: ವೇಲ್ಸ್ ರಾಜಕುಮಾರಿ ಡಯಾನಾ ಪ್ಯಾರಿಸ್ಸಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮೃತರಾದರು. ಆಕೆಯ ಗೆಳೆಯ ಎಮಾಡ್ ಮಹಮ್ಮದ್ `ಡೋಡಿ'ಅಲ್ ಫಯಾಜ್ ಕೂಡಾ ಅಪಘಾತದಲ್ಲಿ ಸಾವನ್ನಪ್ಪಿದರು. ಬ್ರಿಟನ್ ರಾಜಕುಮಾರ ಚಾರ್ಲ್ಸ್ ಜೊತೆ ವಿವಾಹವಾಗಿದ್ದ ರಾಜಕುಮಾರಿ ಡಯಾನಾ 15 ವರ್ಷ ದಾಂಪತ್ಯ ಜೀವನ ನಡೆಸಿದ್ದರು. ದುರಂತ ಸಾವಿಗೆ ಒಂದು ವರ್ಷ ಮೊದಲು (1996ರ ಆಗಸ್ಟ್ 28) ವಿವಾಹ ವಿಚ್ಛೇದನ ಪಡೆದಿದ್ದರು.

1995: ಪಂಜಾಬಿನ ಮುಖ್ಯಮಂತ್ರಿ ಬೇ ಆಂತ್ ಸಿಂಗ್ ಅವರು ಚಂಡೀಗಢದಲ್ಲಿ ನಡೆದ ಬಾಂಬ್ ದಾಳಿಯ್ಲಲಿ ಅಸುನೀಗಿದರು.

1993: ಕೇಂದ್ರ ವಾಣಿಜ್ಯ ಸಚಿವರಾಗಿ ಪ್ರಣವ್ ಮುಖರ್ಜಿ ಅಧಿಕಾರ ಸ್ವೀಕಾರ.

1982: ಭಾರತದ ಮಾಜಿ ಉಪರಾಷ್ಟ್ರಪತಿ ಜಿ.ಎಸ್. ಪಾಠಕ್ ನಿಧನ.

1981: ಒಂದು ದಿನ ಹಿಂದೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಇರಾನಿನ ನೂತನ ಅಧ್ಯಕ್ಷ ಮಹಮ್ಮದ್ ಅಲ್ ಹಜಾಯಿ (48) ಮತ್ತು ಪ್ರಧಾನಿ ಮಹಮ್ಮದ್ ಜಾನದ್ ಅವರು ಈದಿನ ಬೆಳಗ್ಗೆ ಅಸು ನೀಗಿದರು. ಇದೇ ದಿನ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

1981: ಮದ್ರಾಸಿನಿಂದ (ಈಗಿನ ಚೆನ್ನೈ) ದೆಹಲಿಗೆ ಹೋಗುತ್ತಿದ್ದ ತಮಿಳುನಾಡು ಎಕ್ಸ್ ಪ್ರೆಸ್ ರೈಲು ಕಾಜಿಪೇಟ್-ಬಲದ್ ಷಾ ವಿಭಾಗದ ಮಧ್ಯೆ ಹಳಿ ತಪ್ಪಿ ಮಗುಚಿದ ಪರಿಣಾಮವಾಗಿ 25ಜನ ಮೃತರಾಗಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1979: ಭಾರತದ ಉಪರಾಷ್ಟ್ರಪತಿಯಾಗಿ ಎಂ. ಹಿದಾಯತುಲ್ಲಾ (1979-84) ನೇಮಕ.

1969: ಭಾರತದ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಜನ್ಮದಿನ.

1969: ಬಾಕ್ಸರ್ ರಾಕಿ ಮರ್ಸಿಯಾನೋ ಅವರು ಅಯೋವಾದಲ್ಲಿ ಸಂಭವಿಸಿದ ಹಗುರ ವಿಮಾನ ಅಪಘಾತದಲ್ಲಿ ತಮ್ಮ ಹುಟ್ಟು ಹಬ್ಬಕ್ಕಿಂತ ಒಂದು ದಿನ ಮೊದಲು ಮೃತರಾದರು.

1963: ವಾಷಿಂಗ್ಟನ್ ಡಿ.ಸಿ. ಮತ್ತು ಮಾಸ್ಕೊ ಮಧ್ಯೆ ಹಾಟ್ ಲೈನ್ ಸಂವಹನ (ಕಮ್ಯೂನಿಕೇಷನ್ಸ್) ಸಂಪರ್ಕ ಆರಂಭವಾಯಿತು.

1956: ಪ್ರಾಂತ್ಯಗಳ ಪುನರ್ ವಿಂಗಡಣಾ ಮಸೂದೆಗೆ ರಾಷ್ಟ್ರಾಧ್ಯಕ್ಷರು ಸಮ್ಮತಿ ಮುದ್ರೆ ಒತ್ತಿದರು. ವಾರದ ಹಿಂದೆ ಸಂಸತ್ತು ಈ ಮಸೂದೆಯನ್ನು ಅಂಗೀಕರಿಸಿತ್ತು.

1956: ಪದ್ಮಶ್ರೀ ನೇತ್ರದಾನಿ ಡಾ. ಎಂ.ಸಿ. ಮೋದಿ ಅವರು ಕರ್ನಾಟಕದ ಹೊಸಪೇಟೆಯಲ್ಲಿನಡೆಸಿದ ತಮ್ಮ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಕುರುಡನೊಬ್ಬನಿಗೆ ಕೋಳಿಮರಿಯ ಕಣ್ಣುಗುಡ್ಡೆಗಳನ್ನು ಹಾಕಿ ನೇತ್ರ ಶಸ್ತ್ರಚಿಕಿತ್ಸೆ ನಡೆಸಿ ದೃಷ್ಟಿ ತಂದುಕೊಡುವಲ್ಲಿ ಯಶಸ್ವಿಯಾದರು.

1952: ಸಾಹಿತಿ ಕೆ. ಜಯಪ್ರಕಾಶ ರಾವ್ ಜನನ.

1938: ಸಾಹಿತಿ, ಪ್ರವಚನಕಾರ, ಕೀರ್ತನಕಾರ ದಾನಪ್ಪ ಜತ್ತಿ ಅವರು ಸಿದ್ರಾಮಪ್ಪ ಜತ್ತಿ- ದೊಡ್ಡಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ತಿಕೋಟದಲ್ಲಿ ಜನಿಸಿದರು. ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ ಅವರಿಗೆ ಕರ್ನಾಟಕ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ `ಕರ್ನಾಟಕ ಕಲಾ ತಿಲಕ' ಬಿರುದು ಹಾಗೂ ಪ್ರಶಸ್ತಿ ಲಭಿಸಿದೆ.

1919: ಭಾರತದ ಖ್ಯಾತ ಬರಹಗಾರ್ತಿ, ಕವಯಿತ್ರಿ, ಕಾದಂಬರಿಗಾರ್ತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಅಮೃತಾ ಪ್ರೀತಮ್ ಜನ್ಮದಿನ.

1907: ರಾಮೋನ್ ಮ್ಯಾಗ್ಸೇಸೆ (1907-57) ಜನ್ಮದಿನ. ಫಿಲಿಪ್ಪೀನ್ಸ್ ಅಧ್ಯಕ್ಷರಾಗಿದ್ದ ಇವರು ಕಮ್ಯೂನಿಸ್ಟ್ ನೇತೃತ್ವದ (ಹಕ್) ಚಳವಳಿಯನ್ನು ಯಶಸ್ವಿಯಾಗಿ ಸೋಲಿಸಿದ ವ್ಯಕ್ತಿ. ಅವರ ನೆನಪಿಗಾಗಿ ಪ್ರತಿವರ್ಷ ಮ್ಯಾಗ್ಸೇಸೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

1887: ಥಾಮಸ್ ಆಲ್ವ ಎಡಿಸನ್ ಕಂಡು ಹಿಡಿದ `ಕೈನೆಟೋಸ್ಕೋಪ್' ಗೆ ಹಕ್ಕು ಸ್ವಾಮ್ಯ ನೀಡಲಾಯಿತು. ಈ ಯಂತ್ರವನ್ನು ಚಲಿಸುವ ಚಿತ್ರಗಳ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು.

1881: ಅಮೆರಿಕದ ಮೊದಲ ಟೆನಿಸ್ ಚಾಂಪಿಯನ್ ಶಿಪ್ ರೋಡ್ ಐಲ್ಯಾಂಡಿನ ನ್ಯೂಪೋರ್ಟ್ ಕ್ಯಾಸಿನೋದಲ್ಲಿ ಆರಂಭವಾಯಿತು. ರಿಚರ್ಡ್ ಸಿಯರ್ಸ್ ಅವರು ವಿಲಿಯಂ ಗ್ಲೈನ್ ಅವರನ್ನು ಪರಾಭವಗೊಳಿಸಿ ಮೊದಲ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. 1887ರಲ್ಲಿ ಮಹಿಳೆಯರ ಆಟವನ್ನು ಆರಂಭಿಸಲಾಯಿತು.

Saturday, August 30, 2008

Swamiji on Gokarna Temple …

Swamiji on

Gokarna

Temple …

DD Chandana will telecast special programme on Gokarna on 31st August 2008 at 8 am to 9 am. Shree Raghaveshwar Bharathi Mahaswamiji will participate in this Live Telecast programme.

Shree Raghaveshwara Bharathi Mahaswamiji of Shree Ramachandrapura Matha has said that Shree Mahabaleshwara Temple of Gokarna has been handed over to Ramachandrapura Matha as per the laws of land without any violations.

Gokarna Temple had the links with Ramachandrapura Matha since the time of Shree Adi Shankaracharya who established Raghootthama Matha in Gokarna.

Ramachandrapura Matha has been established later by Shree Ramachandra Bharthi Swamiji of the same Raghootthama Matha at Hosanagara and Upadhivantas appointed by Matha to lookafter Temple affairs.

Direct links of Temple and Matha was cutoff due to mistake of Governement some years back. And the process of rehandover of temple to Matha was begun during the President’s rule in Karnataka on the appeal by local authorities and people and it was handed over again to the Matha after performing all legal obligations.

Anyway you may have some more questions about it. If you want to clarify yourself switch on your TV on 31st August Sunday 8 am to 9 am. DD Chandana will telecast special programme on Gokarna.

Shree Raghaveshwara Bharathi Mahaswamiji will participate in this Live Telecast Programme. This programme runs around handover of Gokarna Shree Mahabaleshwara Temple and its future development.

Note: The picture here is the photoshop work by Anup Krishna Bhat Nethrakere. Swamiji is in Chaturmasya at Bangalore now.

ಇಂದಿನ ಇತಿಹಾಸ History Today ಆಗಸ್ಟ್ 30

ಇಂದಿನ ಇತಿಹಾಸ

ಆಗಸ್ಟ್ 30

ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ರತಕೃಷ್ಣನ್ ವೇಲು ಎಂಬಾತ ಕ್ವಾಲಾಲಂಪುರದಲ್ಲಿ ತನ್ನ ಬಲಿಷ್ಠ ಹಲ್ಲುಗಳ ಶಕ್ತಿಯಿಂದ ಏಳು ಬೋಗಿಗಳನ್ನು ಹೊಂದಿದ್ದ ರೈಲುಗಾಡಿಯನ್ನು ಎಳೆದು ಪರಾಕ್ರಮ ಮೆರೆದ. ಈತ 297.1 ಮೆಟ್ರಿಕ್ ಟನ್ ಭಾರದ ರೈಲನ್ನು 2.8 ಮೀಟರ್ ದೂರ ಎಳೆಯುವಲ್ಲಿ ಯಶಸ್ವಿಯಾದ.

2007: ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ರತಕೃಷ್ಣನ್ ವೇಲು ಎಂಬಾತ ಕ್ವಾಲಾಲಂಪುರದಲ್ಲಿ ತನ್ನ ಬಲಿಷ್ಠ ಹಲ್ಲುಗಳ ಶಕ್ತಿಯಿಂದ ಏಳು ಬೋಗಿಗಳನ್ನು ಹೊಂದಿದ್ದ ರೈಲುಗಾಡಿಯನ್ನು ಎಳೆದು ಪರಾಕ್ರಮ ಮೆರೆದ. ಈತ 297.1 ಮೆಟ್ರಿಕ್ ಟನ್ ಭಾರದ ರೈಲನ್ನು 2.8 ಮೀಟರ್ ದೂರ ಎಳೆಯುವಲ್ಲಿ ಯಶಸ್ವಿಯಾದ. ಕಬ್ಬಿಣದ ಸರಪಳಿಯನ್ನು ರೈಲಿಗೆ ಕಟ್ಟಲಾಗಿತ್ತು. ಅದರ ಮತ್ತೊಂದು ತುದಿಯನ್ನು ಹಲ್ಲಿನಿಂದ ಕಚ್ಚಿ ಹಿಡಿದ ವೇಲು ಸರ್ವಶಕ್ತಿಯನ್ನೂ ಉಪಯೋಗಿಸಿ ರೈಲನ್ನು ಎಳೆದ. ಇದೊಂದು ವಿಶ್ವದಾಖಲೆ ಎಂದು ಸಂಘಟಕರು ತಿಳಿಸಿದರು. ದಾಖಲೆಗಳ ಪರಿಶೀಲನೆ ಬಳಿಕ ಈ ಸಾಧನೆಗೆ ಗಿನ್ನೆಸ್ ವಿಶ್ವದಾಖಲೆಯ ಮಾನ್ಯತೆ ಲಭಿಸಬಹುದು ಎಂದು ವೇಲುವಿನ ಮ್ಯಾನೇಜರ್ ಅಣ್ಣ ಚಿದಂಬರ್ ಹೇಳಿದರು. `ಕಿಂಗ್ ಟೂಥ್' ಎಂದೇ ಜನಪ್ರಿಯನಾಗಿರುವ ವೇಲು ಅಪ್ಪಟ ಸಸ್ಯಾಹಾರಿ. ಈತ 2003ರ ಅಕ್ಟೋಬರ್ 18 ರಂದು 260.8 ಮೆಟ್ರಿಕ್ ಟನ್ ಭಾರದ ರೈಲನ್ನು 4.2 ಮೀ. ದೂರ ಎಳೆದು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಹೆಸರು ಪಡೆದಿದ್ದ. ವೇಲು ಈ ಸಾಹಸ ಮಾಡಿದ್ದು ಯೋಗ, ಧ್ಯಾನದ ಬಲದಿಂದ. ಪ್ರಯತ್ನ ಅರಂಭಿಸುವ ಮೊದಲು ಈತ ಎರಡೂ ಕಣ್ಣುಗಳನ್ನು ಮುಚ್ಚಿ ನಿಡಿದಾದ ಉಸಿರು ಎಳೆದು ಧ್ಯಾನ ನಿರತನಾಗಿದ್ದ.

2007: ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಹಣಕಾಸು ನೆರವು ನೀಡುವಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬ್ಯಾಂಕಿಗೆ ಕೇಂದ್ರ ಸರ್ಕಾರ ನೀಡುವ ಪ್ರಥಮ ರಾಷ್ಟ್ರೀಯ ಪ್ರಶಸ್ತಿಯನ್ನು ಕೆನರಾ ಬ್ಯಾಂಕ್ ಪಡೆದುಕೊಂಡಿತು. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ಎನ್. ರಾವ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

2007: ನಂದಿ ಇನ್ ಫ್ರಾಸ್ಟ್ರಕ್ಷರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ವಶದಲ್ಲಿರುವ ಹೆಚ್ಚುವರಿ ಜಮೀನು ಪರಾಭಾರೆಗೆ ಅವಕಾಶ ಕಲ್ಪಿಸಿದ್ದ ಒಪ್ಪಂದವನ್ನು ರದ್ದುಪಡಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿತು. 2002ರ ಆಗಸ್ಟ್ 6ರಂದು ನೈಸ್ ಮತ್ತು ಸರ್ಕಾರದ ನಡುವೆ ಆದ ಒಪ್ಪಂದದ ಉಪ ವಿಧಿ 1.1.3ರ ಪ್ರಕಾರ ಸರ್ಕಾರದಿಂದ ಪಡೆದ ಜಮೀನು ಮಾರಾಟ ಮಾಡಲು ನೈಸ್ ಗೆ ಅವಕಾಶವಿತ್ತು. ಈ ಉಪ ವಿಧಿಯನ್ನು ರದ್ದು ಮಾಡಲು ಕೈಗಾರಿಕಾ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಂಪುಟ ಸಭೆಯ ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಪ್ರಕಟಿಸಿದರು.

2007: ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ಹಿರಿಯ ಕಲಾವಿದೆ ಎಂ.ಎನ್.ಲಕ್ಷ್ಮೀದೇವಿ, ಜೀವಮಾನ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಸ್ವೀಕರಿಸಿದರು. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಚಿತ್ರ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಪರವಾಗಿ ನಟ ರಮೇಶ್ ಸ್ವೀಕರಿಸಿದರು. `ಸೈನೇಡ್' ಚಿತ್ರದಲ್ಲಿನ ಅಭಿನಯಕ್ಕಾಗಿ ತಾರಾ ಹಾಗೂ `ದುನಿಯಾ'ದ ನಟನೆಗಾಗಿ ವಿಜಯ್ ಕ್ರಮವಾಗಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯನ್ನು ಪಡೆದರು.

2007: ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಕಡೆಗೂ ಎಡಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಈ ಪಕ್ಷಗಳು ಎತ್ತಿರುವ ಆಕ್ಷೇಪಗಳನ್ನು ನಿವಾರಿಸಲು ರಚಿಸಲಾಗುವ ರಾಜಕೀಯ ಸಮಿತಿ ತನ್ನ ವರದಿ ನೀಡುವವರೆಗೆ ಒಪ್ಪಂದವನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಹೇಳಿತು. ಹೀಗಾಗಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಧ್ಯೆ ಉದ್ಭವಿಸಿದ್ದ ಮೂರು ವಾರಗಳ ಬಿಕ್ಕಟ್ಟು ಶಮನಗೊಂಡಿತು.

2007: ವರನಟ ಡಾ. ರಾಜ್ ಕುಮಾರ ಅವರಿಗೆ ಮರಣೋತ್ತರವಾಗಿ ರಾಘವೇಂದ್ರ ಅನುಗ್ರಹ (ಸಾಮಾಜಿಕ), ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನಾ ಸಂಸ್ಥೆಗೆ ರಾಘವೇಂದ್ರ ಅನುಗ್ರಹ (ಧಾಮರ್ಿಕ) ಹಾಗೂ ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದ ಚೆನ್ನೈನ ಟಿ.ವಿ. ಗೋಪಾಲಕೃಷ್ಣನ್ ಅವರಿಗೆ ಅಸ್ಥಾನ ವಿದ್ವಾನ್ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ನಡೆಯಿತು. ರಾಯರ 336ನೇ ಆರಾಧನಾ ಮಹೋತ್ಸವ ಅಂಗವಾಗಿ ಮಧ್ಯಾರಾಧನೆ ದಿನದಂದು ಮಠದ ಪೀಠಾಧಿಪತಿ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳು, ಉತ್ತರಾಧಿಕಾರಿ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳು ಪ್ರಶಸ್ತಿ ಪ್ರದಾನ ಮಾಡಿದರು. ಡಾ.ರಾಜಕುಮಾರ ಅವರಿಗೆ ಕೊಡಮಾಡಿದ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಪಾರ್ವತಮ್ಮ ರಾಜ್ ಕುಮಾರ, ಕರ್ನಾಟಕ ಇತಿಹಾಸ ಸಂಶೋಧನಾ ಸಂಸ್ಥೆಗೆ ನೀಡಿದ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಡಾ.ಎ.ಆರ್. ಪಂಚಮುಖಿ, ಹಾಗೂ ಆಸ್ಥಾನ ವಿದ್ವಾನ್ ಪ್ರಶಸ್ತಿಯನ್ನು ಚೆನ್ನೈನ ಟಿ.ವಿ. ಗೋಪಾಲಕೃಷ್ಣನ್ ಸ್ವೀಕರಿಸಿದರು.

2007: ಜೈಲಿನಲ್ಲಿರುವ ಆರ್ ಜೆಡಿ ಸಂಸದ ಶಹಾಬ್ದುದೀನ್ ಅವರ ವಿರುದ್ಧ ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ.ಸಿಂಘಾಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಅಪರಾಧ ಸಾಬೀತಾಗಿದೆ ಎಂದು ಸಿವಾನಿನ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. 1996ರ ಮೇ 3ರಂದು ಸಿವಾನ್ ಜಿಲ್ಲೆಯಲ್ಲಿ ಸಿಂಘಾಲ್ ಮೇಲೆ ನಡೆದ ಹಲ್ಲೆಯಲ್ಲಿ ಶಹಾಬ್ದುದೀನ್ ಭಾಗಿಯಾಗಿದ್ದರು ಎಂಬುದು ಸಾಬೀತಾಗಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜ್ಞಾನೇಶ್ವರ್ ಪ್ರಸಾದ್ ಶ್ರೀವಾಸ್ತವ್ ಹೇಳಿದರು. ಸಂಸದ ಶಹಾಬ್ದುದೀನ್ ಅವರಿಗೆ ರಕ್ಷಣೆ ಒದಗಿಸಿದ್ದ ಪೊಲೀಸರಾದ ಜಹಂಗೀರ್ ಮತ್ತು ಖಲಿ ಅವರ ಅಪರಾಧವೂ ಸಾಬೀತಾಗಿದೆ ಎಂದು ನ್ಯಾಯಾಲಯಯ ಹೇಳಿತು.

2007: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಮರಾವ್ ಅದಿಕ್ ಈದಿನ ಮುಂಬೈಯ ಲೀಲಾವತಿ ಆಸ್ಪತೆಯಲ್ಲಿ ಕೊನೆಯುಸಿರೆಳೆದರು. 1978 ರಿಂದ 1996 ತನಕ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಅದಿಕ್, ವಸಂತದಾದಾ ಪಾಟೀಲ್, ಎ.ಆರ್. ಅಂತುಳೆ, ಬಾಬಾಸಾಹೇಬ್ ಭೋಸ್ಲೆ, ಶರದ್ ಪವಾರ್ ಹಾಗೂ ಸುಧಾಕರ ರಾವ್ ನಾಯಕ್ ಸಂಪುಟದಲ್ಲಿ ದಶಕಕ್ಕೂ ಹೆಚ್ಚು ಕಾಲ ಸಚಿವರಾಗಿದ್ದರು.

2006: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಡಾ. ಶ್ರೀನಿವಾಸ ಸಂಪತ್ ಅವರು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿಯು ನೀಡುವ 2006ನೇ ಸಾಲಿನ ಪ್ರತಿಷ್ಠಿತ ಎಸ್.ಎಸ್. ಭಟ್ನಾಗರ್ ಪ್ರಶಸ್ತಿಗೆ ಆಯ್ಕೆಯಾದರು. ರಾಸಾಯನಿಕ ವಿಜ್ಞಾನದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ಸಂಪತ್ ಮತ್ತು ತಿರುವನಂತಪುರದ ವಿಜ್ಞಾನಿ ಥಾಮಸ್ ಅವರಿಗೆ ಘೋಷಿಸಲಾಯಿತು.

2006: ಮುಂಬೈಯ ಸ್ಥಳೀಯ ಟ್ಯಾಬ್ಲಾಯಿಡ್ ಪತ್ರಿಕೆಯೊಂದು ಗಣೇಶನ ವಿವಾದಾತ್ಮಕ ವ್ಯಂಗ್ಯಚಿತ್ರ (ಕಾರ್ಟೂನ್) ಪ್ರಕಟಿಸ್ದಿದಕ್ಕಾಗಿ ಮುಖಪುಟದಲ್ಲಿ ಕ್ಷಮೆಯಾಚಿಸಿತು. ಪತ್ರಿಕೆ ಪ್ರಕಟಿಸಿದ ವ್ಯಂಗ್ಯಚಿತ್ರ ವಿರುದ್ಧ ಅರುಣ್ಗೌಳಿ ನೇತೃತ್ವದ ಅಖಿಲ ಭಾರತೀಯ ಸೇನಾ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದು, ಸಂಘಟನೆಗಳ 20-25ಮಂದಿ 29ರ ರಾತ್ರಿ ದಕ್ಷಿಣ ಕೇಂದ್ರ ಮುಂಬೈಯಲ್ಲಿರುವ ಪತ್ರಿಕೆಯ ಕಾರ್ಯಾಲಯಕ್ಕೆ ಮೆರವಣಿಗೆ ನಡೆಸಿ ಸಂಪಾದಕರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.. ಪತ್ರಿಕೆ ಹಿಟ್ಲರ್, ಬಿನ್ ಲಾಡೆನ್ ಹಾಗೂ ಜಾರ್ಜ್ ಬುಷ್ ರಂತೆ ಕಾಣುವ ಗಣಪತಿಯ ಕಾರ್ಟೂನುಗಳನ್ನು ಪ್ರಕಟಿಸಿದ್ದೇ ಅಲ್ಲದೆ `ನಾವು ಈ ತರದ ವೈವಿಧ್ಯಮಯ ಗಣೇಶನನ್ನು ಇನ್ನೆಲ್ಲೂ ಕಾಣೆವು'ಎಂಬುದಾಗಿ ಅಡಿಬರಹ ನೀಡಿತ್ತು.

1991: ಉರಗ ಮಿತ್ರ ಡಾ. ಪಿ.ಜೆ. ದೇವ್ರಾಸ್ ನಿಧನ.

1990: ಪ್ರಸಾರ ಭಾರತಿ ಕಾಯ್ದೆಗೆ ಸಂಸತ್ತಿನಲ್ಲಿ ಅವಿರೋಧ ಸಮ್ಮತಿ.

1987: ಕೆನಡಾದ ಬೆನ್ ಜಾನ್ಸನ್ 9.83 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ವಿಶ್ವ ದಾಖಲೆ ನಿರ್ಮಿಸಿದ.

1983: ಭಾರತದ ಇನ್ ಸಾಟ್-1ಬಿ ವಿವಿಧೋದ್ಧೇಶ ಉಪಗ್ರಹವನ್ನು ಅಮೆರಿಕದ ಕೇಪ್ ಕ್ಯಾನವರಾಲಿನಿಂದ ಚಾಲೆಂಜರ್ ಮೂಲಕ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿಸಲಾಯಿತು. ಅದು ಅಕ್ಟೋಬರ್ 15ರ ವೇಳೆಗೆ ಪೂರ್ಣ ಕಾರ್ಯಾಚರಣೆ ಆರಂಭಿಸಿತು.

1983: ಗುಯೋನ್ ಎಸ್ ಬ್ಲುಫೋರ್ಡ್ ಜ್ಯೂನಿಯರ್ ಅವರು ಚಾಲೆಂಜರ್ ಮೂಲಕ ಬಾಹ್ಯಾಕಾಶಕ್ಕೆ ಹಾರಿದ ಮೊತ್ತ ಮೊದಲ ಕರಿಯ ಅಮೆರಿಕನ್ ಗಗನಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1967: ಅಮೆರಿಕದ ಸುಪ್ರೀಂಕೋರ್ಟಿಗೆ ಮೊತ್ತ ಮೊದಲ ಕರಿಯ ನ್ಯಾಯಾಧೀಶ ತುರ್ ಗುಡ್ ಮಾರ್ಶಲ್ ಅವರ ನೇಮಕಾತಿಯನ್ನು ಅಮೆರಿಕದ ಸೆನೆಟ್ ದೃಢಪಡಿಸಿತು.

1945: ಜಪಾನಿನಿಂದ ಹಾಂಕಾಂಗ್ ಸ್ವತಂತ್ರ.

1941: ದ್ವಿತೀಯ ಮಹಾಸಮರದ ಕಾಲದಲ್ಲಿ ನಾಝಿ ಪಡೆಗಳಿಂದ ಲೆನಿನ್ ಗ್ರಾಡ್ ಕೈವಶ ಆರಂಭ.

1934: ಕ್ರಿಕೆಟಿಗ ಬಾಲಕೃಷ್ಣ ಪಂಡರಿನಾಥ ಗುಪ್ತ (ಬಾಲೂ) ಜನನ.

1913: ಸರ್ ರಿಚರ್ಡ್ ಸ್ಟೋನ್ (1913-1991) ಜನ್ಮದಿನ. ಖ್ಯಾತ ಬ್ರಿಟಿಷ್ ಆರ್ಥಿಕ ತಜ್ಞರಾದ ಇವರು ರಾಷ್ಟ್ರೀಯ ಆದಾಯ ಲೆಕ್ಕಾಚಾರ ಕುರಿತು ಮಾಡಿದ ಕೆಲಸಕ್ಕಾಗಿ 1984ರ ನೊಬೆಲ್ ಪ್ರಶಸ್ತಿ ಗಳಿಸಿದರು.

1849: ಭಾರತದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ದಾನಿ ನವರೋಜಿ ವಾಡಿಯಾ (1849-1999) ಜನ್ಮದಿನ. ಇವರು 1879ರಲ್ಲಿ ಉಡುಪುಗಳ ಉತ್ಪಾದನೆಗಾಗಿ ಬಾಂಬೆ ಡೈಯಿಂಗ್ ಅಂಡ್ ಟೆಕ್ಸ್ ಟೈಲ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿಯನ್ನು ಸ್ಥಾಪಿಸಿದರು.

1569: ಭಾರತದ ಮೊಘಲ್ ಸಾಮ್ರಾಟ ಜಹಾಂಗೀರ್ (1569-1627) ಜನ್ಮದಿನ. ಈತ ಅಕ್ಬರ್ನ ಪುತ್ರ.

Friday, August 29, 2008

'ಧ್ಯಾನ ಚಂದ' ಈತನ 'ಹಾಕಿ' ಬಲು ಚೆಂದ..! Hockey Mantrik Dhyan Chand..!

Hockey Mantrik

Dhyan Chand..!


Dictator of Germany Adolph Hitler offered him topmost post in his army, many suspected that his Hockey Stick contained magnet! His birthday is being observed as "National Sports Day of India'. In Vienna one sports club has erected his statue showing him as God with 4 hands. He he is Hockey Mantrik Dhyan Chand. Nethrakere Udaya Shankara remembers him on the occasion of his birthday.

'ಧ್ಯಾನ ಚಂದ' ಈತನ

'ಹಾಕಿ' ಬಲು ಚೆಂದ..!


ಈ ಭಾರತೀಯ ತರುಣನಿಗೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ದೊಡ್ಡ ಹುದ್ದೆಯ ಆಮಿಷ ತೋರಿಸಿದ್ದ... ವಿಯೆನ್ನಾದಲ್ಲಿ ಈತನನ್ನು ನಾಲ್ಕು ಕೈಗಳಿರುವ ದೇವತೆಯಂತೆ ಚಿತ್ರಿಸುವ ಪ್ರತಿಮೆ ನಿಲ್ಲಿಸಲಾಗಿದೆ... ಆಗಸ್ಟ್ 29 ಈತನ ಜನ್ಮದಿನ.... ಈತನ ಗೌರವಾರ್ಥ ಈದಿನವನ್ನು ಭಾರತದ `ರಾಷ್ಟ್ರೀಯ ಕ್ರೀಡಾ ದಿನ'ವಾಗಿ ಆಚರಿಸಲಾಗುತ್ತದೆ. ಈತ ಯಾರು ಗೊತ್ತೆ?

ನೆತ್ರಕರೆ ಉದಯಶಂಕರ

ಇದು 72 ವರ್ಷಗಳ ಹಿಂದಿನ ಘಟನೆ. ಇಸವಿ: 1936. ಜರ್ಮನಿಯ ಬರ್ಲಿನ್ನಿನಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆದಿತ್ತು. ಭಾರತದ ಹಾಕಿ ತಂಡ ಕೂಟದಲ್ಲಿ ಪಾಲ್ಗೊಂಡಿತ್ತು. ಸ್ಪರ್ಧೆಯ ಎಲ್ಲ ಐದು ಪಂದ್ಯಗಳಲ್ಲಿ ಭಾರತೀಯ ತಂಡ ಪಟ ಪಟನೆ ಜಯ ಸಂಪಾದಿಸಿತು. ತಂಡ ಪಡೆದ 38 ಗೋಲುಗಳಲ್ಲಿ ಹನ್ನೊಂದು ಗೋಲುಗಳು ಒಬ್ಬನೇ ಒಬ್ಬ ವ್ಯಕ್ತಿಯ `ಬೆತ್ತ'ದಿಂದ (ಸ್ಟಿಕ್) ಬಂದಿದ್ದವು.

ನೋಡುತ್ತಿದ್ದವರೆಲ್ಲ ಮೂಕ ವಿಸ್ಮಿತರಾಗಿದ್ದರು. ಮೂವತ್ತೊಂದರ ಹರೆಯದ ಆ ತರುಣನ `ಬೆತ್ತ'ದಲ್ಲಿ ಅದೇನು ಮಾಂತ್ರಿಕ ಶಕ್ತಿ ಇತ್ತೋ! ಆತನ ಕೌಶಲ್ಯ, ಚೆಂಡನ್ನು ಕುಟ್ಟುವ ಕಲೆ ಪ್ರೇಕ್ಷಕರಲ್ಲಿ ವಿದ್ಯುತ್ ಸಂಚಾರ ಉಂಟು ಮಾಡುತ್ತಿತ್ತು. ಮೈದಾನದ ಯಾವುದೇ ಮೂಲೆಯ್ಲಲ್ದಿದರೂ ಚೆಂಡನ್ನು ತನ್ನ ಗುರಿಯತ್ತ ಅಟ್ಟುತ್ತಿದ್ದ ಆ ತರುಣನ ಚಾಕಚಕ್ಯತೆ ಜರ್ಮನ್ನರನ್ನು ದಂಗು ಬಡಿಸಿತ್ತು.

ಆತನ `ಬೆತ್ತ'ದಲ್ಲಿ ಚೆಂಡನ್ನು ನಿಯಂತ್ರಿಸಬಲ್ಲಂತಹ `ಅಯಸ್ಕಾಂತ' ಇಲ್ಲವೇ ಬೇರೇನಾದರೂ ವಸ್ತುವನ್ನು ಬಚ್ಚಿಡಲಾಗಿದೆ ಎಂಬ ಸಂಶಯವೂ ಜರ್ಮನ್ನರಿಗೆ ಬಂತು! ಆತನ ಬೆತ್ತವನ್ನು ತೆಗೆದುಕೊಂಡು ತಡಕಾಡಿದ್ದಷ್ಟೇ ಅಲ್ಲ, ಬೇರೆ ಬೆತ್ತವನ್ನು ನೀಡಿ ಅದರಲ್ಲಿ ಆಡುವಂತೆಯೂ ಮಾಡಲಾಯಿತು.

ಆದರೆ ಆ ತರುಣ ಅದಕ್ಕೆ ಬೆಚ್ಚಲಿಲ್ಲ. ಬದಲಾದ `ಬೆತ್ತ' ಆತನನ್ನು ನೆಲಕಚ್ಚಿಸಲಿಲ್ಲ. ಗೋಲುಗಳು ಹಿಂದಿನ `ಬೆತ್ತ'ದ ಗತಿಯಲ್ಲೇ ಉರುಳತೊಡಗಿದವು.

ಕೊನೆಯ ಪಂದ್ಯದಲ್ಲಿ ಆತ ಜರ್ಮನಿಯ ವಿರುದ್ಧ ಆರು ಗೋಲುಗಳನ್ನು ಬಾರಿಸಿದ. ಜರ್ಮನ್ನರ ಸಹನೆಯ ಕಟ್ಟೆ ಒಡೆಯಿತು. ಅವರು ಅಡ್ಡದಾರಿಗೆ ಇಳಿದರು. ಜರ್ಮನ್ ಗೋಲ್ ಕೀಪರ್ ಬಾರಿಸಿದ ಏಟಿಗೆ ಆ ತರುಣನ ಹಲ್ಲೊಂದು ಕಿತ್ತು ಬಂತು.

ಈಗ ಈ ತರುಣ `ಹಲ್ಲು ಕಿತ್ತ ಹಾವು'! ಪ್ರಥಮ ಚಿಕಿತ್ಸೆ ಪಡೆದು ಆಟಕ್ಕೆ ಮರಳಿದ. ಆದರೆ ಆತ ಭುಸುಗುಡಲಿಲ್ಲ. ಬದಲು ತನ್ನ ತಂಡಕ್ಕೆ ಹೆಚ್ಚು ಗೋಲು ಬಾರಿಸದಂತೆ ಸೂಚನೆ ನೀಡಿದ.

`ಚೆಂಡನ್ನು ನಿಯಂತ್ರಿಸುವ ಮೂಲಕವೇ ನಾವು ಅವರಿಗೆ ಪಾಠ ಕಲಿಸಬೇಕು'- ಇದು ಆತನ ಬಾಯಿಯಿಂದ ಹೊರಟ ಮಾತು. ಭಾರತೀಯ ತಂಡದ ಆಟಗಾರರು ಅತ್ಯಂತ ಸಹನೆಯೊಂದಿಗೆ, ಆದರೆ ಜರ್ಮನ್ನರು ಬೆಚ್ಚಿ ಬೀಳುವಂತೆ ಆಟ ಮುಂದುವರಿಸಿದರು. ಚೆಂಡನ್ನು ಜರ್ಮನ್ ಸರ್ಕಲ್ವರೆಗೂ ಒಯ್ದು ಹಠಾತ್ತನೆ ಹಿಂದಕ್ಕೆ ಹಾರಿಸುತ್ತಾ ಆಡತೊಡಗಿದ ಭಾರತೀಯ ತಂಡಕ್ಕೆ ಈ ತರುಣನೇ ಸ್ಫೂರ್ತಿಯ ಚಿಲುಮೆಯಾಗಿದ್ದ. ಕಡೆಗೂ ತಂಡ ಜರ್ಮನಿಯನ್ನು 8-1 ಗೋಲುಗಳಿಂದ ಸೋಲಿಸಿ ಒಲಿಂಪಿಕ್ ಸ್ವರ್ಣವನ್ನು ಗೆದ್ದುಕೊಂಡಿತು.

ಈ ಸುದ್ದಿ ಜರ್ಮನಿಯ ಆಗಿನ ನಾಯಕ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ತಲುಪಿತು. ಆ ಯುವಕನ ಚಾಕಚಕ್ಯತೆಗೆ ಬೆರಗಾದ ಹಿಟ್ಲರ್ ಆತನಿಗೆ ಒಂದು `ಮಹಾನ್ ಆಮಿಷ'ವನ್ನೇ ಒಡ್ಡಿದ: `ಜರ್ಮನಿಗೆ ವಲಸೆ ಬರುವುದೇ ಆದಲ್ಲಿ ನಿನಗೆ ಕರ್ನಲ್ ಹುದ್ದೆ ನೀಡುವೆ'.

ಆ ತರುಣನ ಧಮನಿಗಳಲ್ಲಿ ದೇಶಭಕ್ತಿಯ ನೆತ್ತರು ಹರಿಯುತ್ತಿತ್ತು. ಆತನ ಕಣ್ಣುಗಳಲ್ಲಿ ್ಲಇದ್ದುದು ಒಂದೇ ಕನಸು- ಭಾರತ ಹಾಕಿಯಲ್ಲಿ ಅಪ್ರತಿಮ ರಾಷ್ಟ್ರವಾಗಬೇಕು. ಹಿಟ್ಲರನ ಆಹ್ವಾನವನ್ನು ಆತ ನಯವಾಗಿಯೇ ತಿರಸ್ಕರಿಸಿದ.

ಈ ತರುಣನೇ ಭಾರತದ `ಹಾಕಿ ಮಾಂತ್ರಿಕ' ಧ್ಯಾನ್ ಚಂದ್.

ಧ್ಯಾನ್ ಚಂದ್ ಹುಟ್ಟಿ ಇಂದಿಗೆ (ಆಗಸ್ಟ್ 29) ಸರಿಯಾಗಿ 103 ವರ್ಷ. 1905ರಲ್ಲಿ ಅಲಹಾಬಾದಿನಲ್ಲಿ ಸುಬೇದಾರ್ ಸೋಮೇಶ್ವರ ದತ್ ಪುತ್ರನಾಗಿ ಹುಟ್ಟಿದ ಧ್ಯಾನ್ ಚಂದ್ ಬೆಳೆದದ್ದು ಝಾನ್ಸಿಯಲ್ಲಿ. ಅಪ್ಪ ಸೇನೆಯಲ್ಲಿ ಇದ್ದುದರಿಂದ ಝಾನ್ಸಿಯಲ್ಲಿ ಇದ್ದಾಗಲೇ ಬ್ರಿಟಿಷ್ ಸೇನಾ ಅಧಿಕಾರಿಗಳ ಜೊತೆ ಆಡುತ್ತಾಡುತ್ತಲೇ ಆತ `ಹಾಕಿ' ಆಟದ ಪಟ್ಟುಗಳನ್ನು ಕರಗತ ಮಾಡಿಕೊಂಡ.

1922ರಲ್ಲಿ ಸಿಪಾಯಿಯಾಗಿ ಸೇನೆಯ ಭಾರತೀಯ ರೆಜಿಮೆಂಟಿಗೆ ಸೇರಿಕೊಂಡದ್ದು ಹಾಕಿ ಆಟದಲ್ಲಿ ಇನ್ನಷ್ಟು ಪರಿಣತಿ ಸಾಧಿಸಲು ಧ್ಯಾನ್ ಚಂದ್ ಗೆ ನೆರವಾಯಿತು. ಉನ್ನತ ಅಧಿಕಾರಿಗಳ ಗಮನ ಸೆಳೆದ ಆತನಿಗೆ ಅಂತರ ಪ್ರಾಂತೀಯ ಚಾಂಪಿಯನ್ ಶಿಪ್ ಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು.

ತಾರುಣ್ಯದ ಜೊತೆಗೆ ಆಟದಲ್ಲಿ ಕರಗತ ಮಾಡಿಕೊಂಡಿದ್ದ ಕೌಶಲ್ಯಗಳು ಧ್ಯಾನ್ ಚಂದ್ ಅದೃಷ್ಟವನ್ನು ಖುಲಾಯಿಸಿದವು. 1926ರಲ್ಲಿ ನ್ಯೂಜಿಲೆಂಡಿನ ಪಂದ್ಯಗಳಲ್ಲಿ ಭಾರತೀಯ ತಂಡಕ್ಕೆ ಧ್ಯಾನ್ ಚಂದ್ ಆಯ್ಕೆ ಆಯಿತು. ಈ ಪ್ರವಾಸ ಧ್ಯಾನ್ ಚಂದ್ ಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತು. ವಾಪಸಾಗುವ ಮಾರ್ಗದಲ್ಲಿ ತಂಡ ಆಸ್ಟ್ರೇಲಿಯಾದಲ್ಲೂ ಪಂದ್ಯಗಳಲ್ಲಿ ಪಾಲ್ಗೊಂಡಿತು.

1928ರಲ್ಲಿ ಆಮ್ ಸ್ಟರ್ ಡ್ಯಾಮ್ ಒಲಿಂಪಿಕ್ಸಿಗೆ ಧ್ಯಾನ್ ಚಂದ್ ಒಳಗೊಂಡ ಭಾರತೀಯ ತಂಡ ಆಯ್ಕೆಯಾಯಿತು. ಪಾಕ್ ಸ್ಟೋನ್ ಫೆಸ್ಟಿವಲಿನಲ್ಲೂ ಈ ತಂಡ ಹತ್ತು ಪಂದ್ಯಗಳಲ್ಲಿ ಆಡಿತು. ಈ ಪಂದ್ಯಗಳಲ್ಲಿ ಭಾರತೀಯ ತಂಡ ಗೆದ್ದ 72 ಗೋಲುಗಳಲ್ಲಿ 36 ಗೋಲುಗಳನ್ನು ಪಡೆದುಕೊಂಡ ಧ್ಯಾನ್ ಚಂದ್ ಮಿಂಚಿದ್ದೇ ಮಿಂಚಿದ್ದು.

ಆಮ್ ಸ್ಟರ್ ಡ್ಯಾಮ್ ಒಲಿಂಪಿಕ್ಸಿನಲ್ಲಿ 23 ಗೋಲುಗಳನ್ನು ಪಡೆದು ದಾಖಲೆ ನಿರ್ಮಿಸಿದರೆ, ಎದುರಾಳಿ ಆಸ್ಟ್ರಿಯಾ, ಬೆಲ್ಜಿಯಂ, ಡೆನ್ಮಾರ್ಕ್ ಹಾಗೂ ಪೋಲಂಡ್ ಗಳು ಒಂದು ಗೋಲು ಪಡೆಯಲೂ ಶಕ್ತವಾಗಲಿಲ್ಲ. ಈ ಸಂದರ್ಭದಲ್ಲಿ ಆಡಿದ ಅದ್ಭುತ ಆಟ ಧ್ಯಾನ್ ಚಂದ್ ಗೆ `ಹಾಕಿ ಬೆತ್ತದ ಮಾಂತ್ರಿಕ' (ಜಗ್ಲರ್ ವಿದ್ ಹಾಕಿ ಸ್ಟಿಕ್) ಎಂಬ ಹೆಸರನ್ನು ಸಂಪಾದಿಸಿಕೊಟ್ಟಿತು.

ಆ ಬಳಿಕ ಧ್ಯಾನ್ ಚಂದ್ ನೇತೃತ್ವದಲ್ಲಿ ನಡೆದದ್ದು ವಸ್ತುಶಃ ಭಾರತದ `ಹಾಕಿ ದಂಡಯಾತ್ರೆ' ಎಂದರೆ ಅತಿಶಯೋಕ್ತಿ ಏನಲ್ಲ. 1932ರ ಲಾಸ್ ಏಂಜೆಲಿಸ್ ಒಲಿಂಪಿಕ್ಸಿನಲ್ಲಿ ಹಾಕಿಯ್ಲಲಿ ಪಾಲ್ಡೊಂಡಿದ್ದುದು ಭಾರತ, ಜಪಾನ್ ಮತ್ತು ಅಮೆರಿಕ. ಇಲ್ಲಿ ಧ್ಯಾನ್ ಚಂದ್ ಜೊತೆಗೆ ಅವರ ಸಹೋದರ ರೂಪ್ ಸಿಂಗ್ ಕೂಡಾ ಮಿಂಚಿದರು. ಜಪಾನ್ ವಿರುದ್ಧದ ಆಟದಲ್ಲಿ ಧ್ಯಾನ್ ಚಂದ್ 4 ಗೋಲು ಪಡೆದರೆ, ರೂಪ್ ಸಿಂಗ್ ಪಾಲು 3 ಗೋಲು. ಅಮೆರಿಕ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತ ಪಡೆದ 24 ಗೋಲುಗಳಲ್ಲಿ ಈ ಸಹೋದರರ ಪಾಲು 18 ಗೋಲುಗಳು.

ಲಾಸ್ ಏಂಜೆಲಿಸ್ ನಿಂದ ವಾಪಸಾಗುವ ಮಾರ್ಗದಲ್ಲಿ ಸಿಲೋನ್ (ಈಗಿನ ಶ್ರೀಲಂಕಾ), ಸಿಂಗಪುರ, ಜಪಾನ್, ಜರ್ಮನಿ ಮತ್ತು ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಆಡಿದ 35 ಪಂದ್ಯಗಳ ಪೈಕಿ 33 ಪಂದ್ಯಗಳಲ್ಲಿ ಭಾರತದ್ದೇ ಜಯಭೇರಿ.

1935ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿಗೆ ಭೇಟಿ ನೀಡಿದ ಭಾರತ ತಂಡ 48 ಪಂದ್ಯಗಳನ್ನು ಆಡಿತು. ಈ ಪಂದ್ಯಗಳಿಗೆ ಭಾರತೀಯ ತಂಡದ ನಾಯಕನಾಗಿ ಸರ್ವಾನುಮತದ ಆಯ್ಕೆ ಧ್ಯಾನ್ ಚಂದ್. ಈ ಪ್ರವಾಸದಲ್ಲಿ ಭಾರತ ಗಳಿಸಿದ 584 ಗೋಲುಗಳಲ್ಲಿ ಧ್ಯಾನ್ ಚಂದ್ ಪಡೆದ ಗೋಲುಗಳ ಸಂಖ್ಯೆ 200. ಶ್ರೇಷ್ಠ ಕ್ರಿಕೆಟ್ ಆಟಗಾರ ಡಾನ್ ಬ್ರಾಡ್ಮನ್ ಅವರು ಈ ಸಮಯದಲ್ಲೇ ಧ್ಯಾನ್ ಚಂದ್ ಅವರನ್ನು ಮೆಚ್ಚಿಕೊಂಡರು.
1936ರ ಬರ್ಲಿನ್ ಒಲಿಂಪಿಕ್ ಕ್ರೀಡಾಕೂಟ ಧ್ಯಾನ್ ಚಂದ್ ಕೌಶಲ್ಯ ಪ್ರದರ್ಶನದ ಕ್ಲೈಮ್ಯಾಕ್ಸ್. ಈ ಸಂದರ್ಭದಲ್ಲೇ ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಧ್ಯಾನ್ ಚಂದ್ `ಮಾಂತ್ರಿಕತೆ'ಗೆ ಮರುಳಾದದ್ದು.

`ಕ್ರಿಕೆಟ್ ಆಟದಲ್ಲಿ ಶ್ರೇಷ್ಠ ಆಟಗಾರರೆಂದು ಗ್ರೇಸ್, ಹಾಬ್ಸ್, ಬ್ರಾಡ್ಮನ್ ಮತ್ತಿತರರನ್ನು ಹೆಸರಿಸಬಹುದು. ಆದರೆ ಹಾಕಿಯಲ್ಲಿ ಅಂತಹ ಅಸದೃಶ ಆಟಗಾರ ಎಂದರೆ ಧ್ಯಾನ್ ಚಂದ್ ಒಬ್ಬರೇ' ಎಂದು ಅವರ ಜೊತೆಗೆ ಆಟವಾಡಿದ್ದ ಕರ್ನಲ್ ಆಲಿ ಇಕ್ತಿದಾರ್ ಶಹಾ `ವರ್ಲ್ಡ್ ಹಾಕಿ ಮ್ಯಾಗಜಿನ್' ನಲ್ಲಿ 1970ರಷ್ಟು ಹಿಂದೆಯೇ ಬರೆದಿದ್ದರು.

ನಲ್ವತ್ತರ ದಶಕದಲ್ಲಿ ಧ್ಯಾನ್ ಚಂದ್ ಸೇನೆಯಲ್ಲಿ ಮೇಜರ್ ಪದವಿಗೆ ಏರಿದರು. 1956ರಲ್ಲಿ ಅವರಿಗೆ `ಪದ್ಮಭೂಷಣ' ಪ್ರಶಸ್ತಿ ಲಭಿಸಿತು. ಪಾಟಿಯಾಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸಿನಲ್ಲಿ ಕೆಲಕಾಲ ಚೀಫ್ ಹಾಕಿ ಕೋಚ್ ಆಗಿ ಸೇವೆ ಸಲ್ಲಿಸುವ ಮೂಲಕ ಹಲವಾರು ಆಟಗಾರರಿಗೆ ಅವರು ಮಾರ್ಗದರ್ಶನ ಕೂಡಾ ಮಾಡಿದರು. ಪುತ್ರ ಅಶೋಕ್ ಕುಮಾರ್ ಅವರನ್ನು ಹಾಕಿ ಪಟುವಾಗಿ ರೂಪಿಸಿದ ಧನ್ಯತೆ ಕೂಡಾ ಅವರದು.

1979ರ ಡಿಸೆಂಬರ್ 3ರಂದು ಮೇಜರ್ ಧ್ಯಾನ್ ಚಂದ್ ನಿಧನರಾದರು. ಅವರ ಮೊದಲ ಪುಣ್ಯತಿಥಿ ಸಂದರ್ಭದಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಭಾರತ ಸರ್ಕಾರ ತನ್ನ ಗೌರವ ಸಲ್ಲಿಸಿತು.. ಅದಕ್ಕಿಂತಲೂ ದೊಡ್ಡ ಗೌರವವಾಗಿ ಅವರ ಹುಟ್ಟು ಹಬ್ಬವನ್ನು ಭಾರತದಲ್ಲಿ `ರಾಷ್ಟ್ರೀಯ ಕ್ರೀಡಾ ದಿನ'ವಾಗಿ ಆಚರಿಸಲಾಗುತ್ತಿದೆ.

ಇವೆಲ್ಲವನ್ನೂ ಮೀರುವಂತಹ ಗೌರವ ಧ್ಯಾನ್ ಚಂದ್ ಗೆ ವಿಯೆನ್ನಾದಲ್ಲಿ ಲಭಿಸಿದೆ. ಅದೇನು ಗೊತ್ತೇ? ಅಲ್ಲಿನ ಸ್ಪೋರ್ಟ್ಸ್ ಕ್ಲಬ್ ಒಂದು ಧ್ಯಾನ್ ಚಂದ್ ಅವರ ಅದ್ಭುತ ಪ್ರತಿಮೆಯೊಂದನ್ನು ನಿಲ್ಲಿಸಿದೆ. ಈ ಪ್ರತಿಮೆಗೆ ನಾಲ್ಕು ಕೈಗಳು. ಅವುಗಳಲ್ಲಿ ನಾಲ್ಕು `ಹಾಕಿ ಸ್ಟಿಕ್' ಗಳು. ವಿಯೆನ್ನೀಯರ ದೃಷ್ಟಿಯಂತೆ ಧ್ಯಾನ್ ಚಂದ್ ಒಬ್ಬ ದೇವತೆ. ಏಕೆಂದರೆ ಎರಡು ಕೈಗಳು ಉಳ್ಳ ಸಾಮಾನ್ಯ ಮನುಷ್ಯ ಒಂದು ಬೆತ್ತದಿಂದ (ಸ್ಟಿಕ್) ಅಷ್ಟೊಂದು ಚೆನ್ನಾಗಿ ಆಟ ಆಡಲು ಸಾಧ್ಯವೇ ಇಲ್ಲ..!

ಈಗ ಹೇಳಿ, ಜನ್ಮ ದಿನದ ಈ ಹೊತ್ತಿನ್ಲಲಾದರೂ ಮೇಜರ್ ಧ್ಯಾನ್ ಚಂದ್ ಗೆ ಒಂದು `ಸೆಲ್ಯೂಟ್' ಹೊಡೆಯದೇ ಇದ್ದರೆ ನಾವು ಕೃತಘ್ನರಾಗಲಾರೆವೇ?

ಇಂದಿನ ಇತಿಹಾಸ History Today ಆಗಸ್ಟ್ 29

ಇಂದಿನ ಇತಿಹಾಸ

ಆಗಸ್ಟ್ 29

ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ (29-8-1926ರಿಂದ 12-1-2004) ಅವರು 1926ರಲ್ಲಿ ಈದಿನ ಜನಿಸಿದರು. ಕರ್ನಾಟಕದ ಕಾಂಗ್ರೆಸ್ಸೇತರ ಸರ್ಕಾರದ ಮೊದಲ ಮುಖ್ಯಮಂತ್ರಿಯಾದ ಹೆಗಡೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

2007: ಭಾರತದ ಫುಟ್ ಬಾಲ್ ಇತಿಹಾಸದಲ್ಲಿ ಈದಿನದ ರಾತ್ರಿ ಒಂದು ಸುಂದರ ರಾತ್ರಿ. ಭಾರತ ತಂಡದವರು ಮೊದಲ ಬಾರಿ ಒಎನ್ ಜಿಸಿ ನೆಹರೂ ಕಪ್ ಫುಟ್ ಬಾಲ್ ಟ್ರೋಫಿ ಗೆದ್ದು ಚಾಂಪಿಯನ್ ಶಿಪ್ ಪಡೆದದು ್ದಇದಕ್ಕೆ ಕಾರಣ.ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಸೊಗಸಾದ ಆಟ ಪ್ರದರ್ಶಿಸಿದ ಭಾರತ ಫೈನಲ್ ಪಂದ್ಯದಲ್ಲಿ 1-0 ಗೋಲಿನಿಂದ ಸಿರಿಯಾ ತಂಡವನ್ನು ಮಣಿಸಿ ಈ ಮಹತ್ವದ ಸಾಧನೆ ಮಾಡಿತು. ಇದಕ್ಕಾಗಿ ಭಾರತ ತಂಡ 40 ಸಾವಿರ ಡಾಲರ್ ಬಹುಮಾನ ಪಡೆಯಿತು.

2007: ಖ್ಯಾತ ಟ್ರ್ಯಾಪ್ ಶೂಟರ್ ಮಾನವ್ ಜಿತ್ ಸಿಂಗ್ ಸಂಧು ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದ ಅಶೋಕಾ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ 14 ಮಂದಿಗೆ ಅರ್ಜುನ ಪ್ರಶಸ್ತಿ, ಧ್ಯಾನ್ ಚಂದ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಯಿತು. ಇತರ ಪ್ರಶಸ್ತಿ ವಿಜೇತರು: ಅರ್ಜುನ ಪ್ರಶಸ್ತಿ- ಜಯಂತಾ ತಾಲ್ಲೂಕ್ದಾರ್ (ಆರ್ಚರಿ), ಕೆ.ಎಂ.ಬಿನು (ಅಥ್ಲೆಟಿಕ್ಸ್), ಬಿ. ಚೇತನ್ ಆನಂದ್ (ಬ್ಯಾಡ್ಮಿಂಟನ್), ವಿಜೇಂದರ್ (ಬಾಕ್ಸಿಂಗ್), ಪಿ. ಹರಿಕೃಷ್ಣ (ಚೆಸ್), ಅಂಜುಮ್ ಚೋಪ್ರಾ (ಕ್ರಿಕೆಟ್), ಜ್ಯೋತಿ ಸುನಿತಾ ಕುಲ್ಲು (ಹಾಕಿ), ವಿಜಯ್ ಕುಮಾರ್ (ಶೂಟಿಂಗ್), ಸೌರವ್ ಘೋಷಾಲ್ (ಸ್ಕ್ವಾಷ್), ಸುಭಜಿತ್ ಸಾಹಾ (ಟೇಬಲ್ ಟೆನಿಸ್), ಗೀತಾ ರಾಣಿ (ವೇಯ್ಟ್ ಲಿಫ್ಟಿಂಗ್), ನವನೀತ್ ಗೌತಮ್ (ಕಬಡ್ಡಿ), ರೋಹಿತ್ ಬಾಕರ್ (ಬ್ಯಾಡ್ಮಿಂಟನ್, ಅಂಗವಿಕಲರ ವಿಭಾಗ). ಧ್ಯಾನ್ ಚಂದ್ ಪ್ರಶಸ್ತಿ: ವರಿಂದರ್ ಸಿಂಗ್ (ಹಾಕಿ), ಶಂಷೇರ್ ಸಿಂಗ್ (ಕಬಡ್ಡಿ), ರಾಜೇಂದ್ರ ಸಿಂಗ್ (ಕುಸ್ತಿ); ದ್ರೋಣಾಚಾರ್ಯ ಪ್ರಶಸ್ತಿ: ಆರ್. ಡಿ. ಸಿಂಗ್ (ಅಂಗವಿಕಲರ ಅಥ್ಲೆಟಿಕ್ಸ್), ದಾಮೋದರನ್ ಚಂದ್ರಲಾಲ್ (ಬಾಕ್ಸಿಂಗ್), ಕೊನೇರು ಅಶೋಕ್ (ಚೆಸ್).

2007: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗ ಪ್ರತಿವರ್ಷ ಉತ್ತಮ ಶಿಕ್ಷಕರಿಗೆ ನೀಡುವ ರಾಷ್ಟ್ರಪ್ರಶಸ್ತಿಗೆ ಗುಲ್ಬರ್ಗದ ಕಪನೂರ ನೆಹರು ಗಂಜ್ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ದೇವೇಂದ್ರಪ್ಪ ಎಸ್. ತೋಟನಹಳ್ಳಿ ಅವರು ಆಯ್ಕೆಯಾದರು.

2007: ಶಾಬೇ ಬರಾತ್ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಲಾರಿ ಹರಿದು ನಾಲ್ವರು ಯುವಕರು ಮೃತಪಟ್ಟ ಘಟನೆಯಿಂದ ರೊಚ್ಚಿಗೆದ್ದ ಜನ ಬೀದಿಗೆ ಇಳಿದು ಹಿಂಸಾಕೃತ್ಯದಲ್ಲಿ ತೊಡಗಿದ್ದರಿಂದ ಆಗ್ರಾದಲ್ಲಿ ವ್ಯಾಪಕ ಹಿಂಸಾಕೃತ್ಯ ಸಂಭವಿಸಿ ಒಬ್ಬ ಬಾಲಕ ಗೋಲಿಬಾರಿಗೆ ಬಲಿಯಾದ.

2006: ಆಲಮಟ್ಟಿ ಜಲಾಶಯದ ಮುಂಭಾಗದ ಸೇತುವೆಯಿಂದ ಮ್ಯಾಕ್ಸಿಕ್ಯಾಬ್ ಒಂದು ಕೃಷ್ಣಾ ನದಿಗೆ ಉರುಳಿ ಬಿದ್ದ ಪರಿಣಾಮವಾಗಿ 29 ಜನ ಜಲ ಸಮಾಧಿಯಾದರು. ವರ್ಷದ ಹಿಂದೆ ನಡೆದಿದ್ದ ಸೋದರರ ಮದುವೆಯ ಬಾಸಿಂಗವನ್ನು ಕೂಡಲ ಸಂಗಮದಲ್ಲಿ ಬಿಟ್ಟು ಆಲಮಟ್ಟಿ ವೀಕ್ಷಣೆಗಾಗಿ ಹೊರಟಿದ್ದ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಜನರಿದ್ದ ತಂಡವನ್ನು ಒಯ್ಯುತ್ತಿದ್ದ ಈ ಟೆಂಪೋದಲ್ಲಿ 32 ಜನರಿದ್ದರು. ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದಾಗ ಟೆಂಪೋ ನಿಯಂತ್ರಣ ತಪ್ಪಿ ನದಿಗೆ ಉರುಳಿದ್ದು ಈ ದುರಂತಕ್ಕೆ ಕಾರಣ.

2006: ಆಧುನಿಕ ವಚನ ರಚನೆಗೆ ಗಣನೀಯ ಕೊಡುಗೆ ನೀಡಿದ ಬೆಂಗಳೂರಿನ ಅನ್ನದಾನಯ್ಯ ಪುರಾಣಿಕ, ವಚನ ಸಂಗೀತದ ಸುಧೆ ಹರಿಸಿದ ಧಾರವಾಡದ ಪಂಡಿತ ಸೋಮನಾಥ ಮರಡೂರ, ಸಂಶೋಧನಾ ಕ್ಷೇತ್ರದ್ಲಲಿ ಸೇವೆ ಸ್ಲಲಿಸಿದ ಧಾರವಾಡದ ಸಂಶೋಧಕ ವೀರಣ್ಣ ರಾಜೂರ ಅವರಿಗೆ ಪ್ರತಿಷ್ಠಿತ ರಮಣಶ್ರೀ ಪ್ರಶಸ್ತಿ ಪ್ರಕಟಿಸಲಾಯಿತು.

2006: ಅಂಥ್ರಾಕ್ಸ್ ವೈರಾಣು ದೇಹದ ಮೇಲೆ ದಾಳಿ ಮಾಡಲಾಗದಂತೆ ತಡೆಯಬಲ್ಲ ಹಾಗೂ ಸಾರ್ಸ್ ಸೋಂಕು ಹಾಗೂ ಏಡ್ಸ್ನಂತಹ ರೋಗಗಳನ್ನು ತಡೆಗಟ್ಟಬಲ್ಲಂತಹ ರೋಗ ನಿರೋಧಕವನ್ನು ಪತ್ತೆ ಹಚುವಲ್ಲಿ ಯಶಸ್ವಿಯಾಗಿರುವುದಾಗಿ ನ್ಯೂಯಾರ್ಕಿನ ರೆನ್ಸೆಲೀರ್ ಪಾಲಿಟೆಕ್ನಿಕ್ ಸಂಸ್ಥೆ ಪ್ರಕಟಿಸಿತು. ಸಂಸ್ಥೆಯ ರವಿಕಾನೆ ಮತ್ತು ಸಹೋದ್ಯೋಗಿಗಳು ಮೊದಲು ಈ ಮದ್ದನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದು ಅವು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಂಥ್ರಾಕ್ಸ್ ನಿಂದ ಪಾರಾದವು ಎಂದು ಬಿಬಿಸಿಯ ಆನ್ ಲೈನ್ ಸಂಚಿಕೆ ವರದಿ ಮಾಡಿತು.

2006: ಖ್ಯಾತ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಆಟಗಾರ ಕರ್ನಾಟಕದ ಪಂಕಜ್ ಅಡ್ವಾಣಿ ಅವರಿಗೆ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನವದೆಹಲಿಯಲ್ಲಿ ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು.

2006: ಜಪಾನಿನ ರಕ್ಷಣೆ, ಪಶ್ಚಿಮ ಫೆಸಿಫಿಕ್ನ ಸ್ಥಿರತೆ ಹಾಗೂ ಶಾಂತಿಗೆ ಶ್ರಮಿಸುವ ಉದ್ದೇಶದೊಂದಿಗೆ ಅಮೆರಿಕದ ಕ್ಷಿಪಣಿ ನಿರೋಧಕ ಯುದ್ಧ ನೌಕೆ `ಯುಎಸ್ಎಸ್ ಶಿಲೋಹ್' ಜಪಾನಿನ ಯೊಕೊಸುಕಾ ಬಂದರಿಗೆ ಆಗಮಿಸಿತು. 360 ಸಿಬ್ಬಂದಿಯನ್ನು ಹೊಂದಿರುವ ಈ ನೌಕೆಯ ತೂಕ 10,000 ಟನ್ನುಗಳು. ನೌಕೆಯಿಂದ ಆಕಾಶಕ್ಕೆ ಚಿಮ್ಮುವ ಎಸ್ ಎಂ -3 ಕ್ಷಿಪಣಿ ನಿರೋಧಕಗಳ ಮೂಲಕ ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.

1994: ಖ್ಯಾತ ಪತ್ರಕರ್ತ ತುಷಾರ್ ಕ್ರಾಂತಿ ಘೋಷ್ ನಿಧನ.

1982: ಮಾತಾ ಆನಂದ ಮಯಿ ನಿಧನ.

1974: ಚೌಧರಿ ಚರಣ್ ಸಿಂಗ್ ಅಧ್ಯಕ್ಷತಯಲ್ಲಿ ಲೋಕದಳ ಅಸ್ತಿತ್ವಕ್ಕೆ.

1926: ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ (29-8-1926ರಿಂದ 12-1-2004) ಅವರು 1926ರಲ್ಲಿ ಈದಿನ ಜನಿಸಿದರು. ಕರ್ನಾಟಕದ ಕಾಂಗ್ರೆಸ್ಸೇತರ ಸರ್ಕಾರದ ಮೊದಲ ಮುಖ್ಯಮಂತ್ರಿಯಾದ ಹೆಗಡೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದಕ್ಕೆ ಮೊದಲು ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಸರ್ಕಾರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರು. ಐದು ದಶಕಗಳ ಕಾಲ ರಾಷ್ಟ್ರ ಹಾಗೂ ರಾಜ್ಯದ ರಾಜಕೀಯ ರಂಗದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಹೆಗಡೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದರು.

1915: ಸಾಹಿತಿ ಗುರುದೇವಿ ಹಿರೇಮಠ ಜನನ.

1913: ಸಾಹಿತ್ಯವಲಯದಲ್ಲಿ ಎನ್ಕೆ ಎಂದೇ ಖ್ಯಾತರಾದ ಎನ್ಕೆ ಕುಲಕರ್ಣಿ (20-8-1913ರಿಂದ 23-4-2005) ಅವರು ಕೃಷ್ಣರಾವ್ ನರಸಿಂಹ ಕುಲಕರ್ಣಿ - ಸೋನಕ್ಕ ದಂಪತಿಯ ಮಗನಾಗಿ ಗದಗದಲ್ಲಿ ಜನಿಸಿದರು. ಧಾರವಾಡದ ಮಂದಿಗೆ `ನಾನೀಕಾಕ' ಎಂದೇ ಆತ್ಮೀಯರಾಗಿದ್ದ ಎನ್ಕೆ ಹಾಸ್ಯ ಪ್ರಹಸನ, ಕಾದಂಬರಿ, ನಗೆ ಲೇಖನ, ಲಲಿತ ಪ್ರಬಂಧ, ಜೀವನ ಚರಿತ್ರೆ ಇತ್ಯಾದಿ ವೈವಿಧ್ಯಮಯ ಬರವಣಿಗೆಯ ಕೃಷಿ ನಡೆಸಿದವರು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಕೇಂದ್ರ ಸರ್ಕಾರದ ಬಹುಮಾನ, ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೋರೂರು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.
1905: ಭಾರತದ ಖ್ಯಾತ ಹಾಕಿ ಆಟಗಾರ ಧ್ಯಾನ್ ಚಂದ್ (1905-1979) ಜನ್ಮದಿನ. ಇವರ ಜನ್ಮದಿನವನ್ನು ಭಾರತದ್ಲಲಿ `ರಾಷ್ಟ್ರೀಯ ಕ್ರೀಡಾ ದಿನ'ವಾಗಿ ಆಚರಿಸಲಾಗುತ್ತದೆ. ಇವರ ಹಾಕಿ ಆಟದ ಕೌಶಲ್ಯಗಳು ಮ್ಯಾಜಿಕ್ಕಿನಂತೆ ಭಾಸವಾಗುತ್ತಿದ್ದವು. ವಿದೇಶೀ ತಂಡಗಳು ಅವರ ಹಾಕಿ ಸ್ಟಿಕ್ಕಿನಲ್ಲಿ `ಅಯಸ್ಕಾಂತ' ಮತ್ತು `ಗೋಂದು/ ಮರವಜ್ರ'ಕ್ಕಾಗಿ ತಡಕಾಟ ನಡೆಸಿದ್ದೂ ಉಂಟು. 1936ರ ಬಲರ್ಿನ್ ಒಲಿಂಪಿಕ್ಸ್ ಬಳಿಕ ಜರ್ಮನಿಗೆ ವಲಸೆ ಬಂದದ್ದೇ ಆದರೆ ಕರ್ನಲ್ ಹುದ್ದೆ ನೀಡುವುದಾಗಿ ಹಿಟ್ಲರ್ ಅವರಿಗೆ ಆಹ್ವಾನ ಕೂಡಾ ನೀಡಿದ್ದ.

1896: ಅಮೆರಿಕಕ್ಕೆ ಭೇಟಿ ನೀಡಿದ ಚೀನಾದ ರಾಯಭಾರಿ ಲಿ ಹಂಗ್-ಚಾಂಗ್ ಅವರಿಗಾಗಿ ಚೀನಾ- ಅಮೆರಿಕದ `ಚಾಪ್-ಸ್ವೇ' ಹೆಸರಿನ ಹೊಚ್ಚ ಹೊಸ ಭಕ್ಷ್ಯವನ್ನು ನ್ಯೂಯಾರ್ಕ್ ನಗರದಲ್ಲಿ ತಯಾರಿಸಲಾಯಿತು.

1882: ಲಂಡನ್ನಿನ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವು ಇಂಗ್ಲೆಂಡನ್ನು ಮೊದಲ ಬಾರಿಗೆ ಸೋಲಿಸಿತು. ಈ ಪಂದ್ಯವನ್ನು `ಆಷಸ್ ಟೆಸ್ಟ್' (ಬೂದಿ ಪಂದ್ಯ!) ಎಂದು ಕರೆಯಲಾಯಿತು. ಪಂದ್ಯ ಮುಗಿದ ಒಂದು ದಿನದ ಬಳಿಕ `ಸ್ಪೋರ್ಟಿಂಗ್ ಟೈಮ್' ಪತ್ರಿಕೆ `ಇನ್ ಮೆಮೋರಿಯಮ್' ವಿಭಾಗದಲ್ಲಿ ಇಂಗ್ಲಿಷ್ ಕ್ರಿಕೆಟ್ಟಿನ ಸಾವು ಕುರಿತ ಪ್ರಕಟಣೆಯನ್ನು ಪ್ರಕಟಿಸಿತು. `ಶವವನ್ನು ದಹಿಸಲಾಯಿತು ಮತ್ತು ಭಸ್ಮವನ್ನು ಆಸ್ಟ್ರೇಲಿಯಾಕ್ಕೆ ಒಯ್ಯಲಾಯಿತು' ಎಂದು ಅದು ಬರೆದಿತ್ತು.

1842: `ನಾನ್ ಕಿಂಗ್ ಒಪ್ಪಂದ'ದ ಮೂಲಕ ಚೀನಾ ಮತ್ತು ಬ್ರಿಟನ್ ಮಧ್ಯೆ ನಡೆಯುತ್ತಿದ್ದ ವ್ಯಾಪಾರಿ ಘರ್ಷಣೆ ಕೊನೆಗೊಂಡಿತು. ಈ ಘರ್ಷಣೆ ಮೊದಲ `ಅಫೀಮು ಯುದ್ಧ' (1839-42) ಎಂದೇ ಖ್ಯಾತಿ ಪಡೆದಿತ್ತು. ಒಪ್ಪಂದದ ಷರತ್ತುಗಳ ಪ್ರಕಾರ ಚೀನಾವು ಹಾಂಕಾಂಗ್ ಭೂಪ್ರದೇಶವನ್ನು ಬಿಟ್ಟು ಕೊಟ್ಟದ್ದಲ್ಲದೆ, ಐದು ಬಂದರುಗಳಲ್ಲಿ ವ್ಯಾಪಾರ ನಡೆಸಲು ಬ್ರಿಟಿಷರಿಗೆ ಅವಕಾಶ ನೀಡಿತು. ಒಪ್ಪಂದಕ್ಕೆ ಎಚ್ ಎಂಎಸ್ ಕಾರ್ನವಾಲಿಸ್ ಹಡಗಿನಲ್ಲಿ ಸಹಿ ಮಾಡಲಾಯಿತು. ಈ ಹಡಗನ್ನು 19ನೇ ಶತಮಾನದಲ್ಲಿ ಭಾರತದಲ್ಲಿ ಖ್ಯಾತಿ ಪಡೆದಿದ್ದ ಮುಂಬೈಯ ವಾಡಿಯಾಸ್ ಹಡಗು ನಿರ್ಮಾಣ ಸಂಸ್ಥೆ ಬಾಂಬೆ ಡಾಕ್ಸ್ ನಿರ್ಮಿಸಿತ್ತು.

1831: ಮೂಲ ವಿದ್ಯುತ್ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಸಮಬಲದ ಎರಡನೇ ಸರ್ಕಿಟ್ ವಿದ್ಯುತ್ ಪ್ರವಾಹ ಕುರಿತ ತನ್ನ ಸಂಶೋಧನೆಗಳನ್ನು ಮೈಕೆಲ್ ಫ್ಯಾರಡೆ ನಡೆಸಿದ. ಈ ವರ್ಷದಲ್ಲೇ ನಂತರ ಅಯಸ್ಕಾಂತ (ಮ್ಯಾಗ್ನೆಟ್) ಬಳಸಿ ನಡೆದ ಪ್ರಯೋಗಗಳು ಮೊತ್ತ ಮೊದಲ `ಡೈನಮೊ' ಅಭಿವೃದ್ಧಿಗೆ ದಾರಿ ಮಾಡಿಕೊಟ್ಟವು.

Thursday, August 28, 2008

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!


Yaksha Vaibhava in Akka ...!

For the first time in the history of Yakshagana, full fledged troop of nine members led by S.N. Panjaje is participating in Akka Conference in America with the sponsorship of Union Government. Some time back Mr. Panjaje and his friends played 'Chende' in front of Mahatma Gandhi Statue in Bangalore to press their demand to create separate academy for Yakshagana. Nethrakere Udaya Shankara details about the Panjaje venture.

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...!

ಯಕ್ಷಗಾನಕ್ಕೊಂದು ಪ್ರತ್ಯೇಕ ಅಕಾಡೆಮಿ ಬೇಕು ಎಂದು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಚೆಂಡೆ ಭಾರಿಸಿ ಗಮನ ಸೆಳೆದಿದ್ದ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷ ಎಸ್.ಎನ್. ಪಂಜಾಜೆ ಮತ್ತು ಅವರ ಗೆಳೆಯರು ಯಕ್ಷರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ 'ಅಕ್ಕ' ಸಮ್ಮೇಳನದಲ್ಲಿ ಯಕ್ಷಗಾನದ ಸಮಗ್ರ ಕಂಪು ಪಸರಿಸಲು ದಾಂಗುಡಿ ಇಟ್ಟಿದ್ದಾರೆ..

ನೆತ್ರಕೆರೆ ಉದಯಶಂಕರ

ಯಕ್ಷರಂಗದ ಇತಿಹಾಸದಲ್ಲೇ ಇದು ಮೊದಲು ಎಂದರೆ ತಪ್ಪಲ್ಲ. ಪೂರ್ಣ ಪ್ರಮಾಣದ ಯಕ್ಷಗಾನ ತಂಡವು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಅಮೆರಿಕದ ಚಿಕಾಗೋ ನಗರಕ್ಕೆ ದಾಂಗುಡಿ ಇಡುತ್ತಿದೆ. ಅಮೆರಿಕದಲ್ಲಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಚೆಂಡೆ ಸದ್ದನ್ನು ಮಾರ್ದನಿಸುತ್ತಿದೆ.

ಎಸ್.ಎನ್. ಪಂಜಾಜೆ ನೇತೃತ್ವದ ತೆಂಕುತಿಟ್ಟಿನ ಯಕ್ಷಗಾನ ತಂಡವು ಸೆಪ್ಟೆಂಬರ್ 29, 30 ಮತ್ತು 31ರಂದು 'ಅಕ್ಕ ಸಮ್ಮೇಳನ' ಎಂದೇ ಖ್ಯಾತವಾಗಿರುವ ಚಿಕಾಗೋದ ಐದನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ಎರಡು ಅದ್ಧೂರಿಯ ಪ್ರದರ್ಶನಗಳನ್ನು ನೀಡಲಿದೆ.

ಇಂತಹ ಸಮ್ಮೇಳನಗಳಿಗೆ ಸರ್ಕಾರ ಕಲಾವಿದರನ್ನು ಸಾಮಾನ್ಯವಾಗಿ ವ್ಯಕ್ತಿಗತ ನೆಲೆಯಲ್ಲಿ ಕಳುಹಿಸಿಕೊಡುವುದೇ ಹೆಚ್ಚು. ಪೂರ್ಣ ಪ್ರಮಾಣದ ಯಕ್ಷಗಾನ ತಂಡ ಎಂದರೆ ಪಾತ್ರಧಾರಿಗಳು ಮಾತ್ರವೇ ಅಲ್ಲ, ಭಾಗವತರು, ಚೆಂಡೆವಾದಕರು, ಮದ್ದಳೆ, ಹಾರ್ಮೋನಿಯಂ ವಾದಕರೂ ಬೇಕು. ಇಷ್ಟೆಲ್ಲ ಮಂದಿಯನ್ನು ಒಳಗೊಂಡ ತಂಡವನ್ನು ವಿದೇಶಕ್ಕೆ ಕಳುಹಿಸಿಕೊಡುವ ಯತ್ನಕ್ಕೆ ಖರ್ಚು ಹೆಚ್ಚಾಗುತ್ತದೆ. ಹೀಗಾಗಿ ಅಧಿಕಾರಿಗಳು ಅಂತಹ ಯತ್ನಕ್ಕೆ ಕೈಹಾಕುವುದೇ ಕಡಿಮೆ.

'ಅಕ್ಕ' ಸಮ್ಮೇಳನದಲ್ಲಿ ಒಂದಿಬ್ಬರನ್ನು ಕಳುಹಿಸಿ ಕೊಡುವುದರಿಂದ ಯಕ್ಷಗಾನದ ಸಮಗ್ರ ಪರಿಚಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಡಲು ಸಾಧ್ಯವಿಲ್ಲ ಎಂಬುದು ಎಸ್.ಎನ್.ಪಂಜಾಜೆ ಅಭಿಪ್ರಾಯ. ಹೀಗಾಗಿ ಪೂರ್ಣ ಪ್ರಮಾಣದ ತಂಡವೊಂದನ್ನು ಒಯ್ಯಲು ಪ್ರಾಯೋಜಕತ್ವ ಪಡೆಯಬೇಕು ಎಂದು ಅವರು ಯತ್ನ ನಡೆಸಿದ್ದರು.

ರಾಜ್ಯ ಮಟ್ಟದಲ್ಲಿ ಅವರ ಯತ್ನ ಸಫಲವಾಗಲಿಲ್ಲ. ಈ ವರ್ಷ ಅಮೆರಿಕದ ಅಕ್ಕ ಸಮ್ಮೇಳನದಲ್ಲಿ ಯಕ್ಷಗಾನದ ಸೊಬಗು ಪರಿಚಯಿಸುವ ವ್ಯಕ್ತಿಗತ ಅವಕಾಶ ಸಿಕ್ಕಿದ್ದು ಉತ್ತರ ಕನ್ನಡದ ಕಡತೋಕದ ಎಳೆಯ ಪ್ರತಿಭೆ ಅರ್ಪಿತಾ ಹೆಗಡೆಗೆ. ಪುಟ್ಟ ವಯಸ್ಸಿನಲ್ಲೇ ತನ್ನ ಪ್ರತಿಭೆಯನ್ನು ಹೊರಗೆಡವಿದ ಈಕೆ ಮೊದಲ ಪಾತ್ರ ಪ್ರದರ್ಶಿಸಿದ್ದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಸಮ್ಮುಖದಲ್ಲಿ.

ಸ್ವಾಮೀಜಿ ಸಮ್ಮುಖದಲ್ಲಿ ಪಾತ್ರ ಪ್ರದರ್ಶಿಸಿದ ಬಳಿಕ ಈಕೆ ಬಡಗು ತಿಟ್ಟಿನ ಶ್ರೇಷ್ಠ ಕಲಾವಿದರಾದ ಚಿಟ್ಟಾಣಿ, ಯಾಜಿ, ಕೊಂಡದಕುಳಿ ಅವರೊಂದಿಗೆ ಹೆಜ್ಜೆ ವೇಷ ಹಾಕಿದ್ದಾಳೆ. ಅಭಿಮನ್ಯು, ಕೃಷ್ಣ, ಧರ್ಮಾಂಗದ, ಬಭ್ರುವಾಹನ ಮುಂತಾದ ಪಾತ್ರಗಳನ್ನು ಪ್ರದರ್ಶಿಸಿ ಶಹಭಾಸ್ ಗಿರಿ ಪಡೆದಿದ್ದಾಳೆ. ಇದೀಗ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲೂ ಆಯ್ಕೆ ಆಗಿದ್ದಾಳೆ. ಆಕೆಗೆ ಅಭಿನಂದನೆ ಹೇಳಲೇ ಬೇಕು.

ಕರಾವಳಿಯ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಯಕ್ಷಗಾನದಲ್ಲಿ ಬಡಗು ತಿಟ್ಟಿಗೆ ಇರುವಷ್ಟೇ ಪ್ರಾಶಸ್ತ್ಯ ತೆಂಕು ತಿಟ್ಟಿಗೂ ಇದೆ. ಆದರೆ ವಿದೇಶಗಳಲ್ಲಿ ಯಕ್ಷಗಾನ ಅಂದೊಡನೆ ಜನರ ಕಣ್ಣಿಗೆ ಕಟ್ಟುವುದು ಬಡಗು ತಿಟ್ಟು. ಇದಕ್ಕೆ ಕಾರಣ ತೆಂಕುತಿಟ್ಟಿನ ಯಕ್ಷಗಾನ ಕಲಾವಿದರಿಗೆ ಬಡಗುತಿಟ್ಟಿನ ಕಲಾವಿದರಷ್ಟು ಪ್ರೋತ್ಸಾಹ ಸಿಕ್ಕದೇ ಇರುವುದು ಎಂದರೆ ತಪ್ಪಲ್ಲ.

'ಅಕ್ಕ' ಸಮ್ಮೇಳನದಲ್ಲಾದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನದ ಸಮಗ್ರ ಸ್ವರೂಪವನ್ನು ನೀಡಲು ಸಾಧ್ಯವಾಗುವಂತೆ ಪೂರ್ಣ ಪ್ರಮಾಣದ ತೆಂಕು ತಿಟ್ಟಿನ ತಂಡವನ್ನು ಒಯ್ಯಬೇಕು ಎಂಬ ಪ್ರಯತ್ನಕ್ಕೆ ಪಂಜಾಜೆ ಕೈ ಹಾಕಿದ್ದು ಈ ಹಿನ್ನೆಲೆಯಲ್ಲೇ.

ರಾಜ್ಯದ ಅಧಿಕಾರಿಗಳ ವಲಯದಲ್ಲಿ ಕಂಬ ಕಂಬ ಸುತ್ತಿದರೂ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಇಡೀ ತಂಡವನ್ನು ಒಯ್ಯುವ ಸಾಹಸಕ್ಕೆ ಶಿಫಾರಸು ಮಾಡುವ 'ಧೈರ್ಯ' ಕೂಡಾ ಅಧಿಕಾರಿಗಳಿಗೆ ಬರಲಿಲ್ಲ.

ಆದರೆ ಪಂಜಾಜೆ ಸುಮ್ನನೇ ಕುಳಿತುಕೊಳ್ಳುವವರಲ್ಲ. ರಾಜ್ಯ ಮಟ್ಟದಲ್ಲಿ ಆಗದಿದ್ದರೆ ರಾಷ್ಟ್ರಮಟ್ಟದಲ್ಲಿ ಇಂತಹ ಪ್ರಯತ್ನಕ್ಕೆ ಏಕೆ ಕೈಹಾಕಬಾರದು? ಪಂಜಾಜೆ ಕಾರ್ಯಮಗ್ನರಾಗಿಯೇ ಬಿಟ್ಟರು. ಅವರ ಪ್ರಯತ್ನಗಳಿಗೆ ಆಸ್ಕರ್ ಫರ್ನಾಂಡಿಸ್ ಭುಜ ಕೊಟ್ಟರು. ಈ ಎಲ್ಲ ಯತ್ನದ ಫಲವಾಗಿ ಒಂಬತ್ತು ಮಂದಿಯ 'ತೆಂಕು ತಿಟ್ಟು ಯಕ್ಷಗಾನ ತಂಡ'ಕ್ಕೆ 'ಅಕ್ಕ'ದಲ್ಲಿ ಪಾಲ್ಗೊಳ್ಳುವ ಯೋಗ ಲಭಿಸಿತು. ಕೇಂದ್ರ ಸರ್ಕಾರದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು ಇಡೀ ತಂಡದ ಪ್ರವಾಸದ ಪ್ರಾಯೋಜಕತ್ವ ವಹಿಸಿಕೊಂಡಿತು.


ಈ ತಂಡ ಸಮ್ಮೇಳನದಲ್ಲಿ 'ನರಕಾಸುರ ವಧೆ' ಮತ್ತು 'ಜಾಂಬವತಿ ಕಲ್ಯಾಣ' ಈ ಎರಡು ಪ್ರಸಂಗಗಳನ್ನು ಪ್ರಸ್ತುತಪಡಿಸಲಿದೆ. ಎಸ್.ಎನ್. ಪಂಜಾಜೆ ಅವರ ಜೊತೆಗೆ ಕಲಾವಿದರಾದ ಪಿ.ವಿ. ಪರಮೇಶ್, ದೀಪಕರಾವ್, ಕಾರ್ತಿಕ್ ಕೊರ್ಡೆಲು, ನರೇಂದ್ರ ಕುಮಾರ್, ಶ್ರೀಮತಿ ಮನೋರಮಾ, ಕರುಣಾಕರ ಶೆಟ್ಟಿ, ಗೋಪಾಲಕೃಷ್ಣ ನಾವಡ, ಕೋಳ್ಯೂರು ಭಾಸ್ಕರ 'ಅಕ್ಕ ಅಂಗಣ'ದಲ್ಲಿ 'ರಿಂಗಣ' ಹಾಕಲಿದ್ದಾರೆ.

ಅತ್ಯಂತ ಸೌಮ್ಯ ಸ್ವಭಾವದ ಎಸ್.ಎನ್. ಪಂಜಾಜೆ ಸಾಮಾನ್ಯದವರೇನೂ ಅಲ್ಲ. ಬಹುಮುಖ ಪ್ರತಿಭೆಯ ಇವರು ಏನಾದರೂ ಕೆಲಸ ಮಾಡಬೇಕು ಅಂದುಕೊಂಡರೆ, ಅದನ್ನು ಸಾಧಿಸದೇ ಸುಮ್ಮನೇ ಬಿಡುವವರಲ್ಲ. ಇವರ ನೇತೃತ್ವದ ಯಕ್ಷಗಾನ ತಂಡ 2003ರಲ್ಲಿ ಬರ್ಲಿನ್ ಉತ್ಸವದಲ್ಲಿ ಪಾಲ್ಗೊಂಡದ್ದಷ್ಟೇ ಅಲ್ಲ ವಿಮರ್ಶಕರ ಗಮನವನ್ನೂ ಸೆಳೆದಿತ್ತು ಎಂಬುದು ಸಣ್ಣ ಮಾತಲ್ಲ.

ಯಕ್ಷಗಾನಕ್ಕೊಂದು 'ಪ್ರತ್ಯೇಕ ಅಕಾಡೆಮಿ' ಸ್ಥಾಪನೆಗೆ ಸರ್ಕಾರ ಈಗ ತತ್ವಶಃ ಒಪ್ಪಿಕೊಂಡಿದೆಯಲ್ಲ? ಈ ಪ್ರತ್ಯೇಕ ಯಕ್ಷಗಾನ ಅಕಾಡೆಮಿ ಬೇಕೆಂದು ಮೊತ್ತ ಮೊದಲಿಗೆ ಸದ್ದೆಬ್ಬಿಸಿದವರು ಇದೇ ಪಂಜಾಜೆ ಮತ್ತು ಅವರ ಗೆಳೆಯರು. ಅವರು ಹೊರಡಿಸಿದ್ದ ಸದ್ದು ಅಂತಿತಹುದಲ್ಲ, ಅದು ಚೆಂಡೆಯ ಸದ್ದು..!

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆಯ ಎದುರು ಕೆಲ ಸಮಯದ ಹಿಂದೆ ಒಂದು ಮುಂಜಾನೆ ಇವರು ಚೆಂಡೆ ಭಾರಿಸುತ್ತಾ ನಿಂತಿದ್ದರು. ಬಾಯಲ್ಲಿ ಏನೂ ಹೇಳಲಿಲ್ಲ. ಬ್ಯಾನರ್ ಹೇಳುತ್ತಿತ್ತು: ಯಕ್ಷಗಾನಕ್ಕೆ ಬೇಕು ಪ್ರತ್ಯೇಕ ಅಕಾಡೆಮಿ..!

ಬಡವ, ಬಲ್ಲಿದ, ಪಂಡಿತ, ಪಾಮರ ಎಂಬ ಭೇದವಿಲ್ಲದೆ ಸಕಲರಿಗೂ ಮುದ ನೀಡುವ ಯಕ್ಷಗಾನ ಎಂಬ ಸಮಷ್ಠಿ ಕಲೆಯಲ್ಲಿ ಪ್ರಕಾರಗಳು ಹಲವಿವೆ. ಪ್ರಮುಖವಾಗಿ ಕಂಡು ಬರುವುದು ತೆಂಕುತಿಟ್ಟು, ಬಡಗು ತಿಟ್ಟು. ಆದರೆ ಕರ್ನಾಟಕದ ಉದ್ದಗಲಕ್ಕೂ ಮೂಡಲಪಾಯ, ದೊಡ್ಡಾಟ, ಕೃಷ್ಣ ಪಾರಿಜಾತ, ಘಟ್ಟದ ಕೋರೆ, ಬೊಂಬೆಯಾಟ ಇತ್ಯಾದಿ ಹೆಸರಿನಲ್ಲಿ ಮಾತ್ರವೇ ಅಲ್ಲ, ದಕ್ಷಿಣ ಕನ್ನಡ- ಉತ್ತರ ಕನ್ನಡದಲ್ಲಿ ಜನಪ್ರಿಯವಾಗಿರುವ ಕೇವಲ ಪದ್ಯ- ಮಾತಿನಲ್ಲೇ ಕತೆಯನ್ನು ಕಣ್ಣಿಗೆ ಕಟ್ಟಿಕೊಡುವ 'ತಾಳಮದ್ದಲೆ' ಕೂಡಾ ಯಕ್ಷಗಾನದ ಪ್ರಕಾರದಲ್ಲಿ ಒಂದು.

ಯಕ್ಷಗಾನದ ಈ ಎಲ್ಲ ಪ್ರಕಾರಗಳ ಪರಿಚಯ ಮಾಡಿಕೊಡಲಿಕ್ಕಾಗಿ ವರ್ಷದ ಹಿಂದೆ ಅಂದರೆ 2007ರ ಜೂನ್ 8, 9 ಮತ್ತು 10ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನವೊಂದನ್ನು ಸಂಘಟಿಸಿದ್ದು ಇದೇ ಎಸ್. ಪಂಜಾಜೆ ಅಧ್ಯಕ್ಷತೆಯ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಸಂಸ್ಥೆ. ಈ ಸಂದರ್ಭದಲ್ಲಿ ಹೊರತರಲಾದ 'ಕಿರೀಟ' ಸ್ಮರಣ ಸಂಚಿಕೆ ಯಕ್ಷಗಾನದ ಹಲವು ಮಗ್ಗುಲುಗಳನ್ನು ಪರಿಚಯಿಸುವ ಒಂದು ಅಪೂರ್ವ ಸಂಚಿಕೆ.

ಇದಕ್ಕೂ ಮೊದಲು ಯಕ್ಷಗಾನದ ಅಭಿವೃದ್ಧಿ ಸಲುವಾಗಿಯೇ ಅವರು ಗದಗ ಮತ್ತು ಬೆಂಗಳೂರಿನಲ್ಲಿ ಇದೇ ಮಾದರಿಯ ಎರಡು ಸಮ್ಮೇಳನಗಳನ್ನು ಸಂಘಟಿಸಿದ್ದರು. ಉಡುಪಿಯ ಸಮ್ಮೇಳನ ಸಂಘಟಿಸುವಲ್ಲಿ ಅವರೊಂದಿಗೆ ಉಡುಪಿ ಶ್ರೀಕೃಷ್ಣ ಮಠ ಮತ್ತು ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಸಹಯೋಗ ನೀಡಿದ್ದವು.

ಈಗ ಯಕ್ಷಗಾನದ ಮಹಿಮೆಯನ್ನು ಅಮೆರಿಕದಲ್ಲಿ ಮೊಳಗಿಸಲು ಹೊರಟಿದ್ದಾರೆ ಪಂಜಾಜೆ ಮತ್ತು ಅವರ ಮಿತ್ರರು. ಅವರ ಯತ್ನ ಫಲಪ್ರದವಾಗಲಿ, ಕನ್ನಡ ನಾಡಿನ ಹೆಮ್ಮೆಯ ಯಕ್ಷಗಾನ ಕಲೆಯ ಸಂಪೂರ್ಣ ಕಂಪು ಅಮೆರಿಕದಲ್ಲಿ ಪಸರಿಸಿ ಅದೊಂದು ಒಂದು ಅಚ್ಚಳಿಯದ ದಾಖಲೆಯಾಗಲಿ ಎಂದು 'ಪರ್ಯಾಯ'
ಹಾರೈಸುತ್ತದೆ.

ಇಂದಿನ ಇತಿಹಾಸ History Today ಆಗಸ್ಟ್ 28

ಇಂದಿನ ಇತಿಹಾಸ

ಆಗಸ್ಟ್ 28

ಒರಿಸ್ಸಾ ರಾಜ್ಯದ ಅಂಗುಲ್ ಜಿಲ್ಲೆಯು ತಲ್ಚೇರಿನಲ್ಲಿ ಸ್ಥಾಪಿಸಲಾಗಿರುವ ದೇಶದ ಅತಿ ದೊಡ್ಡ ಉಷ್ಣವಿದ್ಯುತ್ ಸ್ಥಾವರವನ್ನು ಪ್ರಧಾನಿ ಮನಮೋಹನ್ ಸಿಂಗ್ ದೇಶಕ್ಕೆ ಸಮರ್ಪಿಸಿದರು. ಮಳೆಯ ಕಾರಣದಿಂದ ಸ್ಥಾವರ ಸ್ಥಳಕ್ಕೆ ತೆರಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರನ್ಸ್ ಮೂಲಕ ಈ ಕಾರ್ಯವನ್ನು ಅವರು ರಾಜಧಾನಿ ಭುವನೇಶ್ವರದಿಂದಲೇ ನೆರವೇರಿಸಿದರು.

2007: ಕ್ರೋಯೇಷಿಯಾದಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದ ಮಾನವ್ ಜಿತ್ ಸಿಂಗ್ ಸಂಧು ಅವರು ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಗೆ ಆಯ್ಕೆಯಾದರು. ಬೆಂಗಳೂರಿನ `ಟಾಟಾ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ'ಯಲ್ಲಿ ತರಬೇತಿ ಪಡೆಯುತ್ತಿರುವ ಪಿಎಸ್ ಪಿಬಿ ಆಟಗಾರ ಚೇತನ್ ಆನಂದ್ ಅವರು ಬ್ಯಾಡ್ಮಿಂಟನ್ ರಂಗದಲ್ಲಿ ಈ ವರ್ಷ ತೋರಿದ ಸಾಧನೆಗಾಗಿ `ಅರ್ಜುನ' ಪ್ರಶಸ್ತಿಗೆ ಆಯ್ಕೆಯಾದರು.

2007: ಮಾತೆ ಮಹಾದೇವಿ ಅವರ `ಬಸವ ವಚನ ದೀಪ್ತಿ' ವಚನ ಸಂಗ್ರಹದ ಮೇಲೆ ರಾಜ್ಯ ಸರ್ಕಾರ ಹೇರಿದ ನಿಷೇಧವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ವಚನಗಳ ಅಂಕಿತನಾಮ `ಕೂಡಲಸಂಗಮದೇವ' ವನ್ನು `ಲಿಂಗದೇವ' ಎಂದು ಬದಲಾಯಿಸುವ ಅಧಿಕಾರ ಲೇಖಕರಿಗಿಲ್ಲ ಎಂದು ಹೇಳಿತು. `ಬಸವಣ್ಣನವರು ಕನಸಿನಲ್ಲಿ ಬಂದು ವಚನಗಳ ಅಂಕಿತ ನಾಮವನ್ನು `ಲಿಂಗದೇವ' ಎಂದು ಬದಲಾಯಿಸುವಂತೆ ತಿಳಿಸಿದ್ದರು ಎಂಬ ಮಾತೆ ಮಹಾದೇವಿ ಅವರ ಹೇಳಿಕೆ ನಂಬಿಕೆಗೆ ಯೋಗ್ಯವಲ್ಲ' ಎಂದು ನ್ಯಾಯಮೂರ್ತಿಗಳಾದ ಸಿ.ಕೆ.ಠಕ್ಕರ್ ಮತ್ತು ಮಾರ್ಕಾಂಡೇಯ ಖಟ್ಜು ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಮಾತೆಮಹಾದೇವಿ ಸಂಪಾದಿಸಿ 1995ರಲ್ಲಿ ಪ್ರಕಟಿಸಿದ್ದ ಪರಿಷ್ಕೃತ ವಚನಗಳ ಸಂಗ್ರಹವನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ರಾಜ್ಯ ಸರ್ಕಾರದ ನಿರ್ಧಾರವನ್ನು 1998ರಲ್ಲಿ ಎತ್ತಿಹಿಡಿದಿದ್ದ ಹೈಕೋರ್ಟ್ ` ಈ ರೀತಿ ಅಂಕಿತನಾಮದ ಬದಲಾವಣೆ ಸಮರ್ಥನಿಯ ಅಲ್ಲ' ಎಂದು ಹೇಳಿತ್ತು.

2007: ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಯಾದ ಕೋರಮಂಗಲದ ಫೋರಂ ಸಮೀಪದಲ್ಲಿ ಬಿಗ್ ಬಜಾರ್ ಮಳಿಗೆ ಇರುವ ಕಟ್ಟಡ ಸೇರಿದಂತೆ ಹಲವು ಮಾಲ್ಗಳ ನಿರ್ಮಾಣಕ್ಕೆ 8.11 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವುದನ್ನು ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಪತ್ತೆ ಹಚ್ಚಿತು. `ಇಲ್ಲಿನ ಪ್ರತಿಷ್ಠಿತ `ಮಾಲ್' ಗಳು ಸೇರಿ ಸುಮಾರು 325 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿಯಾಗಿದೆ' ಎಂದು ರಾಮಸ್ವಾಮಿ ತಿಳಿಸಿದರು.

2007: ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿದ ಪಾಕಿಸ್ಥಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ನಿಲುವನ್ನು ವಿರೋಧಿಸಿ ಮಾಹಿತಿ ತಂತ್ರಜ್ಞಾನ ಸಚಿವ ಇಷಾಕ್ ಖಾಕ್ವಾನಿ ರಾಜೀನಾಮೆ ನೀಡಿದರು.

2007: ದಕ್ಷಿಣ ಆಫ್ರಿಕಾದ ಮಾಜಿ ಟೆಸ್ಟ್ ಕ್ರಿಕೆಟಿಗ ರಾಯ್ ಮೆಕ್ ಲೀನ್ (77) ಜೋಹಾನ್ಸ್ ಬರ್ಗಿನಲ್ಲಿ ನಿಧನರಾದರು. ನಲವತ್ತು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದ ಮೆಕ್ ಲೀನ್ 30ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಿಟ್ಟಿಸಿದ್ದರು. 1955ರರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಒಂದರಲ್ಲಿ ಅಜೇಯ 76 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಅವರು ಗೆಲ್ಲಿಸಿಕೊಟ್ಟಿದ್ದರು. 1960ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ತಂಡದ ಪರವಾಗಿ ಉತ್ತಮ ಪ್ರದರ್ಶನನ ನೀಡಿದ ಮೆಕ್ ಲೀನ್ 1961ರಲ್ಲಿ ವಿಸ್ಡನ್ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದರು. ರಗ್ಬಿ ಆಟಗಾರರಾಗಿಯೂ ಹೆಸರು ಮಾಡಿದ್ದರು.

2006: ಒರಿಸ್ಸಾ ರಾಜ್ಯದ ಅಂಗುಲ್ ಜಿಲ್ಲೆಯು ತಲ್ಚೇರಿನಲ್ಲಿ ಸ್ಥಾಪಿಸಲಾಗಿರುವ ದೇಶದ ಅತಿ ದೊಡ್ಡ ಉಷ್ಣವಿದ್ಯುತ್ ಸ್ಥಾವರವನ್ನು ಪ್ರಧಾನಿ ಮನಮೋಹನ್ ಸಿಂಗ್ ದೇಶಕ್ಕೆ ಸಮರ್ಪಿಸಿದರು. ಮಳೆಯ ಕಾರಣದಿಂದ ಸ್ಥಾವರ ಸ್ಥಳಕ್ಕೆ ತೆರಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರನ್ಸ್ ಮೂಲಕ ಈ ಕಾರ್ಯವನ್ನು ಅವರು ರಾಜಧಾನಿ ಭುವನೇಶ್ವರದಿಂದಲೇ ನೆರವೇರಿಸಿದರು.

2006: ಹತ್ತನೇ ದಕ್ಷಿಣ ಏಷ್ಯಾ ಫೆಡರೇಷನ್ (ಎಸ್ ಎಎಫ್) ಕ್ರೀಡಾಕೂಟ ಮುಕ್ತಾಯ. 118 ಚಿನ್ನ, 69 ಬೆಳ್ಳಿ, 47 ಕಂಚಿನ ಪದಕ ಸೇರಿ ಒಟ್ಟು 234 ಪದಕಗಳನ್ನು ತಮ್ಮ ಉಡಿಗೆ ಹಾಕಿಕೊಳ್ಳುವ ಮೂಲಕ ಭಾರತ ಪದಕ ಪಟಿಯಲ್ಲಿ ಅಗ್ರಸ್ಥಾನ ಗಳಿಸಿತು. ಪಾಕಿಸ್ಥಾನವು 43 ಚಿನ್ನ, 44 ಬೆಳ್ಳಿ, 71 ಕಂಚು ಸೇರಿ 158 ಪದಕ ಗೆದ್ದರೆ, ಶ್ರೀಲಂಕೆಯು 37 ಚಿನ್ನ, 63 ಬೆಳ್ಳಿ, 78 ಕಂಚು ಸೇರಿ 178 ಪದಕ ಗೆದ್ದುಕೊಂಡಿತು.

2001: ಇಂಟೆಲ್ ಕಾರ್ಪೊರೇಷನ್ ತನ್ನ ಅತಿ ವೇಗದ `ಪೆಂಟಿಯಮ್ 4' ಮೈಕ್ರೊಪ್ರೊಸೆಸರನ್ನು ಬಿಡುಗಡೆ ಮಾಡಿತು. ಹೊಸ ಪೆಂಟಿಯಮ್ 4 ಸೆಕೆಂಡಿಗೆ ಎರಡು ಶತಕೋಟಿ ಸೈಕಲಿನಷ್ಟು ಅಂದರೆ ಎರಡು ಗಿಗ್ಹರ್ಟ್ ಸಾಮರ್ಥ್ಯ ಹೊಂದಿದೆ.

1996: ವಿಚ್ಛೇದನಾ ಡಿಕ್ರಿ ಜಾರಿಯೊಂದಿಗೆ ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ 15 ವರ್ಷಗಳ ದಾಂಪತ್ಯ ಕೊನೆಗೊಂಡಿತು.

1971: ಅಮೆರಿಕದ ಈಜುಗಾರ್ತಿ ಜಾನೆಟ್ ಇವಾನ್ಸ್ ಜನ್ಮದಿನ. ನಾಲ್ಕು ಒಲಿಂಪಿಕ್ ಸ್ವರ್ಣ ಪದಕಗಳನ್ನು ಗೆದ್ದ ಈಕೆ ಈಜುಗಾರಿಕೆಯಲ್ಲಿನ ತನ್ನ ವೇಗದಿಂದಾಗಿ ಖ್ಯಾತಿ ಪಡೆದವರು.

1963: ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಶಾಂತಿಯುತ ನಾಗರಿಕ ಹಕ್ಕುಗಳ ರ್ಯಾಲಿಯಲ್ಲಿ 2 ಲಕ್ಷ ಮಂದಿ ಪಾಲ್ಗೊಂಡರು. ಲಿಂಕನ್ ಸ್ಮಾರಕದ ಎದುರು ನಡೆದ ರ್ಯಾಲಿಯನ್ನು ಉದ್ದೇಶಿಸಿ ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಭಾಷಣ ಮಾಡಿದರು. ಅವರ ಭಾಷಣ `ನನಗೆ ಕನಸಿದೆ' ಭಾಷಣ ಎಂದೇ ಖ್ಯಾತಿ ಪಡೆಯಿತು.

1801: ಫ್ರೆಂಚ್ ಆರ್ಥಿಕ ತಜ್ಞ ಹಾಗೂ ಗಣಿತ ತಜ್ಞ ಆಂಟೋನಿ-ಆಗಸ್ಟಿನ್ ಕೊರ್ನೊ (1801-1877) ಜನ್ಮದಿನ. ಗಣಿತ-ಅರ್ಥಶಾಸ್ತ್ರವನ್ನು ರೂಪಿಸಿದ ಮೊದಲಿಗರಲ್ಲಿ ಈತನೂ ಒಬ್ಬ.

Wednesday, August 27, 2008

New Horizons of Human Development

New Horizons of

Human Development

What is Human Development? Human development means not only to have to have the capability to function; it also at the same time involves the art and practice of imagination. Human development means not only economic, political and ethical development; it also means artistic and spiritual development. Indian Business Academy is trying to give shape its thought through International Dialogue at Greater Noida on 14th and 15th September 2008.

Dr. M.K. Shridhar, Reader, Canara Bank School of Management Studies, Bangalore University, has forwarded a mail of Dr Subhash Sharma, Dean, Indian Business Academy, Bangalore to PARYAYA which sketches about this dialogue.

The discourse and practice of human development is at a cross-road now. For quite some time, critics and reflective practitioners in the field of development have raised ethical and moral issues in the vision and practice of development such as poverty, hunger, displacement and production of underdevelopment by the very interventionist process and logic of development.

This has led to the rise of a vibrant critical field of development ethics but this seldom addresses issues of development aesthetics and spirituality.

In the forthcoming international dialogue, "New Horizons of Human Development: Art, Spirituality and Social Transformations," we seek to address some of these neglected issues in the discourse and practice of human development.

This dialogue is based upon new movements of thought and practice in the field of human development, art, spirituality and society. Human development means not only to have to have the capability to function; it also at the same time involves the art and practice of imagination.

Human development means not only economic, political and ethical development; it also means artistic and spiritual development. All these dimensions of development are interlinked but we have not paid sufficient attention to artistic and spiritual development. To develop, both individually as well as collectively, is to develop one’s artistic and spiritual potential.But to develop ourselves artistically is not just to look beautiful as it is perceived externally; art is linked to living life as a work of art.

As Michel Foucault would ask: "What strikes me is the fact that, in our society, art is now linked to objects, rather than to individuals or life itself [..] But couldn’t we ourselves, each one of us, make of our lives a work of art? Why should a lamp or a house become the object of art—and not our own lives?"

There is a transformation in the discourse and practice of art now which links it to establishing relationships of beauty and dignity in society.

Art is not only what we draw on a piece of paper but the quality of life we live and create in our lives and society. It is the poetry that we write in our bodies, social as well as self. As Chitta Ranjan Das argues, there are two streams of aesthetic consciousness—Anna and Ananda (food and joy)-- and human development lies in establishing bridges between the two.

Aesthetic development facilitates border crossing between many domains which are considered isolated from and opposed to each other such as economic and artistic, material and spiritual.

The broadening and deepening of vision and practice of art resonates with broadening and deepening of both spirituality and society. If in the discourse of development there is now a move to include self-development, in the discourse of spirituality there is now a move to make spirituality a multi-dimensional initiative in self and social transformation.

There is a practical and social turn in spirituality where many movements of spirituality wish to address concrete problems in society such as poverty, shelter and suffering—physical as well as spiritual. In this context Giri argued about the need to explore new paths of yoga and tantra of human and social development. The yoga of human and social development involves creating fields of mutual learning and connectedness.

The tantra of development involves creating vibrant spaces of conviviality where all concerned would enjoy being together and grow in each other’s warmth of relationship. The broadening of art and spirituality also is accompanied by deepening of the discourse and realization of the social where social no longer means only structures but also spaces of self and mutual realization.

In the forthcoming international dialogue attempt will be made to explore themes such as development ethics and development aesthetics, practical spirituality and human development, violence of dominant development and aesthetics of transformations.

This dialogue takes place immediately after the Annual Conference of Human Development and Capability Association at Delhi, September 10-13, 2008 (http://www.capabilityapproach.com/Conference.php) and some of the participants in this conference such as the noted development ethicist Des Gasper are joining.

The workshop is held at Indian Business Academy, Greater Noida (PLOT NO.44, KNOWLEDGE PARK III, GREATER NOIDA-201308PHONE: +91-120-3921061, 3921012, 3921064, 2323641-2, 2323645, FAX: 3921099WEBSITE: www.ibainternational.org) which is around 50 KM from Delhi and is being coordinated by Dr. Ananta Kumar Giri of Madras Institute of Development Studies, Chennai (email: aumkrishna@yahoo.com) and Professor Subash Sharma, Dean, Indian Business Academy, Greater Noida and Banglore (email:

ಇಂದಿನ ಇತಿಹಾಸ History Today ಆಗಸ್ಟ್ 27

ಇಂದಿನ ಇತಿಹಾಸ

ಆಗಸ್ಟ್ 27

ಖ್ಯಾತ ಚಿತ್ರ ನಿರ್ದೇಶಕ ಹೃಶಿಕೇಶ್ ಮುಖರ್ಜಿ (84) ಮುಂಬೈಯಲ್ಲಿ ನಿಧನರಾದರು. ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಆನಂದ್, ಖೂಬ್ ಸೂರತ್, ಗೋಲ್ ಮಾಲ್, ಅನುಪಮಾ ಅವರಿಗೆ ಹೆಸರು ತಂದು ಕೊಟ್ಟ ಹಿಂದಿ ಚಿತ್ರಗಳ ಪೈಕಿ ಮುಖ್ಯವಾದವು. ಪಿ.ಲಂಕೇಶ್ ಅವರ `ಪಲ್ಲವಿ' ಚಿತ್ರದ ಸಂಕಲನದ ಸಂದರ್ಭದಲ್ಲಿ ಸಹಕಾರ ನೀಡುವ ಮೂಲಕ ಅವರು ಕನ್ನಡ ಚಿತ್ರರಂಗದ ನಂಟನ್ನು ಹೊಂದಿದ್ದರು.

2007: ಚೆನ್ನೈಯ 57 ವರ್ಷದ ಅಳಗಪ್ಪನ್ ಅವರ ಪತ್ನಿ ವೃಂದಾ ಅವರು 56ರ ಹರೆಯದಲ್ಲಿ ದಾಂಪತ್ಯದ ಸುದೀರ್ಘ 26 ವರ್ಷದ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈಕೆಗೆ ಋತುಚಕ್ರ ನಿಂತು 11 ವರ್ಷಗಳಾಗಿದ್ದು ಚೆನ್ನೈಯ ಅಕ್ಷಯ ಫರ್ಟಿಲಿಟಿ ಸೆಂಟರ್ ನೀಡಿದ ಚಿಕಿತ್ಸೆಯಿಂದ ಗರ್ಭವತಿಯಾದರು. ಸತತ ಒಂದು ಗಂಟೆ ಸಿಸೇರಿಯನ್ ಮೂಲಕ ಮಕ್ಕಳನ್ನು ಹೊರತೆಗೆಯಲಾಯಿತು. ವೈದ್ಯ ವಿಜ್ಞಾನದಲ್ಲಿ ಮೈಲಿಗಲ್ಲು ಎನಿಸಿರುವ ಇಂತಹ ಪ್ರಕರಣ ರಾಷ್ಟ್ರದಲ್ಲಿಯೇ ಮೊತ್ತ ಮೊದಲನೆಯದು ಎನ್ನಲಾಗಿದೆ.

2007: ದೆಹಲಿ ಕುತುಬ್ ಮಿನಾರ್ ಆವರಣದಲ್ಲಿರುವ ಪುರಾತನ ಕಬ್ಬಿಣದ ಸ್ತಂಭದ ಮೇಲಿರುವ ಬ್ರಾಹ್ಮಿ ಲಿಪಿಯ ಬರಹಗಳು ಆ ಸ್ತಂಭದ ಮೇಲೆ ಕೆತ್ತಿದ್ದಲ್ಲ. ಬದಲಾಗಿ ಅದರ ಮೇಲೆ ಲೋಹವನ್ನು ಪಡಿಯಚ್ಚಿನ ನೆರವಿನಿಂದ ಎರಕ ಹೊಯ್ದು ನಿರ್ಮಿಸಿದ್ದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಬರಹ ಈವರೆಗೆ ದೊರೆತಿರುವ ಗುಪ್ತರ ಕಾಲದ ಶಾಸನಗಳಲ್ಲೇ ಅತಿ ಹಿಂದಿನದು. 1,600 ವರ್ಷಗಳಿಂದ ಮಳೆ, ಗಾಳಿ ಹೊಡೆತಕ್ಕೆ ಸಿಲುಕಿದರೂ ಒಂದಿನಿತೂ ಸವೆದಿಲ್ಲ. ಕಬ್ಬಿಣದ ಸ್ತಂಭದಲ್ಲಿ ಆರು ಸಾಲುಗಳಲ್ಲಿ ಬರೆಯಲಾದ 227 ಅಕ್ಷರಗಳನ್ನು ಅಧ್ಯಯನ ಮಾಡಿದ ಕಾನ್ಪುರ ಐಐಟಿ `ಮೆಟಲರ್ಜಿಕಲ್ ಎಂಜಿನಿಯರಿಂಗ್' (ಲೋಹಶಾಸ್ತ್ರ) ವಿಭಾಗದ ವಿಜ್ಞಾನಿಗಳು, ಐದನೇ ಶತಮಾನದ ಆರಂಭದಲ್ಲಿ ಕಬ್ಬಿಣದ ಸ್ತಂಭ ಲಂಬವಾಗಿ ನಿಂತ ಸ್ಥಿತಿಯಲ್ಲೇ ಬ್ರಾಹ್ಮಿ ಲಿಪಿಯ ಅಕ್ಷರಗಳನ್ನು ಎರಕ ಹೊಯ್ಯಲಾಗಿದೆ ಎಂದು ಹೇಳಿದರು. ಅಕ್ಷರಗಳನ್ನು ಕೆತ್ತಿದ್ದರೆ ಅವುಗಳ ತುದಿ ಮೊಂಡಾಗಿರುತ್ತಿತ್ತು. ಗುಪ್ತರ ಕಾಲದ ಲೋಹಶಾಸ್ತ್ರಜ್ಞರ ನೈಪುಣ್ಯಕ್ಕೆ ಇದು ಸಾಕ್ಷಿ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಆರ್. ಬಾಲಸುಬ್ರಹ್ಮಣ್ಯಂ ಹೇಳಿದರು.

2007: ಪೂರ್ವ ಉಗಾಂಡದ ಕಪ್ ಚೊರ್ವಾ ಬಳಿ ಸುಮಾರು 100ಕ್ಕೂ ಮೇಲ್ಪಟ್ಟು ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ ಟ್ರಕ್, ರಸ್ತೆ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಸಂಭವಿಸಿದ ಅಪಘಾತದಲ್ಲಿ 70 ಕ್ಕೂ ಹೆಚ್ಚು ಮಂದಿ ಮೃತರಾದರು. ಇವರಲ್ಲಿ ಅಂದಾಜು 57 ಮಂದಿ ಸೇನಾ ಯೋಧರು.

2007: ಅಮೆರಿಕದ ಟೆನಿಸ್ ಅಂಗಣಗಳಲ್ಲಿ ದಿನೇದಿನೇ ಪುಟಿದೆದ್ದ ಭಾರತದ ಸಾನಿಯಾ ಮಿರ್ಜಾ ಸಿಂಗಲ್ಸ್ ಹಾಗೂ ಡಬಲ್ಸ್ ವಿಶ್ವ ರ್ಯಾಂಕಿಂಗ್ ಪಟ್ಟಿಗಳಲ್ಲಿ ಮೇಲೇರಿದರು. ಅವರು ಸಿಂಗಲ್ಸ್ ನಲ್ಲಿ 27ನೇ ಸ್ಥಾನಕ್ಕೆ ಹಾಗೂ ಡಬಲ್ಸ್ ನಲ್ಲಿ 20ನೇ ಸ್ಥಾನಕ್ಕೆ ಜಿಗಿದರು. ಪೈಲಟ್ ಪೆನ್ ಓಪನ್ ಡಬಲ್ಸಿನಲ್ಲಿ ಸಾನಿಯಾ ಹಾಗೂ ಮಾರಾ ಸ್ಯಾಂಟೆಂಜಲೊ ಚಾಂಪಿಯನ್ ಆದ ಕಾರಣ ಭಾರತದ ಆಟಗಾರ್ತಿ ರ್ಯಾಂಕಿಂಗಿನಲ್ಲಿ ನಾಲ್ಕು ಸ್ಥಾನ ಮೇಲೇರಿದರು.

2006: ಖ್ಯಾತ ಚಿತ್ರ ನಿರ್ದೇಶಕ ಹೃಶಿಕೇಶ್ ಮುಖರ್ಜಿ (84) ಮುಂಬೈಯಲ್ಲಿ ನಿಧನರಾದರು. ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಆನಂದ್, ಖೂಬ್ ಸೂರತ್, ಗೋಲ್ ಮಾಲ್, ಅನುಪಮಾ ಅವರಿಗೆ ಹೆಸರು ತಂದು ಕೊಟ್ಟ ಹಿಂದಿ ಚಿತ್ರಗಳ ಪೈಕಿ ಮುಖ್ಯವಾದವು. ಅವರ ಬಹುತೇಕ ಚಿತ್ರಗಳಿಗೆ ಎಸ್.ಡಿ. ಬರ್ಮನ್ ಸಂಗೀತ ಸಂಯೋಜನೆ ಮಾಡಿದ್ದರು. ಪಿ.ಲಂಕೇಶ್ ಅವರ `ಪಲ್ಲವಿ' ಚಿತ್ರದ ಸಂಕಲನದ ಸಂದರ್ಭದಲ್ಲಿ ಸಹಕಾರ ನೀಡುವ ಮೂಲಕ ಅವರು ಕನ್ನಡ ಚಿತ್ರರಂಗದ ನಂಟನ್ನು ಹೊಂದಿದ್ದರು. `ಝೂಟ್ ಬೋಲೆ ಕವ್ವಾ ಕಾಟೆ' ಅವರ ನಿರ್ದೇಶನದ ಕೊನೆಯ ಚಿತ್ರ. `ತಲಾಶ್' ಎಂಬ ಟೆಲಿವಿಷನ್ ಧಾರಾವಾಹಿಯನ್ನೂ ನಿರ್ದೇಶಿಸಿದ್ದ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಪ್ರಮುಖ ಪ್ರಶಸ್ತಿಗಳು ಸಂದಿದ್ದವು.

2006: ಭೂಮಿ ಮೇಲಿನ ಅತ್ಯಂತ ಹಿರಿಯ ವ್ಯಕ್ತಿ ಎಂಬುದಾಗಿ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿದ್ದ 116 ವರ್ಷದ ಮರಿಯಾ ಎಸ್ತರ್ ದೆ ಕಾಪೊವಿಲ್ಲಾ ಎಂಬ ಮಹಿಳೆ ಈಕ್ವಡೋರಿನ ಕ್ವೆಟ್ಟಾದಲ್ಲಿ ನಿಧನಳಾದಳು. ನ್ಯೂಮೋನಿಯಾ ಪರಿಣಾಮವಾಗಿ ಆಕೆ ಮೃತಳಾದಳು ಎಂದು ಆಕೆಯ ಮೊಮ್ಮಗಳು ಕ್ಯಾಥರೀನ್ ಕಾಪೊವ್ಲಿಲಾ ಹೇಳಿದಳು. ಈ ಅಜ್ಜಿ 1889ರ ಸೆಪ್ಟೆಂಬರ್ 14ರಂದು ಜನಿಸಿದ್ದಳು. ಇದೇ ವರ್ಷ ಚಾರ್ಲಿ ಮತ್ತು ಅಡಾಲ್ಫ್ ಹಿಟ್ಲರ್ ಜನಿಸಿದ್ದರು.

1995: ತೆಲುಗುದೇಶಂ ಪಕ್ಷದ ಒಡಕಿನ ಹಿನ್ನೆಲೆಯಲ್ಲಿ ಆಗಸ್ಟ್ 31ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಅವರಿಗೆ ರಾಜ್ಯಪಾಲರು ಸೂಚಿಸಿದರು.

1982: `ಸೋಯುಜ್ ಟಿ-7' ಗಗನನೌಕೆ ಭೂಮಿಗೆ ವಾಪಸಾಯಿತು.

1979: ಭಾರತದ ಕೊನೆಯ ವೈಸ್ ರಾಯ್ ಲಾರ್ಡ್ ಲೂಯಿ ಮೌಂಟ್ ಬ್ಯಾಟನ್ ಐರ್ಲೆಂಡ್ ಕರಾವಳಿಯಲ್ಲಿ ಸಂಭವಿಸಿದ ದೋಣಿ ಸ್ಫೋಟವೊಂದರಲ್ಲಿ ಅಸು ನೀಗಿದರು. ಐರಿಷ್ ರಿಪಬ್ಲಿಕನ್ ಆರ್ಮಿ ಈ ಕೃತ್ಯಕ್ಕೆ ತಾನು ಹೊಣೆ ಎಂದು ಘೋಷಿಸಿತು.

1975: ಇಥಿಯೋಪಿಯಾದ ಪದಚ್ಯುತ ದೊರೆ ಹೈಲೆ ಸೆಲಾಸ್ಸೀ ತಮ್ಮ 83ನೇ ವಯಸ್ಸಿನಲ್ಲಿ ಅಡ್ಡಿಸ್ ಅಬಾಬಾದಲ್ಲಿ ಮೃತರಾದರು. ಅಧಿಕೃತ ಮೂಲಗಳ ಪ್ರಕಾರ ಅವರದ್ದು ಸಹಜ ಸಾವು. ಆದರೆ ನಂತರ ಲಭಿಸಿದ ಸಾಕ್ಷ್ಯಗಳು ಅವರನ್ನು ಸೇನಾ ಆಡಳಿತದ ಆದೇಶದ ಮೇರೆಗೆ ನೇಣುಹಾಕಲಾಯಿತು ಎಂಬುದನ್ನು ಬೆಳಕಿಗೆ ತಂದವು.

1955: `ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಸಿಜರ್ಡ್ಸ್ ನ 198 ಪುಟಗಳ ಮೊದಲ ಪ್ರತಿ ಸಿದ್ಧಗೊಂಡಿತು. ನೊರ್ರಿಸ್ ಮತ್ತು ರೋಸ್ ಮೆಕ್ ರೈಟರ್ ಹೆಸರಿನ ಅವಳಿ-ಜವಳಿಗಳು ಸಂಪಾದಿಸಿದ ಈ ಪುಸ್ತಕ ಭಾರೀ ಜನಪ್ರಿಯತೆ ಗಳಿಸಿತು. ಇಂಗ್ಲಿಷ್ ಆವೃತ್ತಿ 70 ರಾಷ್ಟ್ರಗಳಲ್ಲಿ ವಿತರಣೆಗೊಂಡರೆ ಇತರ 22 ಆವೃತ್ತಿಗಳು ವಿದೇಶಿ ಭಾಷೆಗಳಲ್ಲಿ ಪ್ರಕಟಗೊಂಡವು.

1939: ಜಗತ್ತಿನ ಮೊತ್ತ ಮೊದಲ ಜೆಟ್ ಪ್ರೊಪೆಲ್ಲರ್ ಚಾಲಿತ ವಿಮಾನ (ಏರ್ ಪ್ಲೇನ್) `ಹೀನ್ ಕೆಲ್ 178' ಉತ್ತರ ಜರ್ಮನಿಯ ಮರೀನ್ಚೆಯಲ್ಲಿ ಚೊಚ್ಚಲ ಹಾರಾಟ ನಡೆಸಿತು.

1928: ಪ್ಯಾರಿಸ್ಸಿನಲ್ಲಿ ಕ್ಲ್ಲೆಲಾಗ್-ಬ್ರೈಂಡ್ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಯುದ್ಧಗಳನ್ನು ನಿಷೇಧಿಸಿದ ಈ ಒಪ್ಪಂದ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಿತು.

1910: ಕಲ್ಕತ್ತದ (ಈಗಿನ ಕೋಲ್ಕತ್ತಾ) ಮದರ್ ತೆರೇಸಾ (1910-1997) ಎಂದೇ ಖ್ಯಾತರಾದ ಏಗ್ನೆಸ್ ಗೊಂಕ್ಷಾ ಬೊಜಾಕ್ಷ್ ಹಿಯು ಅವರ ಜನ್ಮದಿನ.

1859: ಅಮೆರಿಕದ ಪೆನ್ಸಿಲ್ವೇನಿಯಾದ ಟಿಟುಸ್ವಿಲೆ ಬಳಿ ಮೊತ್ತ ಮೊದಲ ಬಾರಿಗೆ ಕೊರೆದ ತೈಲ ಬಾವಿ ಯಶಸ್ವಿಯಾಯಿತು.

1783: ಮೊತ್ತ ಮೊದಲ ಮಾನವ ರಹಿತಯ ಜಲಜನಕ ಬಲೂನ್ ಹಾರಾಟ ಯಶಸ್ವಿಯಾಯಿತು.

1604: ಅಮೃತಸರದ ಸ್ವರ್ಣಮಂದಿರದಲ್ಲಿ ಸಿಖ್ಖರ ಧರ್ಮಗ್ರಂಥ `ಗುರು ಗ್ರಂಥ ಸಾಹಿಬ್' ಪ್ರತಿಷ್ಠಾಪನೆ ನಡೆಯಿತು.

Tuesday, August 26, 2008

Mars and Moon will come together..!

Mars and Moon

will come together..!


On 27 August 2008, Wednesday, You can see one of interesting celestial beauty of Sky. On that day you can see Plant Mars and Moon together after 250 years.

By: Vishnu Prakasha G.

Planet Mars will be the brightest in the night sky starting August 2008. It will look as large as the full moon to the naked Eye.

This willhappen on 27th August 2008 when Mars comes within 34.65 Million milesto earth.

Be sure to watch the sky on Wednesday 27th August 2008 atISD 12:30 am (that is mid night). It will look like the earth has 2moons.

The Next time Mars may come close like this only on the year 2287.

Share this with your friends as NO ONE ALIVE TODAY will ever see it again.

So don’t miss to see the Planet Mars after 250 Years on 27.08.2008 at ISD 12.30 AM

ಇಂದಿನ ಇತಿಹಾಸ History Today ಆಗಸ್ಟ್ 26

ಇಂದಿನ ಇತಿಹಾಸ

ಆಗಸ್ಟ್ 26

ಪೆಂಟ್ಯಾಲ ಹರಿಕೃಷ್ಣ ಅವರು 15ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂಬ ಕೀರ್ತಿಗೆ ಭಾಜನರಾದರು. 1987ರಲ್ಲಿ ವಿಶ್ವನಾಥನ್ ಆನಂದ್ ಅವರು ತಮ್ಮ 18ನೇ ವಯಸ್ಸಿನಲ್ಲಿ ಭಾರತದ ಮೊತ್ತ ಮೊದಲ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2007: `ಗೋವನ್ನು ನಾವೆಲ್ಲರೂ ಎರಡನೇ ಮಾತೆ ಎಂದು ಕರೆಯುತ್ತೇವೆ. ಆದರೆ ಗೋವು ತಾಯಿಗೆ- ತಾಯಿಯಾದ್ದರಿಂದ ನಮ್ಮೆಲ್ಲರ ಮೊದಲ ಮಾತೆ ಎಂದು ಕರೆಯಬೇಕು' ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಬೆಂಗಳೂರಿನ ಆರ್.ಟಿ. ನಗರದ ಎಚ್. ಎಂ.ಟಿ ಬಡಾವಣೆಯಲ್ಲಿ 'ಗೋ ಸಂಧ್ಯಾ' ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು. ದೇಶ ಮತ್ತು ಸಂಸ್ಕೃತಿಯನ್ನು ಉಳಿಸುವ ದೇಶೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ರಾಮಚಂದ್ರಾಪುರ ಮಠ ನಿಂತಿದೆ. ಇದು ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ 70 ಬಗೆಯ ದೇಶೀಯ ತಳಿಗಳ ಪೈಕಿ ಪ್ರಸ್ತುತ 32 ತಳಿಗಳು ಮಾತ್ರ ಉಳಿದಿವೆ. ಈ ಸಂಖ್ಯೆಯಲ್ಲಿ ಗೋತಳಿಗಳು ನಶಿಸಲು ಕಾರಣವೇನು ಎಂದು ದೇಶದ ಸಂಸತ್ತು ಹಾಗೂ ವಿಧಾನಸೌಧಗಳನ್ನು ಪ್ರಶ್ನಿಸಬೇಕಾಗಿದೆ ಎಂದು ಅವರು ಹೇಳಿದರು. ರಾಮಚಂದ್ರಾಪುರ ಮಠದಲ್ಲಿರುವ ಗೋವಿನ ಒಂದು ತಳಿಯನ್ನು ಸಂರಕ್ಷಿಸುವ ಸಂಪೂರ್ಣ ಜವಾಬ್ದಾರಿಯನ್ನು ಚಿತ್ರನಟ ವಿವೇಕ ಒಬೆರಾಯ್ ಕುಟುಂಬ ವಹಿಸಿಕೊಂಡಿದೆ ಎಂದು ಮಠವು ಈ ಸಂದರ್ಭದಲ್ಲಿ ಪ್ರಕಟಿಸಿತು.

2007: ``ಸುವರ್ಣ ವಿಧಾನಸೌಧ ಶಂಕುಸ್ಥಾಪನೆಯೊಂದಿಗೆ ಬೆಳಗಾವಿ ನಗರ ರಾಜ್ಯದ ಎರಡನೇ ರಾಜಧಾನಿಯಾಗಿ ಅಸ್ತಿತ್ವ ಪಡೆದಿದೆ'' ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುವರ್ಣ ವಿಧಾನಸೌಧ ಶಂಕುಸ್ಥಾಪನಾ ಸಮಾರಂಭದಲ್ಲಿ ಹೇಳಿದರು. ಇದು ಜೆಡಿ ಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದ ದೂರದೃಷ್ಟಿಯ ಫಲ. ಇದು ಸರ್ಕಾರದ ಸಾಧನೆ ಎಂದು ಅವರು ಬಣ್ಣಿಸಿದರು.

2007: ಹೈದರಾಬಾದಿನಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಗಳಲ್ಲಿ ಸತ್ತವರ ಸಂಖ್ಯೆ 43ಕ್ಕೆ ಏರಿತು.

2007: ಅಂಡಮಾನ್ ದ್ವೀಪದ ವಿವಿಧ ಭಾಗಗಳಲ್ಲಿ ಈದಿನ ಮುಂಜಾನೆ ಮಧ್ಯಮ ಪ್ರಮಾಣದ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟು ದಾಖಲಾಯಿತು.

2006: ಇರಾನಿನ ವಿವಾದಾತ್ಮಕ ಪರಮಾಣು ಕಾರ್ಯಕ್ರಮದ ಭಾಗವಾಗಿರುವ ಖೊಂಡಬ್ ಭಾರಜಲ ಘಟಕವನ್ನು ಅಧ್ಯಕ್ಷ ಮೊಹಮ್ಮದ್ ಅಹ್ಮದಿನೇಜಾದ್ ಉದ್ಘಾಟಿಸಿದರು.

2006: ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟ್ ಪಟು ಕ್ಲೈಡ್ ವಾಲ್ಕಾಟ್ (80) ಬ್ರಿಜ್ ಟೌನಿನಲ್ಲಿ ನಿಧನರಾದರು. ಐವತ್ತರ ದಶಕದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ಟಿನ ವಿಖ್ಯಾತ ಮೂವರು ಡಬ್ಲ್ಯುಗಳು ಎಂದೇ ಖ್ಯಾತರಾಗಿದ್ದವರಲ್ಲಿ ವಾಲ್ಕಾಟ್ ಒಬ್ಬರಾಗಿದ್ದರು. ಫ್ರಾಂಕ್ ವೊರೆಲ್, ಎವರ್ಟನ್ ವೀಕ್ಸ್ ಇತರ ಇಬ್ಬರು ಖ್ಯಾತ ಡಬ್ಲ್ಯುಗಳು.

2006: ನೇಪಾಳದ ಕಠ್ಮಂಡುವಿನಲ್ಲಿ ಇದೇ ಪ್ರಥಮ ಬಾರಿಗೆ ಸಲಿಂಗಪ್ರೇಮಿಗಳ ಮದುವೆ ನಡೆಯಿತು. 29ರ ಹರೆಯದ ಅನಿಲ್ ಮಹಜು ಮತ್ತು 23ರ ಹರೆಯದ ದಿಯಾ ಮಹಜು ಇವರೇ ಮದುವೆಯಾದ ಸಲಿಂಗ ಪ್ರೇಮಿಗಳು.

2001: ಪೆಂಟ್ಯಾಲ ಹರಿಕೃಷ್ಣ ಅವರು 15ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂಬ ಕೀರ್ತಿಗೆ ಭಾಜನರಾದರು. 1987ರಲ್ಲಿ ವಿಶ್ವನಾಥನ್ ಆನಂದ್ ಅವರು ತಮ್ಮ 18ನೇ ವಯಸ್ಸಿನಲ್ಲಿ ಭಾರತದ ಮೊತ್ತ ಮೊದಲ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿಶ್ವನಾಥನ್ ಆನಂದ್ ಅವರ ದಾಖಲೆಯನ್ನು ಹರಿಕೃಷ್ಣ ಮೀರಿಸಿದರು.

1978: ರಷ್ಯದ ಸೋಯುಜ್ 31ರ ಮೂಲಕ ಗಗನಕ್ಕೆ ಏರಿದ ಸಿಗ್ಮಂಡ್ ಜಾನ್ ಅವರು ಬಾಹ್ಯಾಕಾಶಕ್ಕೆ ಏರಿದ ಪ್ರಥಮ ಜರ್ಮನ್ ಎಂಬ ಕೀರ್ತಿಗೆ ಭಾಜನರಾದರು.

1874: ತತ್ವಜ್ಞಾನಿ, ರಾಜಕಾರಣಿ, ಈಶ್ವರ ಶರಣ್ ಮುನ್ಷಿ ಜನನ.

1965: ಸಾಹಿತಿ ಎಂ.ಎಸ್. ವೇದಾ ಜನನ.

1959: ಸಾಹಿತಿ ರಹಮತ್ ತರೀಕೆರೆ ಜನನ.

1955: ಸಾಹಿತಿ ಟಿ.ಪಿ. ಅಶೋಕ ಜನನ.

1933: ಸಾಹಿತಿ ಟಿ.ವಿ. ವೆಂಕಟಾಚಲ ಶಾಸ್ತ್ರಿ ಜನನ.

1920: ಅಮೆರಿಕದಲ್ಲಿ ಈದಿನವನ್ನು `ಮಹಿಳಾ ಸಮಾನತಾ ದಿನ' ಎಂಬುದಾಗಿ ಆಚರಿಸಲಾಗುತ್ತದೆ. 72 ವರ್ಷಗಳ ಹೋರಾಟದ ಬಳಿಕ ಈದಿನ ಅಮೆರಿಕದ ಸಂವಿಧಾನಕ್ಕೆ 19ನೇ ತಿದ್ದುಪಡಿ ತಂದು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು.

1918: `ಎಚ್ಚೆಸ್ಕೆ' ಎಂದೇ ಖ್ಯಾತರಾದ ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರರು ಎಚ್. ಶ್ರೀನಿವಾಸ ಅಯ್ಯಂಗಾರ್- ಅಲಮೇಲಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಹಳೆಯೂರು ಗ್ರಾಮದಲ್ಲಿ ಜನಿಸಿದರು. ಕಾದಂಬರಿ ಹಾಗೂ ಇತರ ಹಲವಾರು ಕೃತಿಗಳನ್ನು ರಚಿಸಿದ ಎಚ್ಚೆಸ್ಕೆ ಹಾ.ಮಾ.ನಾ. ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದವರು.

1883: ಕ್ರಾಕಟೋವಾ ಜ್ವಾಲಾಮುಖಿ ಭೀಕರವಾಗಿ ಬಾಯ್ದೆರೆದ ದಿನವಿದು. ಮಧ್ಯಾಹ್ನ 1 ಗಂಟೆಗೆ ಮೊದಲ ಬಾರಿಗೆ ಸ್ಫೋಟಗಳ ಸರಣಿ ಸಂಭವಿಸಿತು. 2 ಗಂಟೆಗೆ ಬೂದಿಯ ಕರಿಮೋಡ ಕ್ರಾಕಟೋವಾದ ಮೇಲೆ 17 ಮೈಲುಗಳಷ್ಟು ಎತ್ತರಕ್ಕೆ ಎದ್ದು ನಿಂತಿತು. ಮರುದಿನ ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಜ್ವಾಲಾಮುಖಿ ಕ್ಲೈಮ್ಯಾಕ್ಸ್ ಹಂತವನ್ನು ತಲುಪಿತು. ಆಗ ಸಂಭವಿಸಿದ ಸ್ಫೋಟದ ಸದ್ದು 2200 ಮೈಲು ದೂರದ ಆಸ್ಟ್ರೇಲಿಯಾಕ್ಕೂ ಕೇಳಿಸಿತು. ಐವತ್ತು ಮೈಲುಗಳಷ್ಟು ದೂರಕ್ಕೆ ಬೂದಿ ಚಿಮ್ಮಿತು.

Monday, August 25, 2008

Science and Politics of Genetic Engineering


Institution of Agricultural Technologists and Sahaja Samrudha have organised a lecture programme on 'Science and politics of Genetic Engineering' at B.J. Nanjundappa Hall, Queens Road, Bangalore on 26th August Monday at 4.30 pm.

Dr. Micheal K . Hansen, Senior Staff Scientist, Consumers Union USA will be the guest speaker.Dr. A Rajanna, President IAT, presides. Environmentalist Nagesh Hegade, Bharati Patel, Dr. K.N. Ganeshiah, G.N. Mohan will be the guests.

ಇಂದಿನ ಇತಿಹಾಸ History Today ಆಗಸ್ಟ್ 25

ಇಂದಿನ ಇತಿಹಾಸ

ಆಗಸ್ಟ್ 25

ಭಾರತೀಯ ಸಂಜಾತ ಜಲ ನಿರ್ಹಹಣಾ ತಜ್ಞ, ಕೆನಡಾ ಪ್ರಜೆ ಅಸಿತ್ ಕೆ. ಬಿಸ್ವಾಸ್ ಅವರಿಗೆ ಜಾಗತಿಕ ಜಲ ಸಂಪನ್ಮೂಲ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಶಿಕ್ಷಣ ಮತ್ತು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜಾಗೃತಿ ಮೂಡಿಸಿದ್ದಕ್ಕಾಗಿನೀಡಲಾಗುವ 1.50 ಲಕ್ಷ ಅಮೆರಿಕನ್ ಡಾಲರ್ ಮೊತ್ತದ ಪ್ರತಿಷ್ಠಿತ `ಸ್ಟಾಕ್ ಹೋಮ್ ಜಲ ಪ್ರಶಸ್ತಿ'ಯನ್ನು ಸ್ವೀಡಿಷ್ ರಾಜಕುಮಾರಿ ವಿಕ್ಟೋರಿಯಾ ಅವರು ಸ್ಟಾಕ್ ಹೋಮಿನಲ್ಲಿ ಪ್ರದಾನ ಮಾಡಿದರು.

2007: ಹೈದರಾಬಾದ್ ನಗರದ ಸಚಿವಾಲಯ ಸಮೀಪದ ಲುಂಬಿನಿ ಪಾರ್ಕ್ (ರಾತ್ರಿ 7.45) ಹಾಗೂ ಗೋಕುಲ್ ಚಾಟ್ ಶಾಪ್ ಬಳಿ ಈದಿನ (ರಾತ್ರಿ 7.50 ಗಂಟೆಗೆ) ಶಂಕಿತ ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಸುಮಾರು 32 ಮಂದಿ ಮೃತರಾಗಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೊದಲ ಸ್ಫೋಟ ರಾತ್ರಿ 7.45ಕ್ಕೆ ಹುಸೇನ್ ಸಾಗರ್ ಎದುರಿಗೇ ಇರುವ ಲುಂಬಿನಿ ಪಾರ್ಕಿನಲ್ಲಿ ಸಂಭವಿಸಿ 6 ಮಂದಿ ಮೃತರಾದರು. ರಾತ್ರಿ 7.45ಕ್ಕೆ ಗೋಕುಲ್ ಚಾಟ್ ಬಳಿ ಸಂಭವಿಸಿದ ಸ್ಫೋಟದಲ್ಲಿ 26 ಮಂದಿ ಮೃತರಾಗಿ 25-30 ಜನ ಗಾಯಗೊಂಡರು.

2007: `ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪೊಲೀಸರು ಜೋದಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಿ ನಂತರ ಜೈಲಿಗೆ ಕಳುಹಿಸಿದರು. ಸ್ಥಳೀಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಲು ಸಲ್ಮಾನ್ ಖಾನ್ ಅವರು ತಮ್ಮ ಸಹೋದರ ಸೋಹೆಲ್ ಹಾಗೂ ವಕೀಲ ದೀಪೆಶ್ ಮೆಹ್ತಾ ಅವರೊಂದಿಗೆ ಮುಂಬೈನಿಂದ ವಿಮಾನದ ಮೂಲಕ ಬಂದಿಳಿದಾಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸವಾಯ್ ಸಿಂಗ್ ಗೋಧರ್ ನೇತೃತ್ವದ ಪೊಲೀಸ್ ತಂಡ ಖಾನ್ ಅವರನ್ನು ಬಂಧಿಸಿತು. 41 ವರ್ಷದ ಸಲ್ಮಾನ್ ಅವರು 1998ರ ಸೆಪ್ಟೆಂಬರ್ 28ರಂದು ``ಹಮ್ ಸಾಥ್ ಸಾಥ್ ಹೈ'' ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಗೋಡಾ ಫಾರ್ಮ್ ಬಳಿಯ ಉಜಿಯಾಲ ಬಖಾರದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಹೊತ್ತಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಲ್ಮಾನ್ ಗೆ ಐದು ವರ್ಷಗಳ ಜೈಲುಶಿಕ್ಷೆ ಮತ್ತು ರೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ಆರ್. ಸಿಂಘ್ವಿ ಎತ್ತಿಹಿಡಿದರು. ಸಲ್ಮಾನ್ ಬಂಧನದಿಂದ ಸುಮಾರು 70 ಕೋಟಿ ವೆಚ್ಚದ ಸಿನಿಮಾ ಯೋಜನೆಗಳ ಮೇಲೆ ಕರಿಮೋಡ ಆವರಿಸಿತು. 35 ಕೋಟಿ ವೆಚ್ಚದ ಅಫ್ಜಲ್ ಖಾನ್ ಅವರ `ಗಾಡ್ ತುಸ್ಸಿ ಗ್ರೇಟ್ ಹೊ', ಬೋನಿ ಕಪೂರ್ ನಿರ್ಮಾಣದ 35-40 ಕೋಟಿ ವೆಚ್ಚದ ಮತ್ತೊಂದು ಹೊಸ ಚಿತ್ರ ಹಾಗೂ ಇತರ ಚಿತ್ರಗಳ ಚಿತ್ರೀಕರಣಕ್ಕೆ ಧಕ್ಕೆ ಉಂಟಾಯಿತು.

2007: ಕೊಲೆ ಆರೋಪದಿಂದ ಮುಕ್ತರಾದ ನಾಲ್ಕು ದಿನಗಳ ಬಳಿಕ ಜೆಎಂಎಂ ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ಶಿಬು ಸೊರೇನ್ ಜಾರ್ಖಂಡಿನ ಡುಮ್ಕಾ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದರು. ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಕೊಲೆ ಆರೋಪ ಸೊರೇನ್ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಿಬಿಐ ವಿಫಲಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು. ಒಂಬತ್ತು ತಿಂಗಳನ್ನು ಕಾರಾಗೃಹದಲ್ಲಿ ಕಳೆದ ಕೇಂದ್ರದ ಮಾಜಿ ಸಚಿವ ಸೊರೇನ್ ಅವರನ್ನು ಸ್ವಾಗತಿಸಲು ದೊಡ್ಡ ಸಂಖ್ಯೆಯ ಅಭಿಮಾನಿಗಳು ಜೈಲಿನ ಹೊರಗೆ ಸೇರಿದ್ದರು. 1994ರಲ್ಲಿ ನಡೆದ ಝಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆಳಹಂತದ ನ್ಯಾಯಾಲಯವು ಸೊರೇನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2006ರ ನವೆಂಬರ್ 28 ರಂದು ಅವರು ಜೈಲು ಶಿಕ್ಷೆಗೆ ಒಳಗಾಗಿದ್ದರು.

2007: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ದಾದಿ ಪ್ರಕಾಶಮಣಿ (87) ಅವರು ಈದಿನ ಬೆಳಿಗ್ಗೆ ಮೌಂಟ್ ಅಬುವಿನಲ್ಲಿ ವಿಧಿವಶರಾದರು. ಪ್ರಕಾಶಮಣಿ ಈಗಿನ ಪಾಕಿಸ್ಥಾನದಲ್ಲಿರುವ ಸಿಂಧ್ ಪ್ರಾಂತದ ಹೈದರಾಬಾದಿನಲ್ಲಿ ಜನಿಸಿದವರು. ಇವರು 14ನೇ ವಯಸ್ಸಿನಲ್ಲೇ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇರಿದ್ದರು. 1937ರಲ್ಲಿ ಈ ಸಂಸ್ಥೆ ರೂಪುಗೊಂಡಾಗ 8 ಜನರ ಟ್ರಸ್ಟಿನಲ್ಲಿ ಇವರನ್ನೂ ಸಹ ಒಬ್ಬರನ್ನಾಗಿ ನೇಮಕ ಮಾಡಲಾಗಿತ್ತು. ಈ ಸಂಸ್ಥೆಯ ಸ್ಥಾಪಕರಾದ ಪ್ರಜಾಪಿತ ಬ್ರಹ್ಮ ಅವರು 1969ರ ಜನವರಿಯಲ್ಲಿ ಇಹಲೋಕ ತ್ಯಜಿಸಿದ ಬಳಿಕ ಪ್ರಕಾಶಮಣಿ ಅವರು ಮುಖ್ಯ ಆಡಳಿತಾಧಿಕಾರಿಯಾಗಿ ಸಂಸ್ಥೆಯನ್ನು ಮುನ್ನಡೆಸಿದ್ದರು. ಪ್ರಕಾಶಮಣಿ ಅವರ ಆಡಳಿತ ಅವಧಿಯಲ್ಲೇ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಯುನಿಸೆಫ್ ಸರಕಾರೇತರ ಸಂಸ್ಥೆ (ಎನ್.ಜಿ.ಓ) ಮಾನ್ಯತೆ ನೀಡಿದ್ದಲ್ಲದೆ ಇವರಿಗೆ ಏಳು ಶಾಂತಿ ಪಾರಿತೋಷಕಗಳನ್ನು ನೀಡಿ ಗೌರವಿಸಿತ್ತು. ಪ್ರಕಾಶಮಣಿ ಅವರು ಈ ಪಾರಿತೋಷಕ ಪಡೆದ ದೇಶದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2007: ಆಲ್ಕೋಹಾಲ್ ಸೇವನೆಯಿಂದ ಕಿಡ್ನಿ ಕ್ಯಾನ್ಸರ್ ಉಲ್ಬಣದ ಮಟ್ಟವನ್ನು ಕಡಿಮೆಗೊಳಿಸಬಹುದು ಎಂದು ಬ್ರಿಟಿಷ್ ಪತ್ರಿಕೆಯ ಅಧ್ಯಯನ ವರದಿಯೊಂದು ಬಹಿರಂಗಪಡಿಸಿತು. ಎಲ್ಲಾ ರೀತಿಯ ಆಲ್ಕೋಹಾಲ್ ಅಂಶ ಇರುವ ಮದ್ಯಪಾನಗಳನ್ನು ಮತ್ತು ಆಲ್ಕೋಹಾಲ್ ಸೇವಿಸಿರುವ ವ್ಯಕ್ತಿಗಳನ್ನು ಪರೀಕ್ಷಿಸಿದ ಸ್ವೀಡನ್ನಿನ ಸ್ಟಾಕ್ ಹೋಮಿನಲ್ಲಿರುವ ಕರೊಲಿಂಸ್ಕ ಸಂಸ್ಥೆಯ ಡಾ.ಅಲಿಕ್ಜಾ ವೊಲ್ಕ್ ಮತ್ತು ಅವರ ಸಹೋದ್ಯೋಗಿಗಳು ಈ ವಿಷಯವನ್ನು ಪ್ರಕಟಿಸಿದರು. ಕಿಡ್ನಿ ಕ್ಯಾನ್ಸರ್ ಅಭಿವೃದ್ಧಿಯಾಗುತ್ತಿರುವ ವ್ಯಕ್ತಿ ಪ್ರತಿ ತಿಂಗಳು ಶೇ 620 ಜಿ ಎಥೆನಾಲ್ ಸೇವಿಸಿದರೆ ಶೇ 40ರಷ್ಟು ಕ್ಯಾನ್ಸರ್ ಅಭಿವೃದ್ಧಿಯನ್ನು ತಡೆಗಟ್ಟಬಹುದು. ಪ್ರತಿ ವಾರ ಎರಡೂ ಲೋಟಕ್ಕಿಂತ ಹೆಚ್ಚು ರೆಡ್ ವೈನ್ ಸೇವಿಸುವ ವ್ಯಕ್ತಿಯಲ್ಲೂ ಶೇ 40ರಷ್ಟು ಕ್ಯಾನ್ಸರ್ ನಿಯಂತ್ರಣವಾಗುತ್ತದೆ. ವೈಟ್ ವೈನ್ ಮತ್ತು ಆಲ್ಕೋಹಾಲ್ ಅಂಶ ಹೆಚ್ಚು ಇರುವ ಬಿಯರ್ ಸೇವನೆಯಿಂದಲೂ ಇದೇ ರೀತಿಯ ಪರಿಣಾಮವಾಗುತ್ತದೆ. ಆದರೆ, ಕಿಡ್ನಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಆಲ್ಕೋಹಾಲ್ ಅಂಶ ಕಡಿಮೆ ಇರುವ ಬಿಯರ್, ಆಲ್ಕೋಹಾಲ್ ಮಧ್ಯಮ ಮಟ್ಟದ್ಲಲಿರುವ ಬಿಯರ್, ಆಲ್ಕೋಹಾಲ್ ಹೆಚ್ಚಿರುವ ವೈನ್ ಅಥವಾ ಇತರೆ ಮದ್ಯಪಾನಗಳು ಸಹಾಯ ಮಾಡುವುದಿಲ್ಲ ಎಂಬುದು ವರದಿಯ ಅಭಿಮತ.

2006: ಭಾರತೀಯ ಸಂಜಾತ ಜಲ ನಿರ್ಹಹಣಾ ತಜ್ಞ, ಕೆನಡಾ ಪ್ರಜೆ ಅಸಿತ್ ಕೆ. ಬಿಸ್ವಾಸ್ ಅವರಿಗೆ ಜಾಗತಿಕ ಜಲ ಸಂಪನ್ಮೂಲ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಶಿಕ್ಷಣ ಮತ್ತು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜಾಗೃತಿ ಮೂಡಿಸಿದ್ದಕ್ಕಾಗಿನೀಡಲಾಗುವ 1.50 ಲಕ್ಷ ಅಮೆರಿಕನ್ ಡಾಲರ್ ಮೊತ್ತದ ಪ್ರತಿಷ್ಠಿತ `ಸ್ಟಾಕ್ ಹೋಮ್ ಜಲ ಪ್ರಶಸ್ತಿ'ಯನ್ನು ಸ್ವೀಡಿಷ್ ರಾಜಕುಮಾರಿ ವಿಕ್ಟೋರಿಯಾ ಅವರು ಸ್ಟಾಕ್ ಹೋಮಿನಲ್ಲಿ ಪ್ರದಾನ ಮಾಡಿದರು. ಸ್ವೀಡನ್ನಿನ ದೊರೆ 16ನೇ ಕಾಲ್ ಗುಸ್ತಾಫ್ ಜಲ ಪ್ರಶಸ್ತಿಯ ಪೋಷಕತ್ವದ `ಸ್ಟಾಕ್ ಹೋಮ್ ಜಲ ಪ್ರಶಸ್ತಿ'ಯು ಜಾಗತಿಕ ಪ್ರಶಸ್ತಿಯಾಗಿದ್ದು ಇದನ್ನು 1990ರಲ್ಲಿ ಸ್ಥಾಪಿಸಲಾಯಿತು. ಜಲ ಸಂಬಂಧಿ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿ, ಸಂಘಟನೆ ಅಥವಾ ಜಲ ಸಂಬಂಧಿ ಚಟುವಟಿಕೆ ನಿರತರಾಗಿರುವ ಸಂಸ್ಥೆಗಳಿಗೆ ಇದನ್ನು ನೀಡಲಾಗುತ್ತದೆ. ಶಿಕ್ಷಣ, ಮಾನವೀಯ ಅಥವಾ ಅಂತಾರಾಷ್ಟ್ರೀಯ ಬಾಂಧವ್ಯ, ಜಲ ನಿರ್ವಹಣೆ, ಜಲ ಸಂಬಂಧಿ ನೆರವು ಇತ್ಯಾದಿ ಕ್ಷೇತ್ರಗಳು ಈ ವ್ಯಾಪ್ತಿಗೆ ಬರುತ್ತದೆ.

2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ಜಾತಿಗಳಿಗೆ (ಒಬಿಸಿ) ಶೇಕಡಾ 27 ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮಸೂದೆಯನ್ನು ಲೋಕಸಭಯಲ್ಲಿ ಮಂಡಿಸಲಾಯಿತು. ಬೆಂಗಳೂರಿನ ಜವಾಹರಲಾಲ್ ನೆಹರೂ ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಮುಂಬೈಯ ಹೋಮಿ ಬಾಬಾ ರಾಷ್ಟ್ರೀಯ ಸಂಸ್ಥೆ, ಬಾಬಾ ಪರಮಾಣು ಸಂಶೋಧನಾ ಕೇಂದ್ರ, ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಸೇರಿ 8 ಸಂಸ್ಥೆಗಳಿಗೆ ಈ ಮೀಸಲಾತಿ ಅನ್ವಯಿಸುವುದಿಲ್ಲ. ಅಲ್ಪಸಂಖ್ಯಾತರ ಸಂಸ್ಥೆಗಳಿಗೂ ಮೀಸಲಾತಿಯಿಂದ ವಿನಾಯ್ತಿ. ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಅವರು ಮಂಡಿಸಿದ ಈ ಮಸೂದೆಯನ್ನು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಿದರು.

2006: ಲಾಭದಾಯಕ ಹುದ್ದೆ ಹೊಂದಿರುವ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿದರು. ಇವರಿಬ್ಬರೂ ರಾಜೀವ್ಗಾಂಧಿ ಪ್ರತಿಷ್ಠಾನದ ಟ್ರಸ್ಟಿಗಳಾಗಿದ್ದಾರೆ.

2006: ಸುಮಾರು 3200 ವರ್ಷಗಳಷ್ಟು ಹಳೆಯದಾದ 125 ಟನ್ ತೂಕದ ಪರ್ಹೋ 2ನೇ ರಾಮ್ಸೇಸ ಮೂರ್ತಿಯನ್ನು ಈಜಿಪ್ಟಿನ ಕೈರೋದ ರಾಮ್ಸೇಸ ಚೌಕದಿಂದ ಕೈರೋ ಹೊರವಲಯದ ಗಿಝಾದಲ್ಲಿನ ಪಿರಮಿಡ್ಡಿಗೆ ಸಾಗಿಸಲಾಯಿತು.

2004: ಈದ್ಗಾ ಮೈದಾನ ರಾಷ್ಟ್ರ ಧ್ವಜಾರೋಹಣ ವಿವಾದ ಸಂಬಂಧ ಹೊರಡಿಸಲಾದ ವಾರಂಟ್ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಹುಬ್ಬಳ್ಳಿಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಶರಣಾದರು.

2001: ಹೆಪಟೈಟಿಸ್, ಲಿವರ್ ಸಿರೋಸಿಸ್ ಮತ್ತು ಕ್ಯಾನ್ಸರಿಗೆ ಕಾರಣವಾಗುವ ಹೆಪಟೈಟಿಸ್ ಸಿ ವೈರಸ್ಸಿನ ಗುಣಾಣು ನಕ್ಷೆಯನ್ನು (ಜೆನೋಮ್) ಅನಿವಾಸಿ ಭಾರತೀಯ ವಿಜ್ಞಾನಿ ರಾಮರೆಡ್ಡಿ ಗುಂಟಕ ಅವರ ಸಹಯೋಗದೊಂದಿಗೆ ವಿಜ್ಞಾನಿಗಳು ಹೈದರಾಬಾದಿನ ಡೆಕ್ಕನ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ಸಿನಲ್ಲಿ ಗುರುತಿಸಿ ರೂಪಿಸಿದರು. ಸೂಕ್ಷ್ಮಜೀವಿಯೊಂದರ ಗುಣಾಣು ನಕ್ಷೆಯನ್ನು ಈ ರೀತಿ ಭಾರತದಲ್ಲಿ ಗುರುತಿಸಿದ್ದು ಇದೇ ಮೊದಲು.

2001: ಲಂಡನ್ನಿನ ಓವಲ್ಲಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ 400ನೇ ಟೆಸ್ಟ್ ವಿಕೆಟ್ ಪಡೆದ ಮೊದಲ ಆಸ್ಟ್ರೇಲಿಯನ್ ಎಂಬ ಹೆಗ್ಗಳಿಕೆಗೆ ಶೇನ್ ವಾರ್ನ್ ಪಾತ್ರರಾದರು.

1999: ಡೇವಿಸ್ ಕಪ್ ಮಾಜಿ ನಾಯಕ ನರೇಂದ್ರನಾಥ ನಿಧನ.

1996: ಸಮುದ್ರಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಇರುವ ವಿಶ್ವ ವಿಖ್ಯಾತ ಅಮರನಾಥ ಹಿಮಲಿಂಗ ದರ್ಶನಕ್ಕ್ಕೆ ಹೊರಟಿದ್ದ 194 ಮಂದಿ ಯಾತ್ರಾರ್ಥಿಗಳು ಅಮರನಾಥ ಗುಹೆಗಳಲ್ಲಿ ಅತಿಯಾದ ಶೀತಕ್ಕೆ ಸಿಲುಕಿ ಮೃತರಾದರು.

1981: ಕರ್ನಾಟಕದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಶುಲ್ಕ ವಿಧಿಸುವುದನ್ನು ಹಂತ, ಹಂತವಾಗಿ ರದ್ದು ಪಡಿಸಲು ಸಚಿವ ಸಂಪುಟ ನಿರ್ಧರಿಸಿತು.

1948: `ಜನ ಗಣ ಮನ'ವನ್ನು ತಾತ್ಕಾಲಿಕ ರಾಷ್ಟ್ರಗೀತೆಯಾಗಿ ಅಂಗೀಕರಿಸಲು ಭಾರತದ ಸಂವಿಧಾನ ಸಭೆ ಅಂತಿಮ ನಿರ್ಣಯ ಕೈಗೊಂಡಿತು.

1947: ಸಾಹಿತಿ ಶ್ರೀಧರ ರಾಯಸಂ ಜನನ.

1944: ನಾಲ್ಕು ವರ್ಷಗಳ ನಾಝಿ ಆಳ್ವಿಕೆಯಿಂದ ಪ್ಯಾರಿಸ್ಸನ್ನು ಮಿತ್ರ ಪಡೆಗಳು ವಿಮೋಚನೆಗೊಳಿಸಿದವು.

1919: ಬಿಹಾರದ ಮಾಜಿ ಮುಖ್ಯಮಂತ್ರಿ ಬಿಂದೇಶ್ವರಿ ಪ್ರಸಾದ್ ಮಂಡಲ್ ಜನನ.

1918: ಖ್ಯಾತ ಸಾಹಿತಿ ಹಾಗೂ ಸಮಾಜ ಸುಧಾರಕ ಮಿರ್ಜಿ ಅಣ್ಣಾರಾಯ (25-8-1919ರಿಂದ 23-12-1975) ಅವರು ಅಪ್ಪಣ್ಣ- ಚಂದ್ರವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ ಜನಿಸಿದರು. ಒಟ್ಟು 75ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಅಣ್ಣಾರಾಯ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

1890: ಸಾಹಿತಿ ಸುಬೋಧ ರಾಮರಾವ್ ಜನನ.

1888: ಭಾರತೀಯ ವಿದ್ವಾಂಸ ಹಾಗೂ ಆಡಳಿತಗಾರ ಅಲ್ಲಾಮಾ ಮಾಶ್ರಿಕಿ (1888-1963) ಜನ್ಮದಿನ. ಹೈದರಾಬಾದಿನಲ್ಲಿ ಖಕ್ಸಾರ್ ತೆಹ್ರಿಕಿ ಪಕ್ಷವನ್ನು ಹುಟ್ಟುಹಾಕಿದ ಇವರು ಕೋಮು ಆಧಾರದ ವಿಭಜನೆಯನ್ನು ಪ್ರತಿಪಾದಿಸಿದವರು.

1875: ಹಡಗೊಂದರ ಮಾಸ್ಟರ್ ಮ್ಯಾಥ್ಯೂ ವೆಬ್ ಅವರು 21 ಗಂಟೆ 45 ನಿಮಿಷಗಳ ಅವಧಿಯ್ಲಲಿ ಬ್ರೆಸ್ಟ್ ಸ್ಟ್ರೋಕ್ ವಿಧಾನದಲ್ಲಿ ಈಜುತ್ತಾ ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿದ ಮೊತ್ತ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Sunday, August 24, 2008

ಇಂದಿನ ಇತಿಹಾಸ History Today ಆಗಸ್ಟ್ 24

ಇಂದಿನ ಇತಿಹಾಸ

ಆಗಸ್ಟ್ 24

ವೆಸೂವಿಯಸ್ ಜ್ವಾಲಾಮುಖಿ ಬಾಯ್ದೆರೆದು ಪಾಂಪೆ ಮತ್ತು ಸ್ಟಾಬೀ ಪಟ್ಟಣಗಳನ್ನು ಬೂದಿಯ ಅಡಿಯಲ್ಲಿ ಮುಳುಗಿಸಿದರೆ, ಹರ್ಕ್ಯುಲೇನಿಯಮ್ ನಗರವನ್ನು ಲಾವಾರಸದ ಕೆಸರಿನಲ್ಲಿ ಮುಳುಗಿಸಿತು.

2007: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ತಮ್ಮ ವಿರುದ್ಧ ಜೈಪುರ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ಪ್ರಶ್ನಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಜೋಧ್ ಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಲ್ಮಾನ್ ವಿರುದ್ಧ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬಿ.ಕೆ. ಜೈನ್ ಅವರು 2006ರ ಏಪ್ರಿಲ್ 10ರಂದು ನೀಡಿದ್ದ ತೀರ್ಪನ್ನು ಎತ್ತಿಹಿಡಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಮಲ್ ರಾಜ್ ಸಿಂಘ್ವಿ ಅವರು, ನಟನ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಿದರು. ಆದರೆ ಇನ್ನೊಬ್ಬ ಆರೋಪಿ ಗೋವರ್ಧನ್ ಸಿಂಗ್ ನನ್ನು ಖುಲಾಸೆ ಮಾಡಿದರು. 41 ವರ್ಷದ ಸಲ್ಮಾನ್ ಅವರು 1998ರ ಸೆಪ್ಟೆಂಬರ್ 28ರಂದು ಸೂರಜ್ ಅವರ ``ಹಮ್ ಸಾಥ್ ಸಾಥ್ ಹೈ'' ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಗೋಡಾ ಫಾರ್ಮ್ ಬಳಿಯ ಉಜಿಯಾಲ ಬಖಾರದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಆರೋಪಕ್ಕೆ ಗುರಿಯಾಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಲ್ಮಾನ್ ಗೆ ಐದು ವರ್ಷಗಳ ಜೈಲುಶಿಕ್ಷೆ ಮತ್ತು ರೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು.

2007: ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಬಾಣಂತಿ ಹಾಗೂ ನವಜಾತ ಶಿಶುವಿನ ಆರೈಕೆಗೆ ಕರ್ನಾಟಕದ ಕುಟುಂಬ ಕಲ್ಯಾಣ ಇಲಾಖೆಯು `ಮಡಿಲು' ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿತು. ಸುರಕ್ಷಿತ ಹೆರಿಗೆ, ತಾಯಿ- ಮಗುವಿನ ಆರೋಗ್ಯ ರಕ್ಷಣೆಗಾಗಿ ವರಮಹಾಲಕ್ಷ್ಮಿ ಹಬ್ಬದಂದೇ ಈ ಯೋಜನೆಯನ್ನು ಜಾರಿಗೊಳಿಸಲಾಯಿತು ಎಂದು ಆರೋಗ್ಯ ಸಚಿವ ಆರ್.ಅಶೋಕ್ ಪ್ರಕಟಿಸಿದರು. ಯೋಜನೆಗಾಗಿ 18.38 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಯೋಜನೆಯು ಆಗಸ್ಟ್ 15ರಿಂದ ಪೂರ್ವಾನ್ವಯವಾಗಿ ಜಾರಿಯಾಗುವುದು.

2007: 30 ವರ್ಷಗಳ ಹಿಂದೆ ಮಂಗಳಯಾನ ಕೈಗೊಂಡಿದ್ದ ವೈಕಿಂಗ್ ಲ್ಯಾಂಡರಿನ ವರದಿಯನ್ನು ಈಗ ಜರ್ಮನಿಯ ಜಿಯೆಸ್ಸೆನ್ ವಿಶ್ವವಿದ್ಯಾನಿಲಯದ ಜೂಪ್ ಹೌಟ್ಕೂಪರ್ ಹೊಸದಾಗಿ ವಿಶ್ಲೇಷಿದ್ದು, ಮಂಗಳ ಗ್ರಹದ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಇರಬಹುದು, ಮಂಗಳನ ಮಣ್ಣಿನಲ್ಲಿ ಶೇಕಡಾ 0.1ರಷ್ಟು ಭಾಗದಲ್ಲಿ ಜೈವಿಕ ಅಂಶಗಳು ಇರಬಹುದು ಎಂದು ಹೇಳಿದರು. ಅಂಟಾರ್ಟಿಕಾದ ಅತಿಶೀತಲ ಪ್ರದೇಶದಲ್ಲಿ ಇರುವಷ್ಟೇ ಪ್ರಮಾಣದ ಜೀವ ಪಸೆ ಮಂಗಳನ ಮಣ್ಣಿನಲ್ಲೂ ಇದೆ. ಅಂಟಾರ್ಟಿಕಾದಲ್ಲಿ ಕೆಲ ವಿಶಿಷ್ಟ ಬ್ಯಾಕ್ಟೀರಿಯಾ ಹಾಗೂ ಶಿಲಾವಲ್ಕಗಳು ಜೀವಿಸುತ್ತಿವೆ. ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯಿಂದ ಮಂಗಳಕ್ಕೆ ಅಥವಾ ಅಲ್ಲಿಂದ ಭೂಮಿಗೆ ಜೀವಾಣುಗಳು ಹಾರಿ ಬಂದಿರಬಹುದಾದ ಸಾಧ್ಯತೆಯಿದೆ ಎಂದು ಹೌಟ್ ಕೂಪರ್ ಅಭಿಪ್ರಾಯ ಪಟ್ಟರು. ದಶಕಗಳ ಹಿಂದೆ ಅಂಟಾರ್ಟಿಕಾದಲ್ಲಿ ಸಿಕ್ಕಿದ್ದ ಉಲ್ಕಾಶಿಲೆಯೊಂದು, ಮಂಗಳನಲ್ಲಿ ಜೀವ ಸೆಲೆ ಇದ್ದುದರ ಕುರುಹು ನೀಡಿತ್ತು.

2007: ನಕ್ಷತ್ರಗಂಗೆಗಳು, ನಕ್ಷತ್ರಗಳು ಹಾಗೂ ಕಪ್ಪು ದ್ರವ್ಯವೂ ಇಲ್ಲದ ದೈತ್ಯ ರಂಧ್ರವೊಂದು ಬ್ರಹ್ಮಾಂಡದಲ್ಲಿ ಪತ್ತೆಯಾಗಿದೆ ಎಂದು ಮಿನ್ನೆಸೊಟಾ ವಿಶ್ವವಿದ್ಯಾನಿಲಯದ ಖಗೋಳವಿಜ್ಞಾನಿಗಳ ತಂಡ ಈದಿನ ಪ್ರಕಟಿಸಿತು.
ಈ ರಂಧ್ರ 100 ಕೋಟಿ ಜ್ಯೋತಿರ್ವರ್ಷಗಳಷ್ಟು ಅಗಲವಿದೆ. ಇಂತಹ ಬೃಹತ್ ರಂಧ್ರವನ್ನು ಈ ಹಿಂದೆ ಯಾರೂ ಪತ್ತೆ ಹಚ್ಚಿರಲಿಲ್ಲ. ನಾವು ಸಹ ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಆಕಾಶದ ಆ ಭಾಗದಲ್ಲಿ ವಿಶಿಷ್ಟವಾದುದು ಏನೋ ಇರಬಹುದು ಎಂದು ಅಂದುಕೊಂಡಿದ್ದೆವು ಎಂದು ಖಗೋಳಶಾಸ್ತ್ರ ಪ್ರಾಧ್ಯಾಪಕ ಲಾರೆನ್ಸ್ ರುಡ್ನಿಕ್ ಹೇಳಿದರು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ವದೇಶಕ್ಕೆ ಮರಳಲು ಪಾಕ್ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಆ ದೇಶದಲ್ಲಿ ಕೋಲಾಹಲ ಹುಟ್ಟುಹಾಕಿತು. ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರ ಸಚಿವ ಶೇರ್ ಆಫ್ಘಾನ್ ನಿಯಾಜಿ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು. ಟಿವಿ ವಾಹಿನಿಯೊಂದರಲ್ಲಿ ಕೋರ್ಟ್ ತೀರ್ಪನ್ನು ಟೀಕಿಸಿದ್ದ ಸಚಿವ ನಿಯಾಜಿ, ನ್ಯಾಯಾಂಗವೂ ಈಗ ರಾಜಕೀಯ ಪಕ್ಷದಂತೆ ವರ್ತಿಸುತ್ತಿದೆ. ತಾವು ಈ ತೀರ್ಪನ್ನು ಒಪ್ಪುವುದಿಲ್ಲ. ನ್ಯಾಯಾಂಗ ಸಂಘರ್ಷದ ಹಾದಿ ಹಿಡಿದಿದೆ ಎಂದು ಹೇಳಿದ್ದರು.

2007: ಕರ್ನಾಟಕ ರಾಜ್ಯ ಸರ್ಕಾರ ನೀಡುವ 2006-07ನೇ ಸಾಲಿನ ಬಸವ ಪ್ರಶಸ್ತಿಯನ್ನು ಮಾಜಿ ರಾಷ್ಟ್ರಪತಿ ಪ್ರೊ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಪ್ರಕಟಿಸಿದರು.

2007: ರಾಗ ಸಂಯೋಜನೆ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಭಾರ್ತಿ ಎಂಟರ್ ಪ್ರೈಸಸ್ ಅಧ್ಯಕ್ಷ ಸುನೀಲ್ ಮಿತ್ತಲ್ ಅವರು ರಾಷ್ಟ್ರಗೀತೆಗೆ ಅಗೌರವ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತು. ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ. ಮೋಹನ್ ರಾಜ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಪಿ. ಶಹಾ ಹಾಗೂ ನ್ಯಾಯಮೂರ್ತಿ ಪಿ. ಜೋತಿಮಣಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿತು. ರೆಹಮಾನ್ ಅವರು ರಾಷ್ಟ್ರಗೀತೆಯನ್ನು `ಮೊಟಕುಗೊಳಿಸಿ ಹಾಗೂ ವಿರೂಪಗೊಳಿಸಿ' ರಾಗಸಂಯೋಜನೆ ಮಾಡಿದ ಹಾಡನ್ನು ಪ್ರಸಾರ ಮಾಡುವುದು ಹಾಗೂ ಈ ಹಾಡಿನ ಕ್ಯಾಸೆಟ್ ಮಾರಾಟ ಮಾಡುವುದನ್ನು ಕಾನೂನು ಬಾಹಿರವೆಂದು ಘೋಷಿಸುವಂತೆ ಆಗ್ರಹಿಸಿ ಮೋಹನ್ ರಾಜ್ ಅರ್ಜಿ ಸಲ್ಲಿಸಿದ್ದರು. ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್ಟೆಲ್ ಪ್ರಾಯೋಜಿಸಿದ ಈ ಕಾರ್ಯಕ್ರಮ ಹಲವು ಟಿ.ವಿ ಚಾನೆಲ್ಲುಗಳಲ್ಲಿ ಪ್ರಸಾರಗೊಂಡಿತ್ತು.

2006: ಜೆಕ್ ಗಣರಾಜ್ಯದ ರಾಜಧಾನಿ ಪ್ಲೇಗ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಸಂಘದ ಮಹಾಧಿವೇಶನದಲ್ಲಿ ವಿಜ್ಞಾನಿಗಳು ಒಂಬತ್ತು ಗ್ರಹಗಳ ಸಾಲಿನಿಂದ `ಪ್ಲೂಟೋ'ವನ್ನು ಕಿತ್ತು ಹಾಕಲು ತೀರ್ಮಾನಿಸಿದರು. ಗ್ರಹ ಎಂದು ಕರೆಸಿಕೊಳ್ಳಲು ನಿರ್ದಿಷ್ಟ ವ್ಯಾಖ್ಯಾನವ್ದಿದು, ಇದರ ಪ್ರಕಾರ `ಪ್ಲೂಟೋ' ಗ್ರಹಗಳ ಸಾಲಿಗೆ ಸೇರುವುದಿಲ್ಲ ಎಂಬುದು ವಿಜ್ಞಾನಿಗಳ ಪ್ರತಿಪಾದನೆ. ಸೌಮಂಡಲದ 9ನೇ ಗ್ರಹವಾಗಿದ್ದ ಪ್ಲೂಟೋ 1930ರಲ್ಲಿ ಪತ್ತೆಯಾಗಿತ್ತು. ವಿಜ್ಞಾನಿಗಳ ತೀರ್ಮಾನದ ಪ್ರಕಾರ ಇನ್ನು ಮುಂದೆ ಸೌರಮಂಡಲದಲ್ಲಿ ಇರುವ ಗ್ರಹಗಳು ಎಂಟು ಮಾತ್ರ. ಅವುಗಳು ಯಾವುವು ಎಂದರೆ ಮಂಗಳ, ಬುಧ, ಭೂಮಿ, ಗುರು, ಶುಕ್ರ, ಶನಿ, ಯುರೇನಸ್ ಮತ್ತು ನೆಪ್ಚೂನ್.

2006: ಯುರೋಪಿನ ಅತ್ಯಂತ ದೊಡ್ಡ ಹಿಂದೂ ದೇವಾಲಯ ಎನ್ನಲಾದ `ವೆಂಕಟೇಶ್ವರ ದೇವಾಲಯ'ವನ್ನು ಬರ್ಮಿಂಗ್ ಹ್ಯಾಮ್ ಬಳಿ ಉದ್ಘಾಟಿಸಲಾಯಿತು. 57.3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು ತಿರುಪತಿಯ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲಿಯೇ ನಿರ್ಮಿಸಲಾಗಿದೆ. 6.6 ಮೀಟರ್ ಎತ್ತರದ ಕೃಷ್ಣನ ವಿಗ್ರಹವನ್ನು ಇಲ್ಲಿ ಸ್ಥಾಪಿಸಲಾಗಿದೆ.

2006: `ಆರ್ಟ್ ಆಫ್ ಲಿವಿಂಗ್' ಸಂಸ್ಥಾಪಕ ಶ್ರೀಶ್ರೀಶ್ರೀ ರವಿಶಂಕರ ಗುರೂಜಿ ಅವರಿಗೆ ಮಂಗೋಲಿಯಾ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ `ಪೋಲ್ ಸ್ಟಾರ್' ಪ್ರದಾನ ಮಾಡಲಾಯಿತು. ಭಾರತ- ಮಂಗೋಲಿಯಾ ನಡುವಣ ಸ್ನೇಹವರ್ಧನೆಗೆೆ ನೀಡಿದ ಮೌಲಿಕ ಕಾಣಿಕೆಗಾಗಿ ಮಂಗೋಲಿಯಾದ ಉಲನ್ ಬತರಿನಲ್ಲಿ ರಾಷ್ಟ್ರಾಧ್ಯಕ್ಷರ ಕಚೇರಿಯಲ್ಲಿ ಈ ಪ್ರಶಸ್ತಿಯನ್ನು ಗುರೂಜಿ ಅವರಿಗೆ ನೀಡಲಾಯಿತು.

2006: ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಬಿ.ಆರ್. ವಾಡಪ್ಪಿ (92) ಧಾರವಾಡದಲ್ಲಿ ನಿಧನರಾದರು. ಸರ್ವೋದಯ ಸಾಹಿತ್ಯ ಆರಂಭದಲ್ಲಿ ಸಾಹಿತ್ಯ ಕೃಷಿ ಆರಂಭಿಸಿದ ವಾಡಪ್ಪಿ ಅವರು ವಿಮರ್ಶೆ, ನಾಟಕ, ಭಾಷಣ, ಹರಟೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಮೌಲಿಕ ಕೃತಿಗಳನ್ನು ಹೊರತಂದವರು. 1991ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.

2006: ಸಂಗೀತಗಾರ ವಲ್ಲಾನ್ ಚಕ್ರವರ್ತಿಲು ಕೃಷ್ಣಮಾಚಾರುಲು (84) ವಿಜಯವಾಡದ ಸ್ವಗೃಹದಲ್ಲಿ ನಿಧನರಾದರು. 1923ರಲ್ಲಿ ಕೃಷ್ಣಾ ಜಿಲ್ಲೆ ಜಗ್ಗಯ್ಯ ಪೇಟೆಯಲ್ಲಿ ಜನಿಸಿದ ಅವರು ಆಕಾಶವಾಣಯಲ್ಲಿ ಮೂರೂವರೆ ದಶಕ ಕಾಲ ಅತ್ಯುನ್ನತ ಶ್ರೇಣಿಯ ಸಂಗೀತ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಸಂಸ್ಕೃತ, ತೆಲುಗು ಭಾಷೆಗಳಲ್ಲಿ ವಿದ್ವಾಂಸರಾಗಿದ್ದ ಅವರನ್ನು ಆಂಧ್ರಪ್ರದೇಶ ಸಂಗೀತ ನಾಟಕ ಅಕಾಡೆಮಿಯು `ಗಾನಕಲಾ ಪ್ರಪೂರ್ಣ' ಪ್ರಶಸ್ತಿ ನೀಡಿ ಗೌರವಿಸಿತ್ತು.

1995: ಮೈಕ್ರೋಸಾಫ್ಟ್ ಕಾರ್ಪೊರೇಷನ್ `ವಿಂಡೋಸ್ 95' ಅನ್ನು ನ್ಯೂಯಾರ್ಕಿನಲ್ಲಿ ಬಿಡುಗಡೆ ಮಾಡಿತು.

1974: ಫಕ್ರುದ್ದೀನ್ ಆಲಿ ಅಹಮದ್ ಅವರು ಭಾರತದ ಐದನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1971: ಅಜಿತ್ ವಾಡೇಕರ್ ನೇತೃತ್ವದಲ್ಲಿ ಭಾರತವು ಇಂಗ್ಲೆಂಡಿನಲ್ಲಿ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ತನ್ನ ಮೊತ್ತ ಮೊದಲ ಜಯವನ್ನು (1-0) ಗಳಿಸಿತು. ಲೆಗ್ ಸ್ಪಿನ್ನರ್ ಚಂದ್ರಶೇಖರ್ ಅವರು ಈ ಜಯದ `ಹೀರೋ' ಆಗ್ದಿದರು.

1969: ವರಾಹಗಿರಿ ವೆಂಕಟಗಿರಿ ಅವರು ಭಾರತದ ನಾಲ್ಕನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1968: ಖ್ಯಾತ ಭೂಗರ್ಭ ಶಾಸ್ತ್ರಜ್ಞ ರಾಧಾ ಕಮಲ್ ಮುಖರ್ಜಿ ನಿಧನರಾದರು.

1955: ಡಾ. ರಾಮಮನೋಹರ ಲೋಹಿಯಾ ಅವರು ಭಾರತೀಯ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.

1952: ಸೋಷಿಯಲಿಸ್ಟ್ ಪಾರ್ಟಿ ಮತ್ತು ಕೃಷಿಕ್ ಮಜ್ದೂರ್ ಪಾರ್ಟಿ ವಿಲೀನ.

1932: ಅಮೇಲಿಯಾ ಈಯರ್ ಹಾರ್ಟ್ ಅವರು ಅಮೆರಿಕದ ಮೇಲಿನಿಂದ ನಿಲುಗಡೆ ರಹಿತವಾಗಿ ವಿಮಾನಯಾನ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಲಾಸ್ ಏಂಜೆಲಿಸ್ ನಿಂದ ನ್ಯೂಜೆರ್ಸಿಯನೆವಾರ್ಕಿಗೆ 19 ಗಂಟೆಗಳ ಕಾಲ ಪ್ರಯಾಣಿಸಿದರು.

1924: ಸಾಹಿತಿ ಕೆ.ಎಚ್. ಶ್ರೀನಿವಾಸ್ ಜನನ.

1911: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ್ತಿ ವೀಣಾದಾಸ್ ಜನನ.

1903: ಕನ್ನಡ ಸಾಹಿತ್ಯಾರಾಧಕ, ಏಕೀಕರಣ ಹೋರಾಟಗಾರ , ಕರ್ನಾಟಕ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ (1903-2004) ಅವರು ನಿಟ್ಟೂರು ಶಾಮಣ್ಣ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ಹೈಕೋರ್ಟಿನ ಮುಖ್ಯನ್ಯಾಯಾಧೀಶರಾಗಿ 1963ರಲ್ಲಿ ನಿವೃತ್ತರಾದ ಬಳಿಕ ಅದೇ ವರ್ಷ ಹಂಗಾಮೀ ರಾಜ್ಯಪಾಲರಾಗಿ, ನಂತರ ಭಾರತ ಸರ್ಕಾರದ ಪ್ರಥಮ ವಿಜಿಲೆನ್ಸ್ ಕಮೀಷನರ್ ಆಗಿ ಸಾರ್ವಜನಿಕ ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂತಾನಂ ಸಮಿತಿ ರಚನೆಗೆ ಕಾರಣರಾಗಿ 1968ರಲ್ಲಿ ನಿವೃತ್ತರಾದರು. ಸತ್ಯಶೋಧನಾ ಪ್ರಕಟಣಾ ಮಂದಿರ ಸ್ಥಾಪಿಸಿ ಹಲವಾರು ಗ್ರಂಥಗಳನ್ನು ಪ್ರಕಟಿಸಿದ ಅವರು ಶಿವರಾಮ ಕಾರಂತರ `ಬಾಲ ಪ್ರಪಂಚ'ಕ್ಕೆ (ವಿಶ್ವಕೋಶ) ಪಡಿಯಚ್ಚನ್ನು ಜರ್ಮನಿಯಿಂದ ತರಿಸಿ, ಆ ದಿನಗಳಲ್ಲೇ ಅದರ ಮುದ್ರಣಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕೃತರಾದ ಅವರು 2004ರ ಆಗಸ್ಟ್ 12ರಂದು ನಿಧನರಾದರು.

1891: ಚಲನಚಿತ್ರ ಕ್ಯಾಮೆರಾ ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಗೆ ಇದಕ್ಕೆ ಸಂಬಂಧಿಸಿದ ಹಕ್ಕುಸ್ವಾಮ್ಯ ನೀಡಲಾಯಿತು.

1690: ಜಾಬ್ ಚಾರ್ನಾಕ್ ಅವರು 1690ರಲ್ಲಿ ಈದಿನ ಕೋಲ್ಕತಾ (ಅಂದಿನ ಕಲ್ಕತ್ತಾ) ನಗರವನ್ನು ಸ್ಥಾಪಿಸಿದರು. ಹಾಗಾಗಿ ಈ ದಿನವನ್ನು ಕೋಲ್ಕತಾ ದಿನ ಎಂದು ಘೋಷಿಸಲಾಯಿತು. 2000ದಲ್ಲಿ ಇದೇ ದಿನ ಕೋಲ್ಕತಾ ಮುನಿಸಿಪಲ್ ಕಾರ್ಪೊರೇಷನ್ 310ನೇ ಕೋಲ್ಕತಾ ಜನ್ಮದಿನವನ್ನು ಆಚರಿಸಿತು. ಈ ಸಂದರ್ಭದಲ್ಲಿ ಕೋಲ್ಕತಾ ನಗರ ಕುರಿತ ವೆಬ್ಸೈಟ್ ಬಿಡುಗಡೆ ಮಾಡಲಾಯಿತು.

1608: ಮೊದಲ ಇಂಗ್ಲಿಷ್ ರಾಯಭಾರಿ ಸೂರತ್ ಗೆ ಆಗಮಿಸಿದ.

1600: ಈಸ್ಟ್ ಇಂಡಿಯಾ ಕಂಪೆನಿಯ ಮೊದಲ ಹಡಗು `ಹೆಕ್ಟರ್' ಸೂರತ್ ಬಂದರಿಗೆ ಆಗಮಿಸಿತು.

ಕ್ರಿ.ಶ.79: ವೆಸೂವಿಯಸ್ ಜ್ವಾಲಾಮುಖಿ ಬಾಯ್ದೆರೆದು ಪಾಂಪೆ ಮತ್ತು ಸ್ಟಾಬೀ ಪಟ್ಟಣಗಳನ್ನು ಬೂದಿಯ ಅಡಿಯಲ್ಲಿ ಮುಳುಗಿಸಿದರೆ, ಹರ್ಕ್ಯುಲೇನಿಯಮ್ ನಗರವನ್ನು ಲಾವಾರಸದ ಕೆಸರಿನಲ್ಲಿ ಮುಳುಗಿಸಿತು. 1631ರ ಡಿಸೆಂಬರ್ 16ರಂದು ಜ್ವಾಲಾಮುಖಿ ಮತ್ತೊಮ್ಮೆ ಭಾರೀ ಪ್ರಮಾಣದಲಿ ಬಾಯ್ದೆರೆದು 3000 ಜನರನ್ನು ಬಲಿ ತೆಗೆದುಕೊಂಡಿತು.

Saturday, August 23, 2008

Talk to Swamji Dirctly...!

Talk to Swamji Dirctly..!


Shree Raghaveshwara Bharathi Mahaswamiji participates in Live Phone in Programme - 'Dhwani Pratidhwani'. That is on coming Tuesday (August 26th) from 2 to 3 pm. Udaya TV & Udaya News (Kannada TV Channels) telecast this programme.

Many questions may be boggling you? Why Sri Raghaveshara Bharti Swamiji took up the project Kamdugha? What is the need of Cow Protection? How Protection of cow will prospour Indian Agriculture? How cow products like cow urine, cow milk, cow dung etc help to maintain our health?

Why Sri Raghaveshwar Mahaswamiji requested the Government to handover Gokarna Mahabaleshwar Temple to Ramachandrapura Matha? What are his plans to improve Gokarna?

How one can co operative with Swamiji in such novel tasks?

Sri Raghaveshwar Bharati Mahaswamiji, who is popularly known as 'Gou Swamiji' in Hindi araes, will answer you.

If you want to talk directly with Sri Raghaveshwar Mahaswamji, on the above issues or any other issue you can directly talk with him on Live Phone in Programme 'Dhwani Pratidhwani'.

Udaya TV & Udaya News (Kannada TV Channels) telecast this programme on Tuesday 26th August 2008 from 2 to 3 pm.

This is the best opportunity to talk with Shree Swamiji. Make use of it.

Krishnam Vande Jagadgurum...!

Krishnam Vande

Jagadgurum!



PARYAYA wishes all the best, healthy and prospours life on the occasion of Sri Krishna Janmastami Saturday, 23rd August 2008'. Sri Krishna Janmashtami' may make you more Divine. Because the 'Divinity' is the only thing which gives Eternal Bliss, Joy....

ಇಂದಿನ ಇತಿಹಾಸ History Today ಆಗಸ್ಟ್ 23

ಇಂದಿನ ಇತಿಹಾಸ

ಆಗಸ್ಟ್ 23

ಭಾರತೀಯ ಚಿತ್ರನಟಿ ಸಾಯಿರಾಬಾನು ಜನ್ಮದಿನ. ಈಕೆಯ ಮದುವೆ ಬಾಲಿವುಡ್ ನಟ ದಿಲೀಪ್ ಕುಮಾರ್ ಜೊತೆ ನಡೆಯಿತು.

2007: ಪಾಕಿಸ್ಥಾನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರಿಗೆ ಮುಖಭಂಗವಾಗುವಂತೆ ಪಾಕಿಸ್ಥಾನಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪಿನಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಸಹೋದರ ಶಹಬಾಜ್ ಅವರಿಗೆ ಸ್ವದೇಶಕ್ಕೆ ಮರಳಲು ಅನುಮತಿ ನೀಡಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧುರಿ ನೇತೃತ್ವದ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಷರೀಫ್ ಸಹೋದರರ ಕುರಿತು ಒಮ್ಮತದ ತೀರ್ಪು ನೀಡಿ, ಸ್ವದೇಶಕ್ಕೆ ಮರಳುವುದು ಹಾಗೂ ವಾಸಿಸುವುದು ಅವರ ಜನ್ಮಸಿದ್ಧ ಹಕ್ಕಾಗಿದೆ ಎಂದು ಹೇಳಿತು. ಈ ತೀರ್ಪಿನಿಂದಾಗಿ ಈ ವರ್ಷದ ಅಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಷರೀಫ್ ಸಹೋದರರು ಪಾಲ್ಗೊಳಲು ಅವಕಾಶ ಲಭಿಸಿದಂತಾಯಿತು. 1999ರ ಅಕ್ಟೋಬರಿನಲ್ಲಿ ನಡೆದ ಸೇನಾ ಕ್ರಾಂತಿಯಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿದ್ದ ಮುಷರಫ್, ನವಾಜ್ ಷರೀಫ್ ಅವರನ್ನು ಪ್ರಧಾನಿ ಪಟ್ಟದಿಂದ ಪದಚ್ಯುತಗೊಳಿಸಿದ್ದರು. ಅಧಿಕಾರ ಕಳೆದುಕೊಂಡ ಒಂದು ವರ್ಷದ ಬಳಿಕ ಷರೀಫ್ ಸಹೋದರರು ದೇಶತ್ಯಾಗ ಮಾಡಿ, ಸೌದಿಅರೇಬಿಯಾದಲ್ಲಿ ಭೂಗತರಾಗಿ ವಾಸಿಸುತ್ತಿದ್ದರು. ಈ ವರ್ಷದ ಅಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪಾಲ್ಗೊಳ್ಳಲು ತಮಗೆ ಅನುವು ಮಾಡಿಕೊಡಬೇಕು ಹಾಗೂ ಸ್ವದೇಶಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಶರೀಫ್ ಹಾಗೂ ಅವರ ಸಹೋದರ ಶಹಬಾಜ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

2007: ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಗೊಂದಲಕಾರಿ ಹೇಳಿಕೆಗಳ ಮೂಲಕ ತಮ್ಮನ್ನು ಛೇಡಿಸುತ್ತಿರುವ ಜೆಡಿಎಸ್ ಗೆ ಚುರುಕು ಮುಟ್ಟಿಸುವುದಕ್ಕಾಗಿ ಸಂಪುಟ ಸಭೆಗೆ ಬಹಿಷ್ಕಾರ ಹಾಕಲು ಬಿಜೆಪಿ ಸಚಿವರು ವಿಫಲ ಯತ್ನ ನಡೆಸಿದರು. ಇದಕ್ಕೆ ಪ್ರತಿಯಾಗಿ ಮಧ್ಯಂತರ ಚುನಾವಣೆಗೆ ಹೋಗೋಣ ಎನ್ನುವ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರ ಧಮಕಿಗೆ, ಚುನಾವಣೆಗೆ ತಾವೂ ಸಿದ್ಧ ಎನ್ನುವ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಸವಾಲು ಹಾಕಿದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಕೊನೆಗೆ ಸಂಧಾನಕ್ಕೆ ಶರಣಾದವು.

2007: ಕರ್ನಾಟಕ ರಾಜ್ಯ ಹೆದ್ದಾರಿಯ ಶಹಾಪುರ- ಜೇವರ್ಗಿ ರಸ್ತೆಯ ನಡುವೆ ಮೂಡಬೂಳ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಗೂಡ್ಸ್ ಟೆಂಪೊ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 11 ಮಂದಿ ಮೃತರಾದರು.

2007: ಕರ್ನಾಟಕ ಏಕೀಕರಣವಾದ ಐವತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹೊಸ ತಾಲೂಕುಗಳ ರಚನೆಗೆ ರಾಜ್ಯ ಸರ್ಕಾರ ಮುಂದಾಯಿತು. ರಾಜ್ಯದಲ್ಲಿ ಎಲ್ಲೆಲ್ಲಿ ಹೊಸ ತಾಲೂಕುಗಳ ರಚನೆ ಆಗಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳ ಸಮಿತಿ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿತು.

2007: ರಾಮನಗರದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಗೃಹ ಸಚಿವ ಎಂ. ಪಿ. ಪ್ರಕಾಶ್ ಮತ್ತು ಕಂದಾಯ ಸಚಿವ ಜಗದೀಶ ಶೆಟ್ಟರ್ ಅವರು ನೂತನ ರಾಮನಗರ ಜಿಲ್ಲೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಹೊಸದಾಗಿ ರಚನೆಯಾಗಿರುವ ರಾಮನಗರ ಜಿಲ್ಲೆಯ ಕೇಂದ್ರಸ್ಥಾನವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಮತ್ತು ದೇಶಕ್ಕೆ ಒಬ್ಬ ಪ್ರಧಾನಿಯನ್ನು ನೀಡಿದ ಹೆಗ್ಗಳಿಕೆ ಗಳಿಸಿಕೊಂಡಿದೆ. ಕೆಂಗಲ್ ಹನುಮಂತಯ್ಯನವರು, ಎಚ್.ಡಿ. ದೇವೇಗೌಡರು ಹಾಗೂ ಹಾಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದ ಕ್ಷೇತ್ರವಿದು.

2006: ಭಾರತದ ಸಾಫ್ಟ್ ವೇರ್ ರಂಗದ ದೈತ್ಯ ಸಂಸ್ಥೆಯಾಗಿರುವ ವಿಪ್ರೋದ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರು ಪೋರ್ಬ್ಸ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಆರನೇ ದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟು 13.3 ಶತಕೋಟಿ ಅಮೆರಿಕ ಡಾಲರ್ ಆದಾಯದೊಂದಿಗೆ ಆರನೇ ಸ್ಥಾನ ಪಡೆದಿರುವ ಪ್ರೇಮ್ ಜಿ ಗೂಗಲ್ ಸ್ಥಾಪಕ ಸರ್ಜೀ ಬ್ರಿನ್ ಮತ್ತು ಲ್ಯಾರಿ ಪೇಜ್, ಇಬೇ ಸಂಸ್ಥಾಪಕ ಪಿರ್ರಿ ಒಮಿಡ್ಯಾರ್ ಮತ್ತು ಜರ್ಮನಿಯ ಸಾಫ್ಟ್ ವೇರ್ ಕಂಪೆನಿ `ಸ್ಯಾಪ್' ಸಂಸ್ಥಾಪಕ ಹ್ಯಾಸ್ಸೋ ಪ್ಲಾಟೆನರ್ ಅವರನ್ನು ಹಿಂದೆ ಹಾಕಿದರು. 50 ಶತಕೋಟಿ ಡಾಲರ್ ನಿವ್ವಳ ಆದಾಯದ ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಸತತ 12ನೇ ಬಾರಿ ನಂಬರ್ 1 ಶ್ರೀಮಂತ ಸ್ಥಾನ ಪಡೆದರು.

2006: ಕಾರ್ಕಳ - ಶೃಂಗೇರಿ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಕಟ್ಟೆ ವನ್ಯಜೀವಿ ವಿಭಾಗದ ಕಚೇರಿ ಮೇಲೆ ದಾಳಿ ನಡೆಸಿದ ನಕ್ಸಲೀಯರ ಗುಂಪೊಂದು ದಾಖಲೆಪತ್ರಗಳು ಮತ್ತು ಜೀಪಿಗೆ ಬೆಂಕಿ ಹಚ್ಚಿತು. ನಸುಕಿನ 1.30ರ ವೇಳೆಯಲ್ಲಿ ಈ ಘಟನೆ ನಡೆಯಿತು.

2006: ಮಾಜಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಕರ್ನಾಟಕದ ಪಂಕಜ್ ಅಡ್ವಾಣಿ ಅವರು ಪ್ರತಿಷ್ಠಿತ ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದರು.

2006: ಹೆಸರಾಂತ ಮಲೆಯಾಳಿ ಕವಿ ಡಾ. ಕೆ. ಅಯ್ಯಪ್ಪ ಫಣಿಕ್ಕರ್ (76) ತಿರುವನಂತಪುರದಲ್ಲಿ ನಿಧನರಾದರು. ಕೇರಳ ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಭಾರತೀಯ ಸಾಹಿತ್ಯ, ಪಾಶ್ಚಾತ್ಯ ಸಾಹಿತ್ಯ, ಕಲೆ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದರು. ಮಲೆಯಾಳಿ ಸಾಹಿತ್ಯದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದ ಫಣಿಕ್ಕರ್ ಅವರ `ಕುರುಕ್ಷೇತ್ರಂ' ಕಾವ್ಯ ಮಲೆಯಾಳಿ ಸಾಹಿತ್ಯಕ್ಕೆ ತಿರುವು ತಂದ ಕೃತಿ.

2006: ಪಾಕಿಸ್ಥಾನದ ಮಾಜಿ ಕ್ರಿಕೆಟ್ ಪಟು ವಾಸಿಂ ರಾಜಾ (54) ಅವರು ಲಂಡನ್ನಿನಲ್ಲಿ ಪ್ರದರ್ಶನ ಕ್ರಿಕೆಟ್ ಪಂದ್ಯವೊಂದರಲ್ಲಿ ಆಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೈದಾನದಲ್ಲೇ ಕುಸಿದು ಬಿದ್ದು ಮೃತರಾದರು.

1949: ಸಾಹಿತಿ ಎಂ.ವಿ. ಶರ್ಮ ತದ್ದಲಸೆ ಜನನ.

1947: ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಜವಾಹರಲಾಲ್ ನೆಹರೂ ಸಂಪುಟದಲ್ಲಿ ಉಪ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತದ ಮೊದಲ ಉಪ ಪ್ರಧಾನಿಯಾಗಿ ಹಾಗೂ ಗೃಹ ಸಚಿವರಾಗಿ, ಹರಿದು ಹಂಚಿಹೋಗಿದ್ದ ಭಾರತದ ರಾಜ್ಯಗಳನ್ನು ಒಂದುಗೂಡಿಸಿ `ಉಕ್ಕಿನ ಮನುಷ್ಯ' ಎಂಬ ಖ್ಯಾತಿಗೆ ಪಾತ್ರರಾದ ಸರ್ದಾರ್ ಪಟೇಲ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು.

1947: ಭಾರತೀಯ ಚಿತ್ರನಟಿ ಸಾಯಿರಾಬಾನು ಜನ್ಮದಿನ. ಈಕೆಯ ಮದುವೆ ಬಾಲಿವುಡ್ ನಟ ದಿಲೀಪ್ ಕುಮಾರ್ ಜೊತೆ ನಡೆಯಿತು.

1943: ಇತಿಹಾಸದಲ್ಲೇ ಅತಿದೊಡ್ಡ `ಟ್ಯಾಂಕ್ ಸಮರ' ಎಂದೇ ಖ್ಯಾತಿ ಪಡೆದ `ಕರ್ಸ್ಕ್ ಕದನ' ಕೊನೆಗೊಂಡಿತು. 6000 ಟ್ಯಾಂಕುಗಳು, 2 ಲಕ್ಷ ಪಡೆಗಳು ಮತ್ತು 4000 ಯುದ್ಧ ವಿಮಾನಗಳನ್ನು ಈ ಕದನದಲ್ಲಿ ಬಳಸಲಾಗಿತ್ತು. ಜುಲೈ 5ರಂದು ಆರಂಭವಾದ ಈ ಕದನ ಎರಡನೇ ಜಾಗತಿಕ ಸಮರ ಕಾಲದಲ್ಲಿ ರಷ್ಯದ ಪಶ್ಚಿಮ ಭಾಗದಲ್ಲಿ ಜರ್ಮನಿ ನಡೆಸಿದ ಅಯಶಸ್ವಿ ದಾಳಿ ಎನಿಸಿತು. ಕರ್ಸ್ಕ್ ನಗರಕ್ಕಾಗಿ ನಡೆದ ಈ ಕದನದ ಸೋಲು ಜರ್ಮನಿಯ ದಾಳಿ ಸಾಮರ್ಥ್ಯವನ್ನು ಕುಗ್ಗಿಸಿ, ಅದರ ಪೂರ್ವ ಭಾಗದ ಮೇಲಿನ 1944-45ರ ಸೋವಿಯತ್ ದಾಳಿಗಳಿಗೆ ದಾರಿ ಸುಗಮಗೊಳಿಸಿತು.

1944: ರೊಮೇನಿಯಾದ ರಾಜ ಮೈಕೆಲ್ ಅವರು ಪ್ರಧಾನಿ ಅಯೋನ್ ಅಂಟೋನೆಸ್ಕ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದರು.

1930: ಸಾಹಿತಿ ಕೆ.ಎಸ್. ಆಮೂರ ಜನನ.

1930: ಸಾಹಿತಿ ಲಲಿತಾ ವೃಷಭೇಂದ್ರ ಸ್ವಾಮಿ ಜನನ.

1926: ಇಟಲಿ ಸಂಜಾತ ಅಮೆರಿಕನ್ ಚಲನಚಿತ್ರ ನಟ ರುಡಾಲ್ಫ್ ವ್ಯಾಲೆಂಟಿನೊ ತಮ್ಮ 31ನೇ ವಯಸ್ಸಿನಲ್ಲಿ ಅಲ್ಸರ್ ಪರಿಣಾಮವಾಗಿ ಮೃತರಾದರು. ಆ ಕಾಲದ `ಗ್ರೇಟ್ ಲವರ್' ಎಂದೇ ಖ್ಯಾತಿ ಪಡೆದಿದ್ದ ಇವರ ಸಾವು ಸಾಮೂಹಿಕ ಹಿಸ್ಟೀರಿಯಾ ಮತ್ತು ಹಲವಾರು ಮಂದಿಯ ಆತ್ಮಹತ್ಯೆಗಳಿಗೆ ಕಾರಣವಾಯಿತು.

1913: ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಅರಮನೆ ವಿದ್ವಾಂಸ ಗಂಜಾಂ ತಿಮ್ಮಣ್ಣಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ ಜನಿಸಿದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಜೊತೆಗೇ ಹಲವಾರು ಕೃತಿಗಳನ್ನು ರಚಿಸಿದ ವೆಂಕಟಸುಬ್ಬಯ್ಯ ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು ಸೇರಿದಂತೆ 60ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪುರಸ್ಕಾರ, ರಾಜ್ಯ ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಅಂಕಣ ಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೋರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಅವರಿಗೆ ಲಭಿಸಿವೆ.

1879: ನವರೋಜಿ ವಾಡಿಯಾ ಅವರು ಮುಂಬೈಯಲ್ಲಿ ಬಾಂಬೆ ಡೈಯಿಂಗ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿ ಲಿಮಿಟೆಡ್ ನ್ನು ಸ್ಥಾಪಿಸಿದರು.

1573: ಅಕ್ಬರನು ರಾಜ್ಯದಲ್ಲಿ ವ್ಯಾಪಿಸಿದ ದಂಗೆಯ ಸುದ್ದಿ ಕೇಳಿ ಆಗ್ರಾವನ್ನು ಬಿಟ್ಟು ಅಹಮದಾಬಾದಿಗೆ ಹೊರಟ. 11 ದಿನಗಳ ಬಳಿಕ ಆತ ಅಹಮದಾಬಾದ್ ತಲುಪಿದ.

1305: ಮೊದಲ ವರ್ಷಗಳಲ್ಲಿ ಸ್ಕಾಟಿಷ್ ರೆಸಿಸ್ಟೆನ್ಸ್ ಪಡೆಗಳನ್ನು ಮುನ್ನಡೆಸಿದ ನಾಯಕ ಸ್ಕಾಟಿಷ್ ದೇಶಪ್ರೇಮಿ ಸರ್. ವಿಲಿಯಂ ವಾಲೇಸ್ ನನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಿ ನಂತರ ಸೀಳಿ, ತಲೆ ಕಡಿದು ಉಳಿದ ದೇಹವನ್ನು ನಾಲ್ಕು ಭಾಗಗಳಾಗಿ ಕತ್ತರಿಸಲಾಯಿತು. ಮರುವರ್ಷವೇ 1306ರಲ್ಲಿ ರಾಬರ್ಟ್ ಬ್ರೂಸ್ ದಂಗೆಯೆದ್ದು ಸ್ಕಾಟ್ ಲ್ಯಾಂಡಿಗೆ ಸ್ವಾತಂತ್ರ್ಯ ತಂದುಕೊಟ್ಟ.

Friday, August 22, 2008

ಇಂದಿನ ಇತಿಹಾಸ History Today ಆಗಸ್ಟ್ 22

ಇಂದಿನ ಇತಿಹಾಸ

ಆಗಸ್ಟ್ 22

ಮೇಡಂ ಭಿಕಾಜಿ ಕಾಮಾ ಅವರು ತಾವೇ ವಿನ್ಯಾಸಗೊಳಿಸಿದ ಭಾರತೀಯ ರಾಷ್ಟ್ರೀಯ ಧ್ವಜವನ್ನು ಜರ್ಮನಿಯ ಸ್ಟುಟ್ ಗರ್ಟಿನಲ್ಲಿ ನಡೆದ ಸೋಷಿಯಲಿಸ್ಟ್ ಕಾಂಗ್ರೆಸ್ಸಿನಲ್ಲಿ ಪ್ರದರ್ಶಿಸಿದರು.

2007: ಆಗಸ್ಟ್ 8ರಂದು ಬಾಹ್ಯಾಕಾಶಕ್ಕೆ ತೆರಳಿದ್ದ ನಾಸಾದ `ಎಂಡೆವರ್' ಗಗನನೌಕೆ ವೇಳಾಪಟ್ಟಿಗಿಂತ ಒಂದು ದಿನ ಮುಂಚೆಯೇ ಈದಿನ ರಾತ್ರಿ 10 ಗಂಟೆಗೆ (ಮಧ್ಯಾಹ್ನ 12.32- ಅಮೆರಿಕ ಕಾಲಮಾನ) ಸುರಕ್ಷಿತವಾಗಿ ಧರೆಗಿಳಿಯಿತು. ಏಳು ಗಗನಯಾತ್ರಿಗಳನ್ನು ಹೊತ್ತ `ಎಂಡೆವರ್' ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಬಂದಿಳಿದಾಗ ನಾಸಾ ವಿಜ್ಞಾನಗಳ ಮುಖದಲ್ಲಿ ಸಂತಸ ಮಿನುಗಿತು.

2007: ಐಎಸ್ ಐ ದೇಶದ ಕಾನೂನು ಜಾರಿ ಮಾಡುವ ಸಂಸ್ಥೆಯಾಗಲಿ ಅಥವಾ ಸುಂಕ ಪ್ರಾಧಿಕಾರವಾಗಲಿ ಅಲ್ಲ. ದೇಶದ ಕಾನೂನಿನ ಅಡಿಯಲ್ಲಿ ಯಾರನ್ನೂ ಬಂಧಿಸುವ ಅಧಿಕಾರ ಆ ಸಂಸ್ಥೆಗಿಲ್ಲ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ಅಮೂಲ್ಯ ಹರಳುಗಳ ಕಳ್ಳ ಸಾಗಣೆ ಪ್ರಕರಣದಲ್ಲಿ ಐಎಸ್ ಐನಿಂದ ಬಂಧಿತರಾದ ಪಾಕಿಸ್ತಾನ ಮೂಲದ ಜರ್ಮನ್ ಪ್ರಜೆ ಅಲೀಂ ನಾಸಿರ್ ಅವರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ನೇತೃತ್ವದ ಸುಪ್ರೀಂ ಕೋರ್ಟ್ ಪೂರ್ಣಪೀಠವು ಈ ತೀರ್ಪು ನೀಡಿತು. ಅಲೀಂ ನಾಸಿರ್ ಅವರನ್ನು ಯಾವ ಕಾನೂನಿನಡಿ ಐಎಸ್ ಐ ಬಂಧಿಸಿದೆ ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು. ಪಾಸ್ ಪೋರ್ಟ್ ಮತ್ತಿತರ ದಾಖಲೆಗಳನ್ನು ಅವರಿಗೆ ವಾಪಸ್ ಕೊಡಬೇಕು. ಅವರು ಜರ್ಮನಿಗೆ ಮರಳಲು ಅವಕಾಶ ಕೊಡಬೇಕು ಎಂದು ಆದೇಶಿಸಿತು. ಮತ್ತೊಂದು ಪ್ರಕರಣದಲ್ಲಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಆರೋಪದ ಮೇಲೆ ಭದ್ರತಾ ಪಡೆಗಳಿಂದ 2004ರಲ್ಲಿ ಬಂಧಿತನಾಗಿದ್ದ ಹಫೀಜ್ ಅಬ್ದುಲ್ ಬಸಿತ್ ಎಂಬಾತನ ಬಿಡುಗಡೆಗೂ ಕೋರ್ಟ್ ಆದೇಶಿಸಿತು. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತನಿಖಾ ಸಂಸ್ಥೆಯ ಮಹಾ ನಿರ್ದೇಶಕರಿಗೆ ಛೀಮಾರಿ ಹಾಕಿತ್ತು.

2007: ಕೇಂದ್ರದ ಮಾಜಿ ಸಚಿವ ಶಿಬು ಸೊರೇನ್ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಅವರನ್ನು ಕೊಲೆ ಮಾಡಿದ ಆರೋಪದಿಂದ ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿತು. ಸೊರೇನ್ ವಿರುದ್ಧ 1994ರಲ್ಲಿ ನಡೆದ ಝಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಲ್ಲಿಸುವಲ್ಲಿ ಸಿಬಿಐ ವಿಫಲಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಆರೋಪಮುಕ್ತಗೊಳಿಸಿ ಆದೇಶ ಹೊರಡಿಸಿತು. ಸೊರೇನ್ ಮತ್ತು ಇತರ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಆರ್.ಎಸ್. ಸೋಧಿ ಮತ್ತು ಎಚ್.ಆರ್. ಮಲ್ಹೋತ್ರ ಅವರನ್ನೊಳಗೊಂಡ ನ್ಯಾಯಪೀಠವು, ಪ್ರಕರಣದಲ್ಲಿ ಸೊರೇನ್ ವಿರುದ್ಧ ಆರೋಪ ಸಾಬೀತುಪಡಿಸಲು ಸಿಬಿಐ ವಿಫಲವಾಗಿರುವುದಾಗಿ ತಿಳಿಸಿತು. ಪತ್ತೆಯಾದ ಶವ ಝಾ ಅವರದ್ದೆಂದು ಗುರುತಿಸಲು ಸಿಬಿಐ ವಿಫಲವಾಗಿರುವುದರಿಂದ ಈ ಮೊದಲು ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಗೊಳಿಸುವುದಾಗಿ ಹೇಳಿದ ನ್ಯಾಯಪೀಠ, ಇತರ ಆರೋಪಿಗಳಾದ ನಂದ ಕಿಶೋರ್ ಮೆಹ್ತಾ, ಶೈಲೇಂದ್ರ ಭಟ್ಟಾಚಾರ್ಯ, ಪಶುಪತಿನಾಥ ಹಾಗೂ ಅಜಯ್ ಕುಮಾರ್ ಮೆಹ್ತಾ ಅವರನ್ನು ಕೂಡಾ ಖುಲಾಸೆ ಮಾಡಿತು. ಕೆಳ ಹಂತದ ನ್ಯಾಯಾಲಯವು ಸಾಂದರ್ಭಿಕ ಸಾಕ್ಷ್ಯ ಮತ್ತು ಸಂಚಿನ ಆರೋಪದ ಮೇಲೆ ಸೊರೇನ್ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದಾಗಿ ಕೇಂದ್ರ ಸಚಿವ ಸ್ಥಾನಕ್ಕೆ ಸೊರೇನ್ ರಾಜೀನಾಮೆ ಸಲ್ಲಿಸಬೇಕಾಗಿ ಬಂತು.

2007: ಕೆಲವು ದಿನಗಳಿಂದ ಮರಳು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಣೆದಾರರು ನಡೆಸುತ್ತಿದ್ದ ಮುಷ್ಕರ ಈದಿನ ರಾತ್ರಿ ಅಂತ್ಯಗೊಂಡಿತು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರುಗಳ ಸಂಘದ ಸದಸ್ಯರು ಸಾರಿಗೆ ಸಚಿವ ಎನ್.ಚೆಲುವರಾಯಸ್ವಾಮಿ ಅವರ ನಿವಾಸದಲ್ಲಿ ಸಮಾಲೋಚನೆ ನಡೆಸಿದ ಬಳಿಕ ಮುಷ್ಕರವನ್ನು ಕೈಬಿಡಲಾಯಿತು.

2006: ಪೂರ್ವ ಉಕ್ರೇನಿನಲ್ಲಿ 170 ಮಂದಿ ಪ್ರಯಾಣಿಕರಿದ್ದ ರಷ್ಯದ ವಿಮಾನವೊಂದು ನೆಲಕ್ಕೆ ಅಪ್ಪಳಿಸಿದೆ ಎಂದು ಇಂಟರ್ ಫಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತು.

2006: ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆ ಈಡೇರಿಕೆ ವಿಚಾರದಲ್ಲಿ ಕಾಂಗ್ರೆಸ್ `ವಂಚಿಸಿದೆ' ಎಂದು ಆಪಾದಿಸಿ ಮುನಿಸಿಕೊಂಡ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ ಪಿಎಸ್) ಸದಸ್ಯರಾದ ಕೇಂದ್ರ ಕಾರ್ಮಿಕ ಸಚಿವ ಕೆ. ಚಂದ್ರಶೇಖರ ರಾವ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಹಾಯಕ ಸಚಿವ ನರೇಂದ್ರ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದರು.

2006: ತನ್ನ ಇಚ್ಛೆಗೆ ವಿರುದ್ಧವಾಗಿ ಬೇರೆ ಕಡೆ ಕೆಲಸಕ್ಕೆ ಸೇರಿದ್ದಕ್ಕಾಗಿ ಹಸೀನಾ ಎಂಬ ಯುವತಿಯ ಮೇಲೆ 1999ರಲ್ಲಿ ಆಸಿಡ್ ಎರಚಿದ್ದ ಆಕೆಯ `ಪ್ರೇಮಿ' ಜೋಸೆಫ್ ರಾಡ್ರಿಗಸ್ ಗೆ ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿದ್ದಲ್ಲದೆ ಯುವತಿಯ ಚಿಕಿತ್ಸಾ ವೆಚ್ಚ 5 ಲಕ್ಷ ರೂಪಾಯಿಗಳನ್ನೂ ಆತನೇ ಭರಿಸಬೇಕು ಎಂದು ಆದೇಶ ನೀಡಿತು. ದಾಳಿಗೆ ಒಳಗಾದ ವ್ಯಕ್ತಿ ಬದುಕಿರುವಾಗ ಇಂತಹ ಶಿಕ್ಷೆ ನೀಡಿದ್ದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಪ್ರಥಮ. 1999ರಲ್ಲಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಳದಿಪುರದಲ್ಲಿ ನಾಗಮ್ಮ ಎಂಬ ಯುವತಿಯ ಮೇಲೆ ನಡೆದ ಆಸಿಡ್ ದಾಳಿಯಲ್ಲಿ ಆಕೆ ಮೃತಳಾದ ಹಿನ್ನೆಲೆಯಲ್ಲಿ ಆರೋಪಿ ಶಿವಕುಮಾರ್ ಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

2006: ಬೆಂಗಳೂರಿನಲ್ಲಿ ನಡೆದ 10ನೇ ದಕ್ಷಿಣ ಏಷ್ಯಾ ಫೆಡರೇಷನ್ (ಎಸ್ಎಎಫ್) ಕ್ರೀಡಾಕೂಟದಲ್ಲಿ ಪಣಕ್ಕೆ ಇಡಲಾದ ಎಲ್ಲ ಏಳು ಸ್ವರ್ಣ ಪದಕಗಳನ್ನೂ ಭಾರತದ ಬ್ಯಾಡ್ಮಿಂಟನ್ ತಾರೆಯರು ಗೆದ್ದುಕೊಂಡರು.
2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಶೇಕಡಾ 27 ಮೀಸಲಾತಿ ನೀಡುವ ಸರ್ಕಾರದ ನಿಲುವನ್ನು ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳು ನವದೆಹಲಿಯ ರಸ್ತೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಇಳಿದರು. ಇದರಿಂದಾಗಿ ವಿವಾದಾತ್ಮಕ ಮೀಸಲಾತಿ ಮಸೂದೆ ವಿರೋಧಿ ಚಳವಳಿಗೆ ಮತ್ತೆ ಚಾಲನೆ ದೊರೆಯಿತು.

2006: ವಿಜ್ಞಾನ ಮತ್ತು ಪರಿಸರ ಕೇಂದ್ರವು (ಸಿಎಸ್ ಇ) ನೀಡಿರುವ ವರದಿ `ಪೆಪ್ಸಿ' ಮತ್ತು `ಕೋಕಾಕೋಲಾ' ಕಂಪೆನಿಗಳ ತಂಪು ಪಾನೀಯಗಳಲ್ಲಿ ಕೀಟನಾಶಕ ಅಂಶ ಇರುವುದನ್ನು ಖಚಿತವಾಗಿ ಸಾಬೀತು ಪಡಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತು.

1993: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಗುಂಡೂರಾವ್ (56) ನಿಧನರಾದರು.

1987: ವಿಮಾನ ಸಾಗಣೆ ಹಡಗು `ವಿರಾಟ್' ನೌಕಾದಳಕ್ಕೆ ಸೇರ್ಪಡೆಯಾಯಿತು.

1979: ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವರು 6ನೇ ಲೋಕಸಭೆಯನ್ನು ವಿಸರ್ಜಿಸಿದರು.

1967: ಅಮೆರಿಕದ ಗ್ರಂಥಿ ತಜ್ಞ ಗ್ರೆಗೊರಿ (ಗುಡ್ವಿನ್) ಪಿನ್ ಕಸ್ ತಮ್ಮ 64ನೇ ವಯಸ್ಸಿನಲ್ಲಿ ಮೃತರಾದರು. ಇವರ ಸಂಶೋಧನೆಗಳು ಮುಂದೆ ಮೊತ್ತ ಮೊದಲ ಪರಿಣಾಮಕಾರಿಯಾದ ಜನನ ನಿಯಂತ್ರಣ ಗುಳಿಗೆ (ಗರ್ಭ ನಿರೋಧಕ ಗುಳಿಗೆ) ಅಭಿವೃದ್ಧಿಗೆ ಮೂಲವಾದವು.

1945: ಸಾಮಾಜಿಕ, ವೈದ್ಯಕೀಯ, ನಿಘಂಟು ಹೀಗೆ ವಿವಿಧ ಪ್ರಾಕಾರಗಳಲ್ಲಿ ಸುಮಾರು 425ಕ್ಕೂ ಹೆಚ್ಚು ಸಣ್ಣ ಸಣ್ಣ ಕೃತಿಗಳನ್ನು ರಚಿಸಿರುವ ಬೆ.ಗೊ. ರಮೇಶ್ ಅವರು ಗೋವಿಂದರಾಜು- ರಾಧಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸೋಗೆಯಲ್ಲಿ ಜನಿಸಿದರು.

1922: ಐರಿಷ್ ರಾಜಕಾರಣಿ ಮತ್ತು ಕ್ರಾಂತಿಕಾರಿ ಮೈಕೆಲ್ ಕೊಲಿನ್ಸ್ ಅವರು ಐರ್ಲೆಂಡಿನ ಕಾರ್ಕಿನಲ್ಲಿ ನಡೆದ ಘರ್ಷಣೆಯಲ್ಲಿ ರಿಪಬ್ಲಿಕನ್ ಉಗ್ರಗಾಮಿಗಳಿಂದ ಹತರಾದರು.

1907: ಮೇಡಂ ಭಿಕಾಜಿ ಕಾಮಾ ಅವರು ತಾವೇ ವಿನ್ಯಾಸಗೊಳಿಸಿದ ಭಾರತೀಯ ರಾಷ್ಟ್ರೀಯ ಧ್ವಜವನ್ನು ಜರ್ಮನಿಯ ಸ್ಟುಟ್ ಗರ್ಟಿನಲ್ಲಿ ನಡೆದ ಸೋಷಿಯಲಿಸ್ಟ್ ಕಾಂಗ್ರೆಸ್ಸಿನಲ್ಲಿ ಪ್ರದರ್ಶಿಸಿದರು. ವಿದೇಶದಲ್ಲಿ ಭಾರತೀಯ ಧ್ವಜವನ್ನು ಹೀಗೆ ಪ್ರದರ್ಶಿಸಿದ್ದು ಇದೇ ಮೊದಲು. ನಂತರ ಸಮಾಜವಾದಿ ನಾಯಕ ಇಂದುಲಾಲ್ ಯಾಜ್ಞಿಕ್ ಅವರು ಅದನ್ನು ರಹಸ್ಯವಾಗಿ ಭಾರತಕ್ಕೆ ತಂದರು. ಈಗ ಅದು ಪುಣೆಯ ಮರಾಠಾ ಮತ್ತು ಕೇಸರಿ ಲೈಬ್ರರಿಯಲ್ಲಿ ಪ್ರದರ್ಶಿತವಾಗಿದೆ.

1877: ಶ್ರೀಲಂಕಾ ಇತಿಹಾಸಕಾರ ಆನಂದ ಕೆಂಟಿಶ್ ಕೂಮಾರಸ್ವಾಮಿ (1877-1947) ಜನ್ಮದಿನ. ಭಾರತೀಯ ಕಲಾ ಇತಿಹಾಸಕಾರರಾದ ಇವರು ಭಾರತೀಯ ಸಂಸ್ಕೃತಿಯನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ ಮುಂಚೂಣಿಯ ಇತಿಹಾಸಕಾರರು.

1846: ಅಮೆರಿಕದ ಜೊತೆ ನ್ಯೂಮೆಕ್ಸಿಕೊ ವಿಲೀನಗೊಂಡಿತು.

1647: ಡೆನಿಸ್ ಪಪಿನ್ (1647-1712) ಜನ್ಮದಿನ. ಫ್ರೆಂಚ್ ಸಂಜಾತ ಬ್ರಿಟಿಷ್ ಭೌತತಜ್ಞನಾದ ಈತ ಪ್ರೆಷರ್ ಕುಕ್ಕರನ್ನು ಸಂಶೋಧಿಸಿದ.

Advertisement